ಬೆಳೆ ವಿಮೆ ಪರಿಹಾರಕ್ಕೆ ಕಾಯಲೇಬೇಕು


Team Udayavani, Jun 21, 2019, 5:59 AM IST

crop-insurance

ಕುಂದಾಪುರ: ಸಹಕಾರಿ ಸಂಘಗಳಿಂದ ಹಾಗೂ ಬ್ಯಾಂಕ್‌ಗಳಿಂದ ಬೆಳೆ ಸಾಲ ಪಡೆಯುವಾಗ ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಗೆ ಸೇರ್ಪಡೆ ಕಡ್ಡಾಯ ಮಾಡಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ಬೆಳೆವಿಮೆ ಮಾಡಿಸಿಕೊಳ್ಳಲು ಜೂ. 30 ಗಡುವು ನೀಡಲಾಗಿದ್ದು ಕಳೆದ ವರ್ಷದ ವಿಮಾ ಹಣವೇ ಬಂದಿಲ್ಲ. ಈ ವರ್ಷ ಕಡ್ಡಾಯ ಮಾಡಲಾಗುತ್ತಿದೆ ಎಂಬ ಅಪಸ್ವರ ರೈತರಿಂದ ಕೇಳಿ ಬರುತ್ತಿದೆ. ಆದರೆ ಜು. 1ರಿಂದ ಜೂ. 30 ವಿಮಾ ಅವಧಿಯಾಗಿದ್ದು ಬಳಿಕವಷ್ಟೇ ವಿಮಾ ಹಣ ಪಾವತಿಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕೇಂದ್ರದ ಯೋಜನೆ

ಪ್ರಧಾನಮಂತ್ರಿ ಫ‌ಸಲು ವಿಮಾ ಕೇಂದ್ರ ಸರಕಾರದ ಯೋಜನೆ. ಪಂಚಾಯತ್‌ಗಳನ್ನು ವಿಮಾ ಘಟಕ ಎಂದು ಪರಿಗಣಿಸಲಾಗಿದ್ದು, ವಿಮೆ ಮಾಡಿಸಿ ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿ ಉಂಟಾದಾಗ ಪರಿಹಾರ ನೀಡಲಾಗುತ್ತದೆ. ನಿರ್ಧರಿತ ಬೆಳೆಯ ಫ‌ಸಲಿನ ಮೌಲ್ಯದ ಮೇಲೆ ವಿಮೆ ಕಂತು ನಿರ್ಧಾರವಾಗುತ್ತದೆ. ಶೇ.40ರಲ್ಲಿ ಕಂತಿನ ಶೇ.5ನ್ನು ಫ‌ಲಾನುಭವಿ; ಉಳಿದ ಶೇ.35ನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮವಾಗಿ ಭರಿಸುತ್ತವೆ.

ರೈತರಿಗೆ ಏನು ಲಾಭ

ಸರಕಾರ ರೈತರ ಪರವಾಗಿ ವಿಮಾ ಕಂಪೆನಿಗೆ ಹಣ ಪಾವತಿಸುವ ಬದಲು ನೇರ ರೈತರಿಗೇ ಸಬ್ಸಿಡಿ ರೂಪದಲ್ಲಿ ಕೊಡಬಹುದು ಎಂಬ ವಾದವಿದೆ. ಅತಿವೃಷ್ಟಿಯಿಂದಾಗಿ 1 ಹೆಕ್ಟೇರ್‌ ತೋಟ ಸಂಪೂರ್ಣ ನಾಶವಾದರೆ ಪ್ರಾಕೃತಿಕ ವಿಕೋಪ ನಿಧಿಯಿಂದ ಹೆಚ್ಚೆಂದರೆ 15 ಸಾವಿರ ರೂ. ಪರಿಹಾರ ದೊರೆಯುತ್ತದೆ. ಆದರೆ ವಿಮೆ ಮಾಡಿಸಿದರೆ 1.28 ಲಕ್ಷ ರೂ.ವರೆಗೆ ಪರಿಹಾರ ದೊರೆಯುತ್ತದೆ. ಮಳೆಹಾನಿ ಪರಿಹಾರ ಹಾಗೂ ವಿಮಾ ಪರಿಹಾರ ಎರಡನ್ನೂ ಪಡೆದುಕೊಳ್ಳಲು ಅವಕಾಶ ಇದೆ. ಆದ್ದರಿಂದ ಹೆಚ್ಚಿನ ಜನರು ಇದರಲ್ಲಿ ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕೆಂದೇ ಸರಕಾರ ದೊಡ್ಡ ಮೊತ್ತ ಪಾವತಿಸಿ ರೈತರಿಂದ ಸಣ್ಣ ಮೊತ್ತ ಹಾಕಿಸುತ್ತದೆ.

ಪರಿಹಾರ

2018ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆ ಹಾನಿ ಪರಿಹಾರ ಬಾಬ್ತು 7.18 ಕೋ.ರೂ.ಗಳನ್ನು 9 ಸಾವಿರ ಜನರಿಗೆ ವಿತರಿಸಲಾಗಿದೆ. 350 ಜನರಿಗೆ ಸುಮಾರು 15 ಲಕ್ಷ ರೂ.ಗಳಷ್ಟು ಪರಿಹಾರ ತಾಂತ್ರಿಕ ಕಾರಣದಿಂದ ಪಾವತಿಗೆ ಬಾಕಿಯಿದೆ. ಅದೇ ಹವಾಮಾನ ಆಧಾರಿತ ಬೆಳೆ ವಿಮೆಯಾದರೆ ಇದಕ್ಕಿಂತ ಐದಾರು ಪಟ್ಟು ಹೆಚ್ಚು ಮೊತ್ತ ದೊರೆಯುತ್ತದೆ. ದ.ಕ. ಜಿಲ್ಲೆಯಲ್ಲಿ 2018-19ರಲ್ಲಿ ಪ್ರಾಕೃತಿಕ ವಿಕೋಪ ನಿಧಿಯಲ್ಲಿ 50,010 ಜನರಿಗೆ 50.09 ಕೋ.ರೂ. ಪರಿಹಾರ ಬಂದಿದೆ. ಹವಾಮಾನ ಆಧಾರಿತ ಫ‌ಸಲು ವಿಮೆಯಲ್ಲಿ 2017-18ರಲ್ಲಿ 945 ಜನರಿಗೆ 3.5 ಕೋ.ರೂ. ಪರಿಹಾರ ನೀಡಲಾಗಿದೆ. ವಿಮೆಗೆ ಒಟ್ಟು ರೈತರ ಪಾಲು ಇದ್ದುದು 42 ಲಕ್ಷ ರೂ.

ಬೆಳೆವಿಮೆ

2016-17ನೇ ಸಾಲಿನಲ್ಲಿ (ಆವರಣದಲ್ಲಿ 2017-18ನೇ ಸಾಲಿನ ವಿವರ) ಕಾರ್ಕಳ ತಾಲೂಕಿನಲ್ಲಿ ಅಡಿಕೆಗೆ 1,036 (324) ಜನರಿಗೆ 39 ಲಕ್ಷ ರೂ. (32 ಲಕ್ಷ ರೂ.), ಕಾಳುಮೆಣಸಿಗೆ 67 (22) ಜನರಿಗೆ 1.13 ಲಕ್ಷ ರೂ. (42ಸಾವಿರ ರೂ.), ಕುಂದಾಪುರ ತಾಲೂಕಿನಲ್ಲಿ ಅಡಿಕೆಗೆ 2,436 (929) ಜನರಿಗೆ 67.8 ಲಕ್ಷ ರೂ.(68.33 ಲಕ್ಷ ರೂ.), ಕಾಳುಮೆಣಸು 168 (52) ಜನರಿಗೆ 1.43 ಲಕ್ಷ ರೂ.(1.61 ಲಕ್ಷ ರೂ.), ಉಡುಪಿ ತಾಲೂಕಿನಲ್ಲಿ ಅಡಿಕೆಗೆ 1,473 (397) ಜನರಿಗೆ 74.02 ಲಕ್ಷ ರೂ.(8.64 ಲಕ್ಷ ರೂ.), ಕಾಳುಮೆಣಸು 44 (7) ಜನರಿಗೆ 81 ಸಾವಿರ ರೂ. (8 ಸಾವಿರ ರೂ.) ಪರಿಹಾರ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅಡಿಕೆಗೆ 893, ಕಾಳುಮೆಣಸಿಗೆ 28, ಕುಂದಾಪುರ ತಾಲೂಕಿನಲ್ಲಿ ಅಡಿಕೆಗೆ 1,119 ಮಂದಿಗೆ, ಕಾಳುಮೆಣಸು 48 ರೈತರಿಗೆ, ಉಡುಪಿ ತಾಲೂಕಿನಲ್ಲಿ ಅಡಿಕೆ 957 ರೈತರಿಗೆ, ಕಾಳುಮೆಣಸು ಬೆಳೆದ 23 ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ.ಕ.ದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಪ್ರಕರಣಗಳು ಒಟ್ಟಾಗಿ 8,350 ಇವೆ.

ಗೊಂದಲ ಇದೆ

ಕಳೆದ ವರ್ಷದ ಮಳೆಗಾಲದಲ್ಲಿ ನಾಶವಾದ ಕೃಷಿಗೇ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಾರಿ ಮತ್ತೆ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲದ ಜತೆಗೆ ಬೆಳೆ ವಿಮೆ ಕಡ್ಡಾಯ ಮಾಡಲಾಗುತ್ತಿದೆ ಎನ್ನುವ ಗೊಂದಲ ರೈತರಲ್ಲಿದೆ.
-ಗಜಾನನ ವಝೆ ಮುಂಡಾಜೆ, ಪ್ರಗತಿಪರ ಕೃಷಿಕ
ಜೂ. 30ರ ವರೆಗೆ ಕಾಲಾವಕಾಶ

ಜು. 1ರಿಂದ ಜೂ. 30ರ ವರೆಗೆ ವಿಮಾ ಕಾಲಾವಧಿ ಇದೆ. ಆದ್ದರಿಂದ ಜುಲೈ ತಿಂಗಳಲ್ಲಿ ಎಲ್ಲ ಪರಿಹಾರ ಪ್ರಕ್ರಿಯೆಗಳೂ ವಿಮಾ ಕಂಪೆನಿ ಮೂಲಕ ನಡೆಯಲಿವೆ. ಈ ಕುರಿತು ರೈತರಿಗೆ ಯಾವುದೇ ಗೊಂದಲ ಅನಗತ್ಯ. ಅಡಿಕೆ ಮೊದಲಾದ ಬೆಳೆಗೆ ಮಳೆಗಾಲ ಹಾಗೂ ಬೇಸಗೆ ಎರಡೂ ಅವಧಿಯಲ್ಲಿ ಹಾನಿ ಸಂಭವಿಸುವುದರಿಂದ ಒಮ್ಮೆಲೇ ಪರಿಹಾರ ಸಮಯವನ್ನು ಇಡಲಾಗಿದೆ.
– ನಿಧೀಶ್‌ ಹೊಳ್ಳ, ಸಹಾಯಕ ತೋಟಗಾರಿಕಾ ಅಧಿಕಾರಿ, ಉಡುಪಿ ಜಿಲ್ಲೆ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.