ಯಾರಿಗೆ ಬೇಡ ಮಂಗಲ? ಅದಕ್ಕಾಗಿಯೇ ಬರೆದರು ಮಂಗಲಾಷ್ಟಕ


Team Udayavani, Jan 1, 2018, 3:34 PM IST

01-35.jpg

ಉಡುಪಿ ಶ್ರೀಕೃಷ್ಣ ಮಠದ ದ್ವೆ„ವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆಯಂತೆ ಜ. 18ರಂದು ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪೂಜಾಕೈಂಕರ್ಯವನ್ನು ಆರಂಭಿಸಲಿದ್ದಾರೆ. ಪಲಿಮಾರು ಮಠದ ಪಟ್ಟದ ದೇವರು ಶ್ರೀರಾಮಚಂದ್ರ. ಪಲಿಮಾರು ಮಠ ಪರಂಪರೆಯ ಆರನೆಯವರಾದ ಶ್ರೀರಾಜರಾಜೇಶ್ವರಯತಿಗಳು ಬರೆದ ಮಂಗಲಕರವಾದ ಮಂಗಲಾಷ್ಟಕದೊಂದಿಗೆ ಅಂಕಣ ಆರಂಭಗೊಳ್ಳುತ್ತಿದೆ. 

ಎಲ್ಲರಿಗೂ ಬೇಕು ಸಿಹಿ ಸುದ್ದಿ. ಇದು ಸಾಮಾನ್ಯ ಭಾಷೆಯಲ್ಲಿ. ಶಾಸ್ತ್ರೀಯ ಭಾಷೆಯಲ್ಲಿ ಹೇಳುವುದಾದರೆ ಮಂಗಲಪ್ರದವಾದುದೇ ಎಲ್ಲರಿಗೂ ಇಷ್ಟ. ಇದಕ್ಕಾಗಿ ಹಲವು ಮಂಗಲಾಷ್ಟಕಗಳು ಚಾಲ್ತಿಯಲ್ಲಿವೆ. 

ಮಂಗಲಾಷ್ಟಕಗಳೆಂದರೆ ಮಂಗಲಪ್ರದವಾದುದನ್ನು ಹಾರೈಸುವ ಅಷ್ಟಕಗಳು (ಎಂಟು ಸೊಲ್ಲುಗಳು). ಕೇವಲ ಕರಾವಳಿಯಲ್ಲಿ ಮಾತ್ರವಲ್ಲದೆ ನಾಡಿನುದ್ದಕ್ಕೂ ಸಂಪ್ರದಾಯಭೇದವಿಲ್ಲದೆ ಜನಸಾಮಾನ್ಯರ ಕಾರ್ಯಕ್ರಮ ದಲ್ಲಿಯೂ ಎಲ್ಲರೂ ಪಠಿಸುವ ಮಂಗಲಾಷ್ಟಕ ಪಲಿಮಾರು ಮಠದ ಪರಂಪರೆಯಲ್ಲಿ ಬೆಳಗಿದ ಶ್ರೀರಾಜರಾಜೇಶ್ವರಯತಿ ವಿರಚಿತ ಮಂಗಲಾಷ್ಟಕ. 

ಕವಿ ಚಮತ್ಕಾರ 
ಕೇವಲ ಎಂಟೇ ಸೊಲ್ಲುಗಳಿರು ವುದರಿಂದ ಹೇಳಲು ಬಹಳ ಹೊತ್ತು ಬೇಡ. ಎಂಟು ಸೊಲ್ಲುಗಳಲ್ಲಿ ಇಡೀ ವಿಶ್ವವನ್ನು ತೋರಿಸಿಡುವ, ಜೀವನದಲ್ಲಿ ಯಾರನ್ನೆಲ್ಲ ಅಗತ್ಯವಾಗಿ ಸ್ಮರಿಸಬೇಕೋ ಅವರ ಪಟ್ಟಿಯನ್ನು ಚಿಕ್ಕ ರೂಪದಲ್ಲಿ ಕೊಟ್ಟಿರುವ ಕವಿಚಮತ್ಕಾರ ಇಲ್ಲಿದೆ. ಈಗಿನ ಗಡಿಬಿಡಿಯ ಜೀವನಕ್ರಮಕ್ಕೂ ಈ ಚಿಕ್ಕ ಮಂಗಲಾಷ್ಟಕ ಹೇಳಿಸಿ ಮಾಡಿಸಿದಂತಿದೆ, ಪಠಿಸಲು ಅನುಕೂಲವಾಗುವಂತೆ. 

ಮನುಕುಲಕ್ಕೆ ಶಾಶ್ವತ ಕೊಡುಗೆ
ಶ್ರೀರಾಜರಾಜೇಶ್ವರಯತಿಗಳ ಜನನ ಕಾಲ ಕ್ರಿ.ಶ.1380 ಇರಬಹುದು. ಇದು ಮಧ್ವಾಚಾರ್ಯರು (1238-1317) ಬದರಿಗೆ ತೆರಳಿದ ಅನಂತರ ಸುಮಾರು 60 ವರ್ಷಗಳ ಬಳಿಕ ಎಂದು ಡಾ| ಬನ್ನಂಜೆ ಗೋವಿಂದಾಚಾರ್ಯರು ಕಾಂತಾವರದ ಶಾಸನದ ಅನುಸಾರ (ಶಾಸನದ ಕಾಲ 1433) ಅಂದಾಜಿಸಿದ್ದಾರೆ. ಇವರು ಬಹಳ ಕಿರಿಯ ವಯಸ್ಸಿನಲ್ಲಿಯೇ ಉಚ್ಚ ಮಟ್ಟದ ವಿದ್ವಾಂಸರಾಗಿ ಹೆಸರು ಗಳಿಸಿದ್ದರು. ಇವರ ವೃಂದಾವನ ಪಡುಬಿದ್ರಿ ಸಮೀಪದ ಪಲಿಮಾರು ಮೂಲಮಠದಲ್ಲಿದೆ. ಇವರು ಪರಂಪರೆಯಲ್ಲಿ ಆರನೆಯವರು. 1522ರಲ್ಲಿ ಎರಡು ವರ್ಷಗಳ ಪರ್ಯಾಯ ಪದ್ಧತಿ ಆರಂಭವಾದ ಕಾರಣ ಇದಕ್ಕಿಂತ ಹಿಂದಿನವರೆಲ್ಲರೂ ಎರಡು ತಿಂಗಳ ಪರ್ಯಾಯ ಪದ್ಧತಿ ವ್ಯಾಪ್ತಿಗೆ ಸೇರಿದವರು. ಶ್ರೀರಾಜರಾಜೇಶ್ವರ ತೀರ್ಥರೂ ಎರಡು ತಿಂಗಳ ಅವಧಿಯಲ್ಲಿ ಬಾಳಿದವರು. ಕಿರಿಯ ಯತಿಗಳಾಗಿ ವೃಂದಾವನಸ್ಥರಾದರೂ ಅಪಾರ ಸಂಖ್ಯೆಯ ಜನರು ಪಠಿಸುವ ಮಂಗಲಾಷ್ಟಕವನ್ನು ನೀಡುವುದರ ಮೂಲಕ ಮನುಕುಲಕ್ಕೆ ಶಾಶ್ವತ ಕೊಡುಗೆ ಸಲ್ಲಿಸಿದರು. ಇದರಲ್ಲಿ ದೇವದೇವತೆಗಳಲ್ಲದೆ, ಗಿರಿಪರ್ವತ, ನದಿ, ಗ್ರಹ, ನಕ್ಷತ್ರ, ರಾಶಿಗಳನ್ನು ಸ್ಮರಿಸುವ ಮೂಲಕ ಪರಿಸರಪ್ರಜ್ಞೆ, ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. 

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.