ಜಾನುವಾರು ಕದಿಯಲು ಬಂದ, ಬಾವಿಗೆ ಬಿದ್ದು ಸಿಕ್ಕಿಬಿದ್ದ
Team Udayavani, Oct 28, 2017, 11:37 AM IST
ಸಿದ್ದಾಪುರ: ಜಾನುವಾರುಗಳನ್ನು ಕಳವು ಮಾಡಲು ಹೊಂಚು ಹಾಕಿ ಬಂದ ಕಳ್ಳನೊಬ್ಬ ನಾಯಿ ಕೂಗಿದ ಶಬ್ದಕ್ಕೆ ಗಾಬರಿಗೊಂಡು ಓಡುವ ವೇಳೆ ಮನೆಯ ಮುಂದಿನ ಸುಮಾರು 20 ಅಡಿಗಳ ನೀರಿಲ್ಲದ ಬಾವಿಗೆ ಬಿದ್ದು ಮೇಲೆ ಬರಲಾಗದೆ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಬೆಳ್ವೆ ಗ್ರಾಮ ಪಂಚಾಯತ್ಗೆ ಸೇರಿದ ತೋನ್ನಾಸೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ.
ತೋನ್ನಾಸೆ ದೊಡ್ಡಕುಂಬ್ರಿ ಸಂತೋಷ ನಾಯ್ಕ ಅವರ ಮನೆಯ ಬಳಿಯಲ್ಲಿದ್ದ ದನದ ಕೊಟ್ಟಿಗೆಯಲ್ಲಿದ್ದ ಎರಡು ವರ್ಷದ ಎರಡು ಕರುಗಳನ್ನು ತೋನ್ನಾಸೆ ಬುಕ್ಕಿಗುಡ್ಡೆ ಗಣೇಶ ಪೂಜಾರಿ ಕಳವು ಮಾಡಲು ಹೊಂಚು ಹಾಕಿದ್ದ. ಅದೇ ವೇಳೆ ನಾಯಿ ಬೊಗಳಿದಾಗ ಮನೆಯವರು ಎಚ್ಚರಗೊಂಡಿದ್ದರು. ಇದರಿಂದ ಗಾಬರಿಗೊಂಡ ಗಣೇಶ ಓಡಿ ಹೋಗುವಾಗ 20 ಅಡಿ ನೀರಿಲ್ಲದ ಆವರಣವಿಲ್ಲದ ಬಾವಿಗೆ ಬಿದ್ದು ಮೇಲೆ ಬಾರಲಾಗದೇ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಜಾನುವಾರು ಕಳವು ಮಾಡಿಕೊಂಡು ತೆಗೆದು ಕೊಂಡು ಹೋಗಲು ತಂದಿದ್ದ ವಾಹನ ಸ್ಥಳದಿಂದ ಪರಾರಿ ಯಾಗಿದೆ. ದನ ಕಳವುವಿನ ವೇಳೆ ಮನೆಯವರನ್ನು ಬೆದರಿಸಲು ತಂದಿದ್ದ ಮರದ ದೊಣ್ಣೆ ಮನೆಯ ಮುಂಭಾಗದಲ್ಲಿ ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿಯಂತೆ ಶಂಕರನಾರಾಯಣ ಪೊಲೀಸರು ಬೆಳಗ್ಗೆ ಸ್ಥಳಕ್ಕಾಗಮಿಸಿದ್ದರು. ಬಾವಿಗೆ ಬಿದ್ದ ಕಳ್ಳನನ್ನು ನೋಡಲು ಇದೇ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಪೊಲೀಸರು ಸ್ಥಳೀಯರ ಸಹಕಾರದಿಂದ ಬಾವಿಗೆ ಬಿದ್ದ ಆತನನ್ನು ಮೇಲೆತ್ತಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ