ನೀರಿಲ್ಲದೆ ನೂರಾರು ಎಕ್ರೆ ಗದ್ದೆ ಹಡಿಲು


Team Udayavani, Jan 3, 2019, 8:00 PM IST

hadilu-3-1.jpg

ಮೊಳಹಳ್ಳಿ: ವರ್ಷದ ಎಲ್ಲ ದಿನವೂ ಹೊಳೆಯಲ್ಲಿ ನೀರಿದ್ದರೂ, ಇಲ್ಲಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದ ಕಾರಣ ಕಳೆದ ಎರಡು ವರ್ಷಗಳಿಂದ ಮೊಳಹಳ್ಳಿಯ ಮಾವಿನಕಟ್ಟೆ ಸಮೀಪದ ಕೈಲ್ಕೆರೆ ಭಾಗದ ನೂರಾರು ರೈತರಿಗೆ ಹಿಂಗಾರು ಹಂಗಾಮಿಗೆ ನೀರಿಲ್ಲದೆ ಭತ್ತ ಬೇಸಾಯ ಮಾಡದೆ, ನೂರಾರು ಎಕರೆ ಗದ್ದೆ ಹಡಿಲು ಬಿಟ್ಟಿದ್ದಾರೆ.

ಮತ್ತೆ ವಾರಾಹಿ ಹೊಳೆಗೆ ನೀರು
ಕೈಲ್ಕೆರೆಯಲ್ಲಿರುವ ವಾರಾಹಿ ಕಾಲುವೆಯಿಂದ ವರ್ಷದ ಎಲ್ಲ ದಿನವೂ ನೀರು ಹರಿದು ಬರುತ್ತದೆ. ಆದರೆ ಇಲ್ಲಿನ ಸಣ್ಣ ಹೊಳೆಗೆ ನಿರ್ಮಿಸಿದ ಸಣ್ಣ ಕಿಂಡಿ ಅಣೆಕಟ್ಟಿನ ಹಲಗೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಎರಡು ನಾಲೆಗಳ ಈ ಭಾಗದ ಗದ್ದೆಗಳಿಗೆ ಹರಿದು ಹೋಗಬೇಕಾದ ನೀರು ಮತ್ತೆ ವಾರಾಹಿ ಹೊಳೆಗೆ ಸೇರುತ್ತಿದೆ. ಈ ಕಿಂಡಿ ಅಣೆಕಟ್ಟನ್ನು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಅನೇಕ ವರ್ಷಗಳಿಂದ ಈ ಭಾಗದ ರೈತರ ಕೃಷಿ ಪ್ರದೇಶಕ್ಕೆ ನೀರುಣಿಸುತ್ತಿತ್ತು. ಕಳೆದ 4 ವರ್ಷಗಳಿಂದ ಹಲಗೆಗಳು ನಾಶವಾಗಿದ್ದು, ಆ ಬಳಿಕ ಹೊಸದಾಗಿ ಹಲಗೆ ಅಳವಡಿಸಿಲ್ಲ. ಇದರಿಂದ ವಾರಾಹಿ ನೀರು ಪೂರೈಕೆಯಾಗತ್ತಿದ್ದರೂ ಉಪಯೋಗವಾಗದೆ ವ್ಯರ್ಥವಾಗುತ್ತಿದೆ.

ಮೋರಿ ನಿರ್ಮಿಸದೇ ಸಮಸ್ಯೆ
ವಾರಾಹಿ ಕಾಲುವೆಯಿಂದ ಬರುವ ನೀರು ಸಣ್ಣ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿ ಅಲ್ಲಿಂದ ಎರಡು ಸಣ್ಣ – ಸಣ್ಣ ನಾಲೆಗಳ ಮೂಲಕ ಈ ಪ್ರದೇಶದ ಗದ್ದೆ, ತೋಟಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಮಾವಿನಕಟ್ಟೆಯಿಂದ ಮರತ್ತೂರು ರಸ್ತೆ ಕಾಮಗಾರಿ ವೇಳೆ ಕೈಲ್ಕೆರೆಯಲ್ಲಿ ರಸ್ತೆಗೆ ಅಡ್ಡಲಾಗಿ ಮೋರಿ ನಿರ್ಮಿಸದ ಕಾರಣ ಎರಡು ಬದಿಯ ನಾಲೆಗಳು ಬಂದ್‌ ಆಗಿದ್ದು, ಇಲ್ಲಿನ ಗದ್ದೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಹಿಂಗಾರಿನಲ್ಲಿ ಕೃಷಿಯೇ ಮಾಡದೆ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ.

ನೂರಾರು ಎಕ್ರೆಗೆ ನೀರಿಲ್ಲ
ನಮ್ಮ ಕೃಷಿಗೆ ಈ ಸಣ್ಣ ಹೊಳೆಯ ನೀರೇ ಆಧಾರ. ನಾವು ಇದನ್ನೇ ನಂಬಿಕೊಂಡು ಬೇಸಾಯ ಮಾಡುತ್ತಿದ್ದೇವು. ಆದರೆ ಕಳೆದ ಕೆಲ ವರ್ಷಗಳಿಂದ ಹಲಗೆ ಅಳವಡಿಸದ ಕಾರಣ ನೀರು ಸಂಗ್ರಹವಾಗುತ್ತಿಲ್ಲ. ರಸ್ತೆ ಕೆಲಸದಿಂದಾಗಿ ಇದ್ದ ಮೋರಿಯನ್ನು ಮುಚ್ಚಿದ್ದಾರೆ. ಆಚೆ ಬದಿಗೆ ನೀರು ಹರಿದು ಹೋಗುತ್ತಿಲ್ಲ. ಇದರಿಂದ ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿಲ್ಲದೆ ತೊಂದರೆಯಾಗುತ್ತಿದೆ. ಇನ್ನಾದರೂ ಹಲಗೆ ಅಳವಡಿಸಿ, ಮೋರಿ ನಿರ್ಮಿಸುವ ಕಾರ್ಯ ಮಾಡಲಿ.
– ಸಂತೋಷ್‌ ಶೆಟ್ಟಿ, ಕೃಷಿಕ, ಕೈಲ್ಕೆರೆ, ಮೊಳಹಳ್ಳಿ

ಪರಿಶೀಲಿಸಿ ಶೀಘ್ರ ಕ್ರಮ
ಈ ಕುರಿತಂತೆ ಪಂಚಾಯತ್‌ಗೆ ಅಲ್ಲಿನ ಗ್ರಾಮಸ್ಥರು ದೂರು ನೀಡಿದ ಬಗ್ಗೆ ಮಾಹಿತಿಯಿಲ್ಲ. ದೂರು ಬಂದಿದ್ದರೆ, ಶೀಘ್ರ ಪರಿಶೀಲನೆ ನಡೆಸಿ, ಪರಿಹಾರ ಕಂಡುಕೊಳ್ಳುವ ಕುರಿತು ಕ್ರಮ ಕೈಗೊಳ್ಳಲಾಗುವುದು. 
– ಪಾವನಾ, ಪಿಡಿಒ, ಮೊಳಹಳ್ಳಿ ಗ್ರಾ.ಪಂ.

— ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.