ಕಾರ್ಕಳ: ಯಕ್ಷಗಾನದ ಮೂಲಕ ಮತದಾನ ಜಾಗೃತಿ
Team Udayavani, Apr 30, 2018, 7:25 AM IST
ಕಾರ್ಕಳ: ಉಡುಪಿ ಜಿ.ಪಂ. ವತಿಯಿಂದ ಸ್ವೀಪ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮತದಾನ ಜಾಗೃತಿ ಕಾರ್ಯಕ್ರಮ ಬಡಗುತಿಟ್ಟಿನ ಯಕ್ಷಗಾನದ ಕಲಾವಿದರ ತಂಡದಿಂದ ಕಾರ್ಕಳ ಬಸ್ ನಿಲ್ದಾಣ ಬಳಿ ನಡೆಯಿತು. ಮತದಾನದ ಕುರಿತ ಎಲ್ಲ ಸೂಕ್ಷ್ಮ ವಿಚಾರಗಳನ್ನು ಯಕ್ಷಗಾನದ ಅರ್ಥಗಾರಿಕೆ ಮೂಲಕ ಜನತೆಗೆ ತಿಳಿಸಲಾಯಿತು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಅವಕಾಶವಿದೆ. ಯಾರಿಗೂ ಹಣ ನೀಡಬಾರದು, ಪಡೆಯಬಾರದು. ಹೀಗೆ ಮಾಡಿದಲ್ಲಿ ಕಠಿನ ಶಿಕ್ಷೆ ವಿಧಿಸಲಾಗುತ್ತದೆ. ಹೆಂಡದ ಆಮಿಷ ಸಲ್ಲದು, ಮನುಷ್ಯ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡುವ ಹೆಂಡ ನೀಡುವಾತ ಗೆದ್ದರೆ ಮುಂದೆ ನಮ್ಮ ನಾಡು ಅಧಃಪತನವಾದೀತು. ಅಂತಹ ಅಭ್ಯರ್ಥಿಗಳು ಕಂಡುಬಂದರೆ ಅವರ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಎಲ್ಲರೂ ತಮ್ಮ ಗುರುತಿನ ಚೀಟಿ ಅಥವಾ ಪ್ರಮುಖ ದಾಖಲೆ ಹಿಡಿದುಕೊಂಡು ಮತದಾನ ಕೇಂದ್ರಕ್ಕೆ ತೆರಳಬೇಕು. ಮತಯಂತ್ರದ ಮೂಲಕ ಹಾಕಿದ ಮತವನ್ನು ಖಾತ್ರಿಪಡಿಸುವ ಯೋಜನೆ ಕೂಡ ಈ ಬಾರಿ ಮಾಡಲಾಗಿದೆ. ದಣಿದವರಿಗೆ ನೀರಿನ ವ್ಯವಸ್ಥೆ ಕೂಡ ಇದೆ. ಹೀಗೆ ಎಲ್ಲ ವಿಚಾರಗಳನ್ನು ಜನತೆಯ ಮುಂದಿಟ್ಟು ಜಾಗೃತಿ ಮೂಡಿಸಲಾಯಿತು.
ನರಸಿಂಹ ತುಂಗ ನಿರ್ದೇಶನದ ಈ ಯಕ್ಷಗಾನಕ್ಕೆ ಸತೀಶ್ ಕೆದ್ಲಾಯ ಭಾಗವತಿಕೆ ನಡೆಸಿದ್ದರು. ದೇವದಾಸ್ ಕೂಡ್ಗಿ ಮದ್ದಳೆಗಾರರಾಗಿ, ವಿಷ್ಣುದಾಸ್ ಗೋರ್ಪಾಡಿ, ವಿಠ್ಠಲ ಕಥ್ಕುಂಜೆ ಮತ್ತು ಅಭಿನವ ತುಂಗ ಮುಂತಾದವರು ಕಲಾವಿದರಾಗಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ