ಕೋಟೇಶ್ವರ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿಯೇ ಸವಾಲು
ರಾ. ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಮೂಟೆಗಟ್ಟಲೆ ತ್ಯಾಜ್ಯ, ಸಾಂಕ್ರಾಮಿಕ ರೋಗ ಭೀತಿ
Team Udayavani, Oct 1, 2019, 5:24 AM IST
ಕೋಟೇಶ್ವರ: ಸ್ವಚ್ಛ ಗ್ರಾಮ ಪರಿಕಲ್ಪನೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವಲ್ಲಿ ಕೆಲವೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ತೊಡಕಾಗುತ್ತಿದ್ದರೂ, ಸ್ವತ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ವಿಲೇವಾರಿಗೊಳಿಸುತ್ತಾರೆ. ಆದರೆ ಮತ್ತೆ ಮೂಟೆಗಟ್ಟಲೇ ತ್ಯಾಜ್ಯ ಬಂದು ಸೇರುತ್ತಿರುವುದು ಸವಾಲಾಗಿದ್ದು, ಅದಕ್ಕೊಂದು ಉದಾಹರಣೆಯಾಗಿದೆ ಕೋಟೇಶ್ವರ ಮುಖ್ಯ ರಸ್ತೆಯ ಸರ್ವೀಸ್ ರೋಡ್ನಲ್ಲಿ ಎಸೆಯಲಾಗಿರುವ ಬಾರಿ ಪ್ರಮಾಣದ ತ್ಯಾಜ್ಯ.
ನುಂಗಲಾರದ ತುತ್ತು
ಕಳೆದ ಹಲವು ತಿಂಗಳಿನಿಂದ ಬ್ಯಾನರ್ ಸಹಿತ ಗ್ರಾ.ಪಂ.ನಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ತ್ಯಾಜ್ಯ ಎಸೆಯುದರಿಂದ ಉಂಟಾಗುತ್ತಿರುವ ದುಷ್ಪರಿಣಾಮ, ಸಾಂಕ್ರಾಮಿಕ ರೋಗಗಳ ಬಾಧೆ ಬಗ್ಗೆ ಮಾಹಿತಿ ನೀಡಲಾಗಿದ್ದರೂ ಮನಬಂದಂತೆ ತ್ಯಾಜ್ಯ ಎಸೆಯುತ್ತಿರುವುದು ಪಂಚಾಯತ್ಗೆ ನುಂಗಲಾರದ ತುತ್ತಾಗಿದೆ.
ಇಲ್ಲಿನ ರಾ. ಹೆದ್ದಾರಿಯ ಹಿಂದೂ ರುದ್ರಭೂಮಿ ಪಾರ್ಶ್ವದಲ್ಲಿ ಮೂಟೆಗಟ್ಟಲೇ ತ್ಯಾಜ್ಯ ಕಂಡುಬಂದಿದ್ದು ಅದಕ್ಕೂ ಮಿಗಿಲಾಗಿ ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಬಸ್ ಕಾಯುವ ಜಾಗದ ಪರಿಸರದಲ್ಲಿ ಮುಖ್ಯರಸ್ತೆಯಲ್ಲಿಯೂ ಕೊಳಚೆ ತ್ಯಾಜ್ಯ ಪದಾರ್ಥಗಳನ್ನು ಎಸೆಯಲಾಗಿದೆ.
ಸಾಂಕ್ರಾಮಿಕ ರೋಗ ಭೀತಿ
ಡೆಂಗ್ಯೂ, ಟೈಫಾಯ್ಡ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಅಲ್ಲಲ್ಲಿ ಕಂಡು ಬರುತ್ತಿವೆ. ತ್ಯಾಜ್ಯದ ಪರಿಸರದಲ್ಲಿ ನಿಲ್ಲುವ ನೀರಿನಿಂದಾಗಿ ಕಸ ಕಡ್ಡಿಗಳು ಕೊಳೆಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇಲ್ಲಿನ ಜನರದ್ದು. ಜತೆಗೆ ಸೊಳ್ಳೆಗಳ ಕಾಟವೂ ಅಧಿಕವಾಗಿದ್ದು ಜನರು ಆತಂಕದಲ್ಲೇ ಬದುಕುವಂತಾಗಿದೆ.
ಕೋಟೇಶ್ವರದಿಂದ ಕಟೆRರೆ ಸಾಗುವ ಇಂಡಸ್ಟ್ರಿಯಲ್ ಏರಿಯಾ ಪರಿಸರದಲ್ಲೂ ತ್ಯಾಜ್ಯ ಎಸೆಯಲಾಗಿದೆ. ಈ ಸಮಸ್ಯೆಗೆ ಶೀಘ್ರ ಪರಿ ಹಾರ ನೀಡುವಂತೆ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಖೇದಕರ
ಒಂದಿಷ್ಟು ಕಾಲ ಕೋಟೇಶ್ವರ ಗ್ರಾ.ಪಂ. ಅಲ್ಲಿನ ನೌಕರರ ಸಹಕಾರದಿಂದ ರಾತ್ರಿ ಹೊತ್ತಿನಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಪಡೆ ರಚಿಸಿ ಆ ಬಗ್ಗೆ ಜಾಗೃತಿ ವಹಿಸಿತ್ತು. ಆದರೆ ಈಗ ಮತ್ತೇ ತ್ಯಾಜ್ಯ ಎಸೆಯಲಾಗಿರುವುದು ಖೇದಕರ.
–ಸುಬ್ರಹ್ಮಣ್ಯ ಶೆಟ್ಟಿಗಾರ್,
ಗ್ರಾಮಸ್ಥರು
ಸವಾಲಾಗಿದೆ
ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದ್ದರು ಪದೆಪದೇಈ ಕೃತ್ಯ ಎಸಗುತ್ತಿರುವುದು ಗ್ರಾ.ಪಂ.ಗೆ ಸವಾಲಾಗಿದೆ. ಪುರಸಭೆಯ ಅಧಿಕಾರಿಗಳನ್ನು ಭೇಟಿಮಾಡಿ ಜಪ್ತಿಯಲ್ಲಿನ ಡಂಪಿಂಗ್ ಯಾರ್ಡ್ಗೆ ಕಸ ವಿಲೇವಾರಿಗೆ ಕೋರಲಾಗುವುದು. ಅ.2ರಂದು ಮತ್ತೆ ವಿವಿಧ ಸಂಘಟನೆಗಳ ಸಹಕಾರದಿಂದ ಶ್ರಮದಾನದ ಮೂಲಕ ತ್ಯಾಜ್ಯ ವಿಲೇವಾರಿಗೊಳಿಸಲಾಗುವುದು.
-ತೇಜಪ್ಪ ಕುಲಾಲ್,
ಪಿಡಿಒ ಕೋಟೇಶ್ವರ ಗ್ರಾ.ಪಂ.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ