ಮರೆಯಾಗುತ್ತಿರುವ ಅಪೂರ್ವ ಜಾನಪದ ಕಲೆ ಪಾಣರಾಟ


Team Udayavani, Feb 16, 2020, 5:41 AM IST

1202BAS4A

ಬಸ್ರೂರು: ಆಧುನಿಕತೆಯತ್ತ ಸಾಗುತ್ತಿರುವ ರಭಸದಲ್ಲಿ ನಮ್ಮ ಮೂಲ ಸಂಸ್ಕೃತಿ ಮರೆಯುತ್ತಿದ್ದೇವೆ. ನಮ್ಮ ಪ್ರಾಚೀನರು ನಡೆಸಿಕೊಂಡು ಬಂದಿರುವ ಒಂದೊಂದೇ ಆಚರಣೆಯನ್ನು ಆಧುನಿಕತೆಯ ಹೆಸರಿನಲ್ಲಿ ಬದಿಗೆ ಸರಿಸುತ್ತಿದ್ದೇವೆ.

ಏನಿದು ಪಾಣರಾಟ?
ಈ ಸಾಲಿಗೆ ಪಾಣಾರಾಟವೂ ಸೇರುತ್ತದೆ. ಕುಂದಾಪುರ ತಾಲೂಕಿನ ವಾಲೂ¤ರಿನ ನಾಗರಾಜ ಪಾಣ ಅವರ ತಂಡ ಮಾತ್ರ ಪ್ರಸ್ತುತ ಪಾಣಾರಾಟ ನಡೆಸುತ್ತಿದೆ. ಪಾಣಾರಾಟದಲ್ಲಿ ದೈವಸ್ಥಾನಗಳಲ್ಲಿ ನಡೆಯುವಂತೆ ಢಕ್ಕೆ ಬಲಿ ಸೇವೆ, ಕೋಲ ಸೇವೆಯೂ ಇರುತ್ತದೆ. ಕೆಲವು ದೈವದ ಮನೆ ಗಳಲ್ಲಿ ಮಾತ್ರ ಪಾಣಾರಾಟ ನಡೆಯುತ್ತದೆ. ಇಲ್ಲಿ ಕನ್ನಡ ಪದ್ಯ ಹೇಳುತ್ತಾರೆ. ಈ ಪದ್ಯ ಗಳಲ್ಲಿ ಬಣಜಿಗ ಶೆಟ್ಟಿ ಕಥೆ, ಕುಂತ್ಯಮ್ಮನ ಹಾಡು ಸೇರಿದಂತೆ ಹಲವು ಕಥನ ಕಾವ್ಯಹೇಳುವುದು ವಿಶೇಷ. ಸುಮಾರು ಅರ್ಧ ಗಂಟೆ ಈ ಪದ್ಯಗಳನ್ನು ಆಕರ್ಷಕವಾದ ಹಾಡು-ಕುಣಿತದೊಂದಿಗೆ ಪ್ರದರ್ಶಿಸ ಲಾಗುತ್ತದೆ. ಪಾಣಾರಾಟ ನಡೆಸುವ ತಂಡದಲ್ಲಿ ಏಳರಿಂದ ಎಂಟು ಜನ ಜಾನಪದ ಕಲಾವಿದರಿರುತ್ತಾರೆ.

ಮನೆ ಮನೆಗೆ ತಿರುಗಿ ಪದ ಹೇಳುವ ಕ್ರಮ
ಪಾಣಾರಾಟದಲ್ಲಿ ದೇವರ ದರ್ಶನ ಸೇವೆಯೂ ಇರುತ್ತದೆ, ನಾಗರಾಜ ಅವರ ತಂಡ ಕಂಡೂÉರು, ಬಳ್ಕೂರು, ಗುಲ್ವಾಡಿ, ಹಳ್ನಾಡು, ಬಸೂÅರು ಮತ್ತಿತರ ಪ್ರದೇಶ ಗಳಲ್ಲಿ ಬೇರೆ ಬೇರೆ ಕಥನ ಕಾವ್ಯಗಳನ್ನು ಹೇಳುತ್ತಾ ಮನೆ ಮನೆಗೆ ತಿರುಗುವ ಕ್ರಮ ರೂಢಿಯಲ್ಲಿದೆ. ಪದ್ಯ ಹೇಳುವಾಗ ತೆಂಬರೆ ಎಂಬ ವಾದ್ಯ ಬಾರಿಸುತ್ತಾರೆ.

ಪಾಣಾರರ ವೇಷ
ಪಾಣಾರರು ಪಾಣಾರಾಟ, ಕೃಷಿ ಕೆಲಸಕ್ಕೆ ಬಳಸುವ ಮಂಡೆ ಹಾಳೆ ತಯಾರಿಸುವುದು, ಮನೆ ಮನೆಗೆ ಹೋಗಿ ಪದ ಹೇಳುವುದನ್ನು ಬಿಟ್ಟು ನವರಾತ್ರಿ, ಚೌತಿ ಹಬ್ಬದ ಸಂದರ್ಭದಲ್ಲಿ ವೇಷಗಳನ್ನು ಹಾಕಿ ಮನೆ ಮನೆಗೆ ಸಾಗುವ ರೂಢಿಯಲ್ಲಿದೆ. ಕೋಲ ಸೇವೆಪಾಣಾರಾಟದಲ್ಲಿ ಮೊದಲು ಸ್ವಾಮಿ, ಬೊಬ್ಬರ್ಯ, ಹಾçಗುಳಿ, ಚೌಂಡಿ ಮುಂತಾದ ಕೋಲಗಳ ಸೇವೆಯ (ಹೊಗಳಿಕೆ) ಅನಂತರದ “ಬಲಿಸೇವೆ’ಗೆ ಪಾಣಾರಾಟ ಎನ್ನುತ್ತಾರೆ. ಈ ಅಪೂರ್ವ ಜಾನಪದ ಕಲೆಯಾದ ಕೋಲ ಸೇವೆಯೂ ಮರೆಯಾಗುತ್ತಿದೆ.

ಪ್ರದರ್ಶನ ನೀಡುತ್ತಿದ್ದೇನೆ
ಪ್ರಸ್ತುತ ನಾನು ಮತ್ತು ಪುತ್ರ ಸತೀಶ ಪಾಣ ಮಾತ್ರ ಮನೆ ಮನೆಗೆ ತೆರಳಿ ಪದ ಹೇಳುವುದು, ಪಾಣಾರಾಟ ನಡೆಸಿಕೊಡುವುದನ್ನು ಕಲಿತಿದ್ದು ಪ್ರದರ್ಶನ ನೀಡುತ್ತಿದ್ದೇವೆ. ಮುಂದಿನ ತಲೆಮಾರಿಗೂ ಈ ಜಾನಪದ ಕಲೆ ಉಳಿಯಬೇಕಾಗಿದೆ.
– ನಾಗರಾಜ ಪಾಣ,
ವಾಲೂ¤ರು

– ದಯಾನಂದ ಬಳ್ಕೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.