ಖಾಸಗಿ ಕಾರ್ಯಕ್ರಮಕ್ಕೆ ಪುರಸಭೆಯಿಂದ ನೀರು!

ಹೆಚ್ಚುವರಿ ನೀರು ಬೇಕಾಗುವವರಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ

Team Udayavani, Jan 24, 2020, 5:14 AM IST

2301KDLM16PH

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಎಂತಹ ಬೇಸಗೆಯೇ ಇರಲಿ ಇಲ್ಲಿಯಂತೂ ಕುಡಿಯಲು ಧಾರಾಳ ನೀರಿರುತ್ತದೆ. ಇನ್ನು ಮುಂದೆಯಂತೂ 24 ತಾಸು ನೀರು ನೀಡಲು 35.5 ಕೋ.ರೂ.ಗಳ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಆದರೆ ಕುಡಿಯಲು ಕೊಡುವ ನೀರು ದುರ್ಬಳಕೆ ಯಾಗಬಾರದು ತಾನೆ? ಅದಕ್ಕಾಗಿ ಪುರಸಭೆ ಒಂದು ಪರಿಹಾರೋಪಾಯ ಕಂಡುಕೊಂಡಿದೆ. ಕುಡಿಯುವ ನೀರಿನ ಮಿತಿಮೀರಿದ ಖರ್ಚಿಗೆ ಕಡಿವಾಣ ಹಾಕುವ ಸಲುವಾಗಿ ಹೆಚ್ಚುವರಿ ನೀರು ಬೇಕಾಗುವವರಿಗೆ ಟ್ಯಾಂಕರ್‌ನಲ್ಲಿ ನೀರು ನೀಡಲು ನಿರ್ಧರಿಸಿದೆ.

ಜಪ್ತಿಯಿಂದ ನೀರು
ಪುರಸಭೆಗೆ ಜಪ್ತಿಯಿಂದ ಜಂಬೂ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ಬರುತ್ತದೆ. ಹಾಗೆ ನೀರು ತರುವಾಗ ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳ ಜನರಿಗೂ ನೀರು ವಿತರಿಸಲಾಗುತ್ತದೆ. ಪುರಸಭೆ ವ್ಯಾಪ್ತಿಯ ಜನರಿಗೂ ಈ ನೀರೇ ಸಾಕಾಗುತ್ತದೆ. ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ 3 ಸಾವಿರ ನೀರಿನ ಸಂಪರ್ಕಗಳಿವೆ. ಇನ್ನು ಇದು ದುಪ್ಪಟ್ಟು ಆಗಲಿದ್ದು ದಿನವಿಡೀ ನೀರು ಒದಗಿಸಲು ಹೊಸ ಯೋಜನೆ ಕಾಮಗಾರಿ ನಡೆಯುತ್ತಿದೆ. 3,153 ನೀರಿನ ಹೊಸ ಸಂಪರ್ಕದ ಗುರಿಯಲ್ಲಿ 2,650 ಹೊಸ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿ ಆಗಿದೆ.

5 ಬಾವಿಗಳು
ಪುರಸಭೆ ವ್ಯಾಪ್ತಿಯಲ್ಲಿ ಆನೇಕ ಬಾವಿಗಳು ಇದ್ದು ಹೆಚ್ಚಿನವು ನಿರುಪಯುಕ್ತವಾಗಿವೆ. ಪಾಳುಬಾವಿಗಳಾಗುತ್ತಿವೆ. ಈ ಪೈಕಿ ಧಾರಾಳ ನೀರಿರುವ 5 ಬಾವಿಗಳನ್ನು ಸ್ವತ್ಛಗೊಳಿಸಿ ನೀರನ್ನು ಕುಡಿಯಲು ಯೋಗ್ಯವಾಗಿಸಲಾಗಿದೆ. ಎಲ್ಲ ಬಾವಿಗಳಿಗೂ ಪಂಪ್‌ ಅಳವಡಿಸಲಾಗಿದೆ. ನಾನಾಸಾಹೇಬ್‌ ವಾರ್ಡ್‌, ದತ್ತಾತ್ರೇಯ ಫ್ಲಾಟ್‌ ಬಳಿ, ಪೊಲೀಸ್‌ ಕ್ವಾರ್ಟರ್ಸ್‌ ಬಳಿ ಮೊದಲಾದೆಡೆ ಬಾವಿಗಳಿವೆ. ಈ ಎಲ್ಲವುಗಳಿಂದ ನೀರು ಪಡೆಯಬಹುದು. ಇದು ಸ್ವತ್ಛ ಕುಂದಾಪುರ ಸುಂದರ ಕುಂದಾಪುರ ಕನಸಿಗೂ ಪೂರಕವಾಗಿ ಮಾಡಲಾಗಿದೆ. ಸ್ವತ್ಛತೆಗೆ ಆದ್ಯತೆ ನೀಡಿ, ಸಮಾರಂಭಗಳಲ್ಲಿ ಶುಚಿತ್ವ ಕಾಪಾಡಲು ಈ ನೀರು ಬಳಸಬಹುದು ಎನ್ನುವುದು ಯೋಚನೆ.

ಸಮಾರಂಭಗಳಿಗೆ
ನೂರಿನ್ನೂರು ಜನ ಸೇರುವ ಸಮಾರಂಭಗಳಿಗೆ ನೀರಿನ ಅವಶ್ಯಕತೆಯಿದ್ದಾಗ ನಿರ್ದಿಷ್ಟ ಕನಿಷ್ಟ ಮೊತ್ತ ಪಾವತಿಸಿ ನೀರು ಪಡೆಯಬಹುದು. ಇದಕ್ಕಾಗಿ ಟ್ಯಾಂಕರ್‌ಗಳನ್ನು ಗೊತ್ತುಪಡಿಸಲಾಗಿದ್ದು ಆ ಟ್ಯಾಂಕರ್‌ನ ಬಾಡಿಗೆ ಹಾಗೂ ವಿದ್ಯುತ್‌ ಬಿಲ್‌ ಬಾಬ್ತು ಪುರಸಭೆಗೆ ಪಾವತಿಸಿ ನೀರು ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ಅಗ್ನಿ ಶಾಮಕ ದಳಕ್ಕೆ
ನೀರಿನ ಪೈಪ್‌ಲೈನ್‌ನಲ್ಲಿ ಎರಡು ಕಡೆ ಪಾಯಿಂಟ್‌ಗಳನ್ನು ಮಾಡಿ ಅಗ್ನಿಶಾಮಕ ದಳಕ್ಕೆ ಬಿಟ್ಟುಕೊಡಲು ಚಿಂತಿಸಲಾಗಿದೆ. 24 ತಾಸು ಕೂಡಾ ಇದರಲ್ಲಿ ನೀರು ಇರಲಿದ್ದು ಅಗ್ನಿಶಾಮಕ ದಳದವರು ಯಾವಾಗ ಬೇಕಾದರೂ ಈ ಪಾಯಿಂಟ್‌ಗಳಲ್ಲಿ ನೀರು ತುಂಬಿಸಿಕೊಳ್ಳಬಹುದು. ಅಷ್ಟಲ್ಲದೇ 5 ಬಾವಿಗಳ ಪೈಕಿ ಒಂದು ಬಾವಿಯನ್ನು ಪೂರ್ಣಪ್ರಮಾಣದಲ್ಲಿ ಅಗ್ನಿಶಾಮಕ ದಳದ ಉಪಯೋಗಕ್ಕೆ ಮೀಸಲಿರಿಸುವ ಯೋಜನೆಯೂ ಇದೆ. ಪುರಸಭೆ ವ್ಯಾಪ್ತಿಗಷ್ಟೇ ಅಲ್ಲ; ಅಗ್ನಿ ಶಾಮಕ ದಳದವರು ಅಗ್ನಿ ಅನಾಹುತಕ್ಕೆ ಈ ಬಾವಿಯ ನೀರನ್ನು ಬಳಸಿಕೊಳ್ಳಲು ಅನುವಾಗುವಂತೆ ಅದಕ್ಕೆ ಪಂಪ್‌ ಅಳವಡಿಸಲಾಗಿದೆ.

ಪಂಪ್‌ ಅಳವಡಿಸಲಾಗಿದೆ
ನಗರದ ಐದು ಬಾವಿಗಳನ್ನು ಸ್ವತ್ಛಗೊಳಿಸಿ ಅವುಗಳಿಗೆ ಪಂಪ್‌ ಅಳವಡಿಸಲಾಗಿದೆ. ನಗರದ ಜನತೆಯ ಖಾಸಗಿ ಕಾರ್ಯಕ್ರಮ ಗಳಿಗೆ ಅಗತ್ಯವಿದ್ದರೆ ಟ್ಯಾಂಕರ್‌ ಮೂಲಕ ನೀರು ಕೊಂಡೊಯ್ಯಬಹುದು. ಹೆಚ್ಚುವರಿ ನೀರು ಬೇಕಾದಾಗ ಕುಡಿಯುವ ನೀರಿನ ದುರ್ಬಳಕೆ ಆಗುವುದೂ ತಪ್ಪುತ್ತದೆ. ಸ್ವತ್ಛತೆಗೆ ಆದ್ಯತೆಯಾಗಿ ನೀರು ನೀಡಿದಂತೆಯೂ ಆಗುತ್ತದೆ. ಬಾವಿಗಳು ಪಾಳುಬೀಳುವುದನ್ನು ತಪ್ಪಿಸಿದಂತೆಯೂ ಆಗುತ್ತದೆ. ಇಷ್ಟಲ್ಲದೇ ಅಗ್ನಿಶಾಮಕ ದಳಕ್ಕೂ ನೀರು ನೀಡಲು ಉದ್ದೇಶಿಸಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.