ಕುಸಿಯುವ ಭೀತಿಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್
Team Udayavani, Jan 11, 2019, 8:10 PM IST
ಕೋಟೇಶ್ವರ: ರಾ.ಹೆದ್ದಾರಿ 66 ರಿಂದ ಕವಲೊಡೆದು ಸಾಗುವ ಬೀಜಾಡಿ ವೈ ಜಂಕ್ಷನ್ನಲ್ಲಿ ಹೆದ್ದಾರಿಗೆ ತಾಗಿಕೊಂಡಂತೆ 33 ವರ್ಷ ಹಳೆಯ ಶಿಥಿಲಗೊಂಡ ನೀರಿನ ಟ್ಯಾಂಕ್ ಇದ್ದು ಕುಸಿಯುವ ಭೀತಿ ಎದುರಿಸುತ್ತಿದೆ. ಪಕ್ಕದಲ್ಲಿಯೇ ಅನೇಕ ಕುಟುಂಬಗಳು ವಾಸವಾಗಿದ್ದು ಬಿರುಕು ಬಿಟ್ಟಿರುವ ಟ್ಯಾಂಕ್ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಸಮಸ್ಯೆಯಿದ್ದರೂ, ಇದನ್ನು ನೆಲಸಮಗೊಳಿಸಲು ಮಾತ್ರ ಇಲಾಖೆ ಮೀನಮೇಷ ಎಣಿಸುತ್ತಿರುವುದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ತೆರವಿಗೆ ರೂ.2.50 ಲಕ್ಷ ವೆಚ್ಚ :
ತೆರವಿನ ಕಾರ್ಯಕ್ಕೆ ಕನಿಷ್ಟ 2.50 ಲಕ್ಷ ವೆಚ್ಚವಾಗಲಿದೆ. ಗೋಪಾಡಿ ಗ್ರಾ.ಪಂ.ನಲ್ಲಿ ಆರ್ಥಿಕ ಸಮಸ್ಯೆ ಇರುವುದರಿಂದ ಅಷ್ಟೊಂದು ಹಣ ಹೊಂದಾಣಿಕೆ ಮಾಡಲುಅಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರು ಟ್ಯಾಂಕ್ ತೆರವುಗೊಳಿಸುವಂತೆ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಬೈಂದೂರು ಸಹಿತ, ಗೋಪಾಡಿ ಗ್ರಾ.ಪಂ., ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆಶ್ವಾಸನೆ ನೀಡಿದ್ದಾರೆ
ಅನುದಾನದ ಕೊರತೆಯಿಂದ ವಾಟರ್ ಟ್ಯಾಂಕ್ ತೆರವು ಕಾರ್ಯಕ್ಕೆ ಹಿಂದೇಟು ಹಾಕಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಇಲಾಖೆಗಳನ್ನು ಸಂಪರ್ಕಿಸಲಾಗಿದೆ. ಜಿ.ಪಂ. ಸಿ.ಇ.ಒ. ಕ್ರಮ ಕೈಗೊಳ್ಳುವ ಅಶ್ವಾಸನೆ ನೀಡಿದ್ದಾರೆ.
– ಗಣೇಶ ಪಿ., ಪಿ.ಡಿ.ಒ ಗೋಪಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ