ಜಲಸಂರಕ್ಷಣೆ ಇಂದಿನ ಗರಿಷ್ಠ ಆದ್ಯತೆಯಾಗಲಿ
ಅಂತರ್ಜಲ ಮಟ್ಟ ಕುಸಿತ ತಡೆ ಯತ್ನ ಅಗತ್ಯ
Team Udayavani, Jul 19, 2019, 5:19 AM IST
ಉಡುಪಿ: ನೀರಿನ ಪ್ರತಿ ಹನಿಯೂ ಅಮೂಲ್ಯ. ನೀರಿನ ಜಲಸಂಪನ್ಮೂಲ ರಕ್ಷಣೆ, ಪೋಲಾಗದಂತೆ ಬಳಸುವುದರಲ್ಲೇ ಭೂಮಿಯ ಭವಿಷ್ಯ ಅಡಗಿದೆ.
ನಿತ್ಯ ನೀರು ಲಭ್ಯತೆಗೆ ಸಮಾಜದ ಪ್ರತಿಯೊಬ್ಬರೂ ಮಳೆನೀರನ್ನು ತಡೆಹಿಡಿದು ಸಂಗ್ರಹಿಸುವ ಅಥವಾ ಭೂಗರ್ಭದಲ್ಲಿ ಇಂಗಿಸುವ ವ್ಯವಸ್ಥೆಯನ್ನು ಮಾಡಬೇಕಿದೆ.
ನೀರಿನ ಬೇಡಿಕೆ
ರಾಜ್ಯ ಜಲ ನೀತಿ ಪ್ರಕಾರ ಗ್ರಾಮಾಂತರದ ಓರ್ವ ವ್ಯಕ್ತಿಗೆ ದಿನಕ್ಕೆ 55ಲೀ., ಪಟ್ಟಣದಲ್ಲಿ ರುವವನಿಗೆ 70 ಲೀ., ನಗರ ಪ್ರದೇಶದಲ್ಲಿರು ವವನಿಗೆ 100 ಲೀ., ಮಹಾನಗರದಲ್ಲಿರುವವರಿಗೆ 135 ಲೀ. ನೀರು ಅಗತ್ಯವಿದೆ. ಭೂಮಿಯಲ್ಲಿ ಶೇ. 97ರಷ್ಟು ನೀರು ಉಪ್ಪುಗಿದ್ದು, ಶೇ. 2ರಷ್ಟು ನೀರು ಮಂಜುಗಡ್ಡೆ ಹಾಗೂ ನೀರ್ಗಲ್ಲುಗಳ ರೂಪದಲ್ಲಿದೆ. ಅಂದರೆ ಮಾನವನ ಬಳಕೆಗೆ ಸಿಗುವ ನೀರು ಕೇವಲ ಶೇ. 1ರಷ್ಟು ಮಾತ್ರ!
ನೀರಿನ ಅಭಾವ ತೀವ್ರವಾಗಲು ಕಾರಣಗಳು
– ನಗರೀಕರಣದ ನೆವದಲ್ಲಿ ಮಳೆ ಆಕರ್ಷಿಸುವ ಕಾಡು ನಾಶ, ಭೂಮಿ ತಂಪಾಗಿರಿಸುವ ಮರಗಿಡಗಳ ನಾಶ, ಜನಸಂಖ್ಯೆ ಹೆಚ್ಚಳದೊಂದಿಗೆ ಹೆಚ್ಚಿದ ನೀರಿನ ಬೆೇಡಿಕೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಕಾರಣಗಳು ನೀರಿನ ಅಭಾವ ಹೆಚ್ಚಲು ಕಾರಣವಾಗಿದೆ.
– ಕೃಷಿ ಹಾಗೂ ಸಾಮಾನ್ಯ ಬಳಕೆಗೆ ಉಪಯೋಗವಾಗುತ್ತಿದ್ದ, ಅಂತರ್ಜಲ ಹೆಚ್ಚಲು ಕಾರಣವಾಗುತ್ತಿದ್ದ ಕೆರೆಗಳು, ಗದ್ದೆಗಳನ್ನು ಕೃಷಿ ಮಾಡುವುದನ್ನು ನಿಲ್ಲಿಸಿ, ಸಮುಚ್ಚಯಗಳು, ನಗರ ವಿಸ್ತರಣೆ ಇತ್ಯಾದಿ ಆಗಿದ್ದರಿಂದ ನೀರು ಇಂಗುತ್ತಿಲ್ಲ. ನೀರಿಗಾಗಿ ಎಲ್ಲೆಡೆ ಕೊಳವೆಬಾವಿ ಕೊರೆದು ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ.
– ಹೆಚ್ಚಿದ ಕೈಗಾರಿಕೆ, ಮನುಷ್ಯ ಉಂಟುಮಾಡಿದ ತ್ಯಾಜ್ಯದಿಂದ ನೀರು ಕಲುಷಿತವಾಗುತ್ತಿರುವುದು, ನೈಸರ್ಗಿಕ ಸಂಪನ್ಮೂಲವಾದ ನೀರಿನ ಬೇಕಾಬಿಟ್ಟಿ ಬಳಕೆಯಿಂದಲೂ ಅಭಾವವಾಗಿದೆ.
ಜಲ ಸಂರಕ್ಷಣೆ ಅಭಿಯಾನದ ಭಾಗವಾಗಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವನ್ನು ‘ಉದಯವಾಣಿ’ಯು ಜಿಲ್ಲಾಡಳಿತ, ಜಿ.ಪಂ.,
ನಿರ್ಮಿತಿ ಕೇಂದ್ರ, ಎಂಜಿಎಂಕಾಲೇಜಿನ ಸಹಭಾಗಿತ್ವದಲ್ಲಿ ಜು. 20ರ ಬೆಳಗ್ಗೆ
9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ
ನಡೆಸಲಿದ್ದು, ಸಾರ್ವಜನಿಕರು ಭಾಗವಹಿಸಬಹುದು.
ಜಾಗೃತಿ ಅಗತ್ಯ
ನೀರಿನ ಹಿತಮಿತ ಬಳಕೆಯ ಬಗ್ಗೆ ಜನರಲ್ಲಿ ಈ ಕ್ಷಣದಿಂದಲೇ ಅರಿವು ಮೂಡಬೇಕು. ಮಳೆನೀರನ್ನು ಶೇಖರಿಸಿಟ್ಟುಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ ಬೇಸಗೆ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ನೀರು ಶೇಖರಣೆಯಲ್ಲಿ ಹಲವಾರು ವಿಧಾನಗಳಿದ್ದು, ವೆಚ್ಚವೂ ಅತ್ಯಲ್ಪವಾಗಿದೆ. ಈ ಬಗ್ಗೆ ಪ್ರತಿ ಮನೆಯಲ್ಲೂ ಜಾಗೃತಿಯಾಗಬೇಕು.
-ಜೋಸೆಫ್ ಜೆ.ಎಂ. ರೆಬೆಲ್ಲೊ, ಜಲತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್