ಕೆದೂರು, ಕುಂಭಾಸಿ ಪರಿಸರದಲ್ಲಿ ತಪ್ಪದ ನೀರಿನ ಸಮಸ್ಯೆ


Team Udayavani, Mar 17, 2018, 7:30 AM IST

1603tke1-1(imp).jpg

ಈ ಗ್ರಾ.ಪಂ.ಗಳ ವ್ಯಾಪ್ತಿಗಳಲ್ಲಿ ಕೆಲವೆಡೆ ನೀರಿಗಾಗಿ ಮೈಲು ದೂರ ನಡೆಯುವ ಸ್ಥಿತಿಯೂ ಇದೆ. ಇನ್ನು ಕೆಲವೆಡೆ ಶಾಶ್ವತ ಪರಿಹಾರವಿಲ್ಲದೇ ಟ್ಯಾಂಕರ್‌ ನೀರು ಅವಲಂಬಿಸುವ ಸ್ಥಿತಿ. ಹಾಗಾಗಿ ಈ ಬೇಸಗೆಯೂ ಸಂಕಷ್ಟ ತಂದೊಡ್ಡಿದೆ.

ತೆಕ್ಕಟ್ಟೆ (ಕೆದೂರು): ಸುಡು ಬಿಸಿಲಿಗೆ ಕೆರೆ, ಮದಗ, ಬಾವಿಗಳು ಬತ್ತಿ ಹೋಗುತ್ತಿದ್ದು, ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದು ದರಿಂದ ಕೆದೂರು, ಕುಂಭಾಶಿ ಗ್ರಾ.ಪಂ. ವ್ಯಾಪ್ತಿ ಜನರಿಗೆ ಈ ಬೇಸಗೆ ಬಲು ಕಠಿನವಾಗಲಿದೆ. ಕುಡಿಯುವ ನೀರು ಪೂರೈಕೆಯೇ ಸ್ಥಳೀಯ ಗ್ರಾ.ಪಂ.ಗಳಿಗೆ ಸವಾಲಾಗಿ ಪರಿಣಮಿಸಿದೆ. 

ಉಳ್ತೂರು ತೆಂಕಬೆಟ್ಟು , ದೇವಸ್ಥಾನಬೆಟ್ಟು, ಉಳ್ತೂರು ನವಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ತೀವ್ರತರವಾಗಿದ್ದು, ನೀರಿಗಾಗಿ ಮೈಲು ದೂರ ಕ್ರಮಿಸಬೇಕಾದ ಅನಿವಾರ್ಯ ಉದ್ಭವಿಸಿದೆ.

ಕುಡಿಯುವ ನೀರು ಪೂರೈಕೆ ಹೇಗೆ?
ಕೆದೂರು ಗ್ರಾಮದಲ್ಲಿ ತಲೆದೋರ ಬಹುದಾದ ಸಮಸ್ಯೆಗೆ ಸ್ಥಳೀಯಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಸರಕಾರದ ಮಾನದಂಡದಂತೆ (ಮೇ ತಿಂಗಳಿನ ಸಂದರ್ಭದಲ್ಲಿ ಅನುಸರಿಸುವಂಥ ಕ್ರಮ) ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ಪ್ರತಿ ವ್ಯಕ್ತಿಗೆ 45 ಲೀ. ನೀರಿನಂತೆ ಒಟ್ಟು 25 ಸಾವಿರ ಲೀ. ಪೂರೈಸುತ್ತಿದೆ.

ಕುಂಭಾಸಿ ಗ್ರಾ.ಪಂ.
ಗ್ರಾ.ಪಂ. ವ್ಯಾಪ್ತಿಯಲ್ಲಿ ವಿನಾಯಕ ನಗರದ ಸುಮಾರು 170 ಮನೆಗಳಿಗೆ ಮೀಟರ್‌ ಅಳವಡಿಸಿ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ವಿನೋದ ಶೇರಿಗಾರ್‌ ಹಾಗೂ ಗ್ರಾ.ಪಂ. ಕಚೇರಿಯ ಸಮೀಪದಲ್ಲಿ 2 ತೆರೆದ ಬಾವಿ ಮತ್ತು 2 ಬೋರ್‌ ವೆಲ್‌ಗ‌ಳಿದ್ದರೂ ಸಾಕಾಗುತ್ತಿಲ್ಲ. ಗ್ರಾಮದ ನೀರಾಳದಲ್ಲಿ ಸುಮಾರು 15 ಮನೆಗಳಿದ್ದು ಕಳೆದ ವರ್ಷ ಕುಡಿಯುವ ನೀರಿಗಾಗಿ ಟಾಸ್ಕ್ಫೋರ್ಸ್‌ ಪೈಪ್‌ಲೈನ್‌ ಅಳವಡಿಸಿತ್ತು. ಇರುವ  ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಗಾಂಧಿ ನಗರ ಮೂಡು ಗೋಪಾಡಿಯಲ್ಲಿ ಸೇರಿದಂತೆ ಸುಮಾರು 30 ಕುಟುಂಬಗಳಿಗೆ ಸಮೀಪದ ತೆರೆದ ಬಾವಿಯಿಂದ ಓವರ್‌ ಹೆಡ್‌ ಟ್ಯಾಂಕ್‌ಗೆ 25 ಸಾವಿರ ಲೀ. ರೂ. ಹರಿಸಿ ಪೂರೈಸಲಾಗುತ್ತಿದೆ.

ಪರಿಹಾರ ಕ್ರಮ 
ಪ್ರತಿ ವರ್ಷ ಎಪ್ರಿಲ್‌-ಮೇ ತಿಂಗಳಿನಲ್ಲಿ ನೀರಿನ ಅಭಾವ ಹೆಚ್ಚಾಗುವ ಹಿನ್ನೆಲೆಯಲ್ಲಿ  ಕುಂದಾಪುರ ಪುರಸಭೆಯಿಂದ ಹಂಗಳೂರು ಗ್ರಾ.ಪಂ.ಗೆ ನೀರು ಹರಿಸಲಾಗುತ್ತಿದೆ. ಕೋಟೇಶ್ವರ ಗ್ರಾ.ಪಂ. ಸಹಿತ ಕುಂಭಾಶಿ ಪರಿಸರಕೂ ಸಂಪರ್ಕ ಕಲ್ಪಿಸಿದರೆ ಶಾಶ್ವತ ಪರಿಹಾರ ಸಾಧ್ಯ ಎನ್ನುವುದು ಕುಂಭಾಸಿ ಗ್ರಾ.ಪಂ. ಉಪಾಧ್ಯಕ್ಷ ಮಹಾಬಲೇಶ್ವರ ಆಚಾರ್‌ ಅವರ ಅಭಿಪ್ರಾಯ.

ಗ್ರಾ.ಪಂ. ವ್ಯಾಪ್ತಿಯ ಉಳ್ತೂರು ತೆಂಕಬೆಟ್ಟು, ದೇವಸ್ಥಾನ ಬೆಟ್ಟು, ಉಳ್ತೂರು ನವಗ್ರಾಮಗಳಲ್ಲಿ  ಸುಮಾರು 100ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಉಲ್ಬಣಿಸುತ್ತಿದೆ. ತೀವ್ರ ನೀರಿನ ಅಭಾವವಿರುವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ವಾರಾಹಿ ಕಾಲುವೆಗೆ ಪರ್ಯಾಯವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮಾರ್ಗವನ್ನು ರೂಪಿಸಿ ನೀರು ಹರಿಸಿದರೆ ಸಮಸ್ಯೆ ಬಗೆಹರಿಯಬಹುದು. ಅದು ತುರ್ತಾಗಿ ಆಗಬೇಕಾದ ಕೆಲಸ ಎನ್ನುತ್ತಾರೆ ಕೆದೂರು ಎರಡನೇ ವಾರ್ಡ್‌ ಸದಸ್ಯ ಪ್ರಶಾಂತ್‌ ಶೆಟ್ಟಿ ಉಳ್ತೂರು .

ಮಿತ ವ್ಯಯವೇ ಪರಿಹಾರ
ಎಪ್ರಿಲ್‌ನಲ್ಲೇ ನೀರಿನ ಅಭಾವ ಎದುರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಸಂಭವನೀಯ ಬರವನ್ನು ತಡೆಯಲು ನೀರಿನ ಮಿತವ್ಯಯ ಮತ್ತು ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ

ಅಂತರ್ಜಲ ವೃದ್ಧಿ :ಕ್ರಮ ಅಗತ್ಯ
ಗ್ರಾ.ಪಂ. ವ್ಯಾಪ್ತಿಯ 1ನೇ ವಾರ್ಡ್‌ನ ಶಾನಾಡಿ, ಕೆದೂರು ಪ್ರತಾಪ ನಗರ, ಜನತಾ ಕಾಲನಿ, ಮೂಡು ಕೆದೂರು ಸಹಿತ 100 ಕುಟುಂಬಗಳಿಗೆ  3 ತೆರೆದ ಬಾವಿ, 25 ಸಾವಿರ ಲೀ. ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಎಪ್ರಿಲ್‌ನಲ್ಲೇ ಅಂತರ್ಜಲ ಸಂಪೂರ್ಣ ಬತ್ತುವುದರಿಂದ ಮುಂದಿನ ದಿನಗಳಲ್ಲಿ ವಾರಾಹಿ ಕಾಲುವೆ ನೀರನ್ನು ಶಾನಾಡಿ ಮದಗಕ್ಕೆ ಹರಿಸಿದರೆ ಸುತ್ತಲಿನ ಅಂತರ್ಜಲ ಮಟ್ಟ ವೃದ್ಧಿಯಾದೀತು.
– ಸಂಪತ್‌ ಕುಮಾರ್‌ ಶೆಟ್ಟಿ ಶಾನಾಡಿ, 
ಮಾಜಿ ಅಧ್ಯಕ್ಷ, ಗ್ರಾ.ಪಂ. ಕೆದೂರು

ಬೇಡಿಕೆ ತಕ್ಕಷ್ಟು ನೀರು
ವಾರಾಹಿ ಕಾಲುವೆ ನೀರನ್ನು ಬೆಳಗೋಡಿನ ಮೂಲಕ ನೈಸರ್ಗಿಕವಾಗಿ ತೋಡುಗಳಿಗೆ ನೀರು ಹರಿಸಿದರೆ ಗ್ರಾಮಸ್ಥರ ಬೇಡಿಕೆಗೆ ತಕ್ಕುದಾಗಿ ನೀರು ಪೂರೈಸಬಹುದು.
– ಸುರೇಶ್‌, ಪಿಡಿಒ 
ಕೆದೂರು ಗ್ರಾ.ಪಂ.

ಕೆದೂರು ಗ್ರಾ.ಪಂ. ವ್ಯಾಪ್ತಿ
– ಇರುವ ಮನೆಗಳು 925.
– ಗ್ರಾಮದ 4 ವಾರ್ಡ್‌ಗಳ ಜನಸಂಖ್ಯೆ 3,929 ಮಂದಿ.
– ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಸರಕಾರಿ ಬಾವಿ 7.
– ಹಲೂ¤ರು ಭಾಗದಲ್ಲಿ 1 ಬೋರ್‌ ವೆಲ್‌.
– ಬೆಳಗೋಡಿನಲ್ಲಿ 1 ಬಾವಿ ಇದ್ದು ಕುಡಿಯಲು ಯೋಗ್ಯವಾಗಿದೆ.

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.