ನಾಲ್ಕೂರು ಗ್ರಾ.ಪಂ.: ಜಲಮೂಲ ಸಂಪೂರ್ಣ ಬರಿದು
Team Udayavani, Jun 5, 2019, 6:00 AM IST
ಬ್ರಹ್ಮಾವರ: ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಮೂಲಗಳು ಬರಿದಾಗಿದ್ದು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪಂಚಾಯತ್ ವ್ಯಾಪ್ತಿಯ ಕಜೆR, ಹಂದಿಕಲ್ಲು, ಚಂದಾಳಕಟ್ಟೆ, ಮುದ್ದೂರು, ಮಾರಾಳಿ ಹಾಗೂ ನಂಚಾರು ಗ್ರಾಮದಲ್ಲಿ ನೀರಿನ ತೀವ್ರ ಕೊರತೆಯಾಗಿದೆ.
ಜಲಮೂಲ ಬರಿದು
ಪಂಚಾಯತ್ ವ್ಯಾಪ್ತಿಯ ಸರಕಾರಿ, ಖಾಸಗಿ ಬಾವಿಗಳು ಬರಿದಾಗಿವೆ. ನೀರಿನ ಇಶ್ರಯದ ಸೀತಾ ನದಿ ಸಂಪೂರ್ಣ ಒಣಗಿದೆ. ಈ ವರ್ಷದ ಕಡುಬೇಸಗೆಗೆ ನಂದಿಕೋಣ ಗುಂಡಿಯೂ ಬತ್ತಿದೆ.
ಟ್ಯಾಂಕರ್ ನೀರು
ಪ್ರಸ್ತುತ ಪಂಚಾಯತ್ ವತಿಯಿಂದ ಎರಡು ಟ್ಯಾಂಕರ್ಗಳಲ್ಲಿ ನೀರನ್ನು ಪೂರೈಸಲಾಗುತ್ತಿದೆ. ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾರಾಳಿ ಅವರು ಸ್ವಂತ ಖರ್ಚಿನಿಂದ ಟ್ಯಾಂಕರ್ ನೀರು ವಿತರಿಸುತ್ತಿದ್ದಾರೆ. ಇವೆಲ್ಲದಕ್ಕೂ ಮಾರಾಳಿಯ ಶೇಖರ ಹೆಗ್ಡೆ ಮತ್ತು ಮಿತ್ಯಂತರ ಮನೆಯ ಬೋರ್ವೆಲ್ ನೀರೇ ಆಧಾರವಾಗಿದೆ. ಕೆಲವು ದಿನ ಗಳಲ್ಲಿ ಮಳೆ ಬಾರದಿದ್ದರೆ ಅದೂ ಸಹ ಖಾಲಿಯಾಗಲಿದೆ.
ಅಣೆಕಟ್ಟು ವೈಫಲ್ಯ
ಮೀಯಾರು ಕಿಂಡಿ ಅಣೆಕಟ್ಟಿನ ವೈಫಲ್ಯ ಬಲು ದುಬಾರಿಯಾಗಿ ಪರಿಣಮಿಸಿದೆ. ಹಲಗೆ ಅಳವಡಿಸುವಲ್ಲಿನ ತಪ್ಪಿನಿಂದಾಗಿ ಅಮೂಲ್ಯವಾದ ನೀರು ಬಹುತೇಕ ಸೋರಿ ಹೋಗಿದೆ. ಪರಿಣಾಮ ಈಗ ಅಣೆಕಟ್ಟಿನಲ್ಲಿ ಒಂದು ಹನಿಯೂ ನೀರು ಉಳಿದಿಲ್ಲ.
ಶಾಲೆಗಳಲ್ಲಿ ನೀರಿಲ್ಲ
ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿದೆ. ಇದೇ ಸಮಸ್ಯೆಯಿಂದ ಆಂಗ್ಲ ಮಾಧ್ಯಮ ಶಾಲೆಯು ಜೂ.10ರ ವರೆಗೆ ಮುಂದೂಡಲ್ಪಟ್ಟಿದೆ.
ಫೈಬರ್ ಹಲಗೆ ಅಳವಡಿಸಿ
ಮಿಯಾರು ಕಿಂಡಿಅಣೆಕಟ್ಟಿನಲ್ಲಿ ಮರದ ಹಲಗೆ ಅಳವಡಿಸುವುದರಿಂದ ನೀರು ಸಂಪೂರ್ಣ ಸೋರಿ ಹೋಗುತ್ತದೆ. ಪರಿಣಾಮ ಇಷ್ಟೊಂದು ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಮುಂದಿನ ವರ್ಷ ಫೈಬರ್ ಹಲಗೆ ಅಳವಡಿಸುವುದು ಅತ್ಯಗತ್ಯ.
ಜತೆಗೆ ಜಲಾನಯನ ಇಲಾಖೆಯಿಂದ ನಿರ್ಮಿಸಿದ ಚಿಕ್ಕ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯೂ ಅಗತ್ಯ.
-ಸಂತೋಷ್ ಹೆಗ್ಡೆ ಮಾರಾಳಿ, ಪಂಚಾಯತ್ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು