“ನಮ್ಮವರು ಸತ್ತಿಲ್ಲ, ವಿಷಯ ಮುಗಿಸುವ ಪ್ರಯತ್ನದಲ್ಲಿದ್ದಾರೆ’
Team Udayavani, May 7, 2019, 6:00 AM IST
ಮಲ್ಪೆ: ಬೋಟಿನ ಅವಶೇಷ ಪತ್ತೆಯಾಗಿರುವುದು ಸುಳ್ಳು, ಒಂದು ವೇಳೆ ದೋಣಿ ಮುಳುಗಿದ್ದರೆ ಅವಶೇಷ ಈ ಮೊದಲೇ ಪತ್ತೆಯಾಗಬೇಕಿತ್ತು. ನನ್ನ ಗಂಡ ಇನ್ನೂ ಬದುಕಿದ್ದಾರೆ, ಅವರೆಲ್ಲರನ್ನು ಹೈಜಾಕ್ ಮಾಡಲಾಗಿದೆ, ಎಲ್ಲರೂ ಸೇರಿ ವಿಷಯವನ್ನು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದು ಕುಮಟಾ ತಾಲೂಕಿನ ನಾಪತ್ತೆಯಾದ ಮೀನುಗಾರ ಸತೀಶ್ ಹರಿಕಂತ್ರ ಅವರ ಪತ್ನಿ ಪ್ರಮೀಳಾ ಅವರ ದೃಢವಾದ ಅಭಿಪ್ರಾಯ.
ಮನೆಯಲ್ಲಿ ಸತೀಶ ಅವರ ವೃದ್ಧ ತಂದೆ – ತಾಯಿ ಇದ್ದಾರೆ. 5 ವರ್ಷ ಹಿಂದೆ ಸತೀಶ ಅವರ ಅಣ್ಣ ಅಪಘಾತದಲ್ಲಿ ಮೃತಪಟ್ಟಿದ್ದರು. ಮನೆಯಲ್ಲಿ ಬೇರೆ ದುಡಿಯುವ ಕೈಗಳಿಲ್ಲ. ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಈ ಕುಟುಂಬದ್ದಾಗಿದೆ.
ಮಗಳ ಮುಖ
ನೋಡಲು ಅವರಿಲ್ಲ
ಪತಿ ನಾಪತ್ತೆಯಾಗುವ ವೇಳೆಗೆ ನಾನು ನಾಲ್ಕೂವರೆ ತಿಂಗಳ ಗರ್ಭಿಣಿ; 8 ದಿನದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ. ಒಂದೂವರೆ ವರ್ಷದ ಮತ್ತೂಂದು ಹೆಣ್ಣು ಮಗು ಇದೆ. ಅದರೆ ಮಗುವಿನ ಮುಖ ನೋಡಿ ಸಂತಸ ಪಡ ಬೇಕಿದ್ದ ಅವರೇ ಇಂದು ಇಲ್ಲ. ಆದರೆ ಬಂದೇ ಬರುತ್ತಾರೆ ಎಂಬವಿಶ್ವಾಸ ನನಗಿದೆ ಎನ್ನುತ್ತಾ ಗದ್ಗದಿತರಾಗುತ್ತಾರೆ ಪ್ರಮೀಳಾ.