ಕೈಸೇರಿಲ್ಲ 3 ತಿಂಗಳ ದುಡಿಮೆ ಕಾಸು!
ವನ್ಯಜೀವಿ ಹೊರಗುತ್ತಿಗೆ ನೌಕರರ ಸಂಕಷ್ಟ ; ತುತ್ತಿಗೂ ತತ್ವಾರ, ಔಷಧಕ್ಕೂ ಹಣವಿಲ್ಲ
Team Udayavani, Jan 26, 2022, 7:50 AM IST
ಸಾಂದರ್ಭಿಕ ಚಿತ್ರ.
ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗದ 8 ವಿಭಾಗಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಚಾಲಕರು, ಕಚೇರಿ ಸಿಬಂದಿ, ರಾತ್ರಿ ಕಾವಲುಗಾರರು 3 ತಿಂಗಳಿನಿಂದ ವೇತನ ಕೈಸೇರದೆ ತುತ್ತಿಗೂ ಪರಿತಪಿಸುತ್ತಿದ್ದಾರೆ. ಇವರ್ಯಾರಿಗೂ ನವೆಂಬರ್ನಿಂದ ವೇತನ ಆಗಿಲ್ಲ. ಕುಟುಂಬ ಪೊರೆಯಲು ಅನ್ಯ ದಾರಿ ಕಾಣದೆ ಕೈಸಾಲ, ಮೀಟರ್ ಸಾಲದ ಮೊರೆ ಹೊಕ್ಕಿದ್ದು, ಈಗ ಅದುವೇ ಶೂಲವಾಗಿ ಇರಿಯುತ್ತಿದೆ.
ಕಾರ್ಕಳ, ಕೆರೆಕಟ್ಟೆ, ಕುದುರೆಮುಖ, ಬೆಳ್ತಂಗಡಿ, ಹೆಬ್ರಿ (ಸೋಮೇಶ್ವರ), ಕೊಲ್ಲೂರು, ಅಮಾವಸೆಬೈಲು, ಸಿದ್ದಾಪುರ ವಲಯಗಳಲ್ಲಿ 50ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಹತ್ತಾರು ವರ್ಷ ಗಳಿಂದ ಇದ್ದಾರೆ. ಶಿವಮೊಗ್ಗ ಮೂಲದ ಪ್ರೈವೆಟ್ ಎಂಪ್ಲಾ ಯಿಮೆಂಟ್ ಬ್ಯೂರೋ ಸಂಸ್ಥೆ ಅವರನ್ನು ನೇಮಿಸಿಕೊಂಡಿದ್ದು, ಸಕಾಲಕ್ಕೆ ವೇತನ ನೀಡುತ್ತಿಲ್ಲ ಎಂಬುದು ಆರೋಪ.
ನಮ್ಮನ್ನು ನಂಬಿಕೊಂಡು ಕುಟುಂಬ ವರ್ಗವಿದೆ. ಹಿರಿಯರು, ಮಕ್ಕಳು ಜ್ವರ, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗಿದ್ದಾರೆ. ದಿನದ ತುತ್ತಿಗೇ ಕೈಯಲ್ಲಿ ಕಾಸಿಲ್ಲದಿರುವಾಗ ಸೂಕ್ತ ಚಿಕಿತ್ಸೆ ಕೊಡಿಸುವುದಾದರೂ ಹೇಗೆ? ಮನೆಯಲ್ಲೂ ಇರಲಾಗದೆ, ಆಸ್ಪತ್ರೆಗೂ ತೆರಳಿ ಚಿಕಿತ್ಸೆ ಕೊಡಿಸ ಲಾಗದ ಚಿಂತಾಜನಕ ಸ್ಥಿತಿ ನಮ್ಮದಾಗಿದೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರಕಾರ ಹಣ ಕೊಟ್ಟಿಲ್ಲ
ಗುತ್ತಿಗೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದರೂ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಗುತ್ತಿಗೆ ಒಪ್ಪಂದದಲ್ಲಿ ಸೂಚಿಸಲಾದ ಸೌಲಭ್ಯ ನೀಡುತ್ತೇವೆ ಎಂದು ಹೇಳುತ್ತಾರಾದರೂ ವಾಸ್ತವದಲ್ಲಿ ಸಿಗುತ್ತಿಲ್ಲ. ವೇತನ ವಿಳಂಬಕ್ಕೆ ಕಾರಣ ಏನು ಎಂದು ವನ್ಯಜೀವಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ, “ಸರಕಾರದಿಂದ ಹಣ ಬಿಡುಗಡೆಗೊಂಡ ಹಾಗೇ ನಾವು ಗುತ್ತಿಗೆದಾರರಿಗೆ ಬಿಲ್ ಪಾವತಿಸುತ್ತೇವೆ. ಸರಕಾರದ ಮಟ್ಟದಲ್ಲಿ ವಿಳಂಬವಾದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರವರು.
ಕೊರಗಿನಿಂದ ಪ್ರಾಣಬಿಟ್ಟ ನೌಕರ
ಹೊರಗುತ್ತಿಗೆಯಡಿ 15 ವರ್ಷಗಳಿಂದ ಕಾರ್ಕಳ ವಿಭಾಗದಲ್ಲಿ ಚಾಲಕನಾಗಿದ್ದ ಸತೀಶ್ ಪೂಜಾರಿ ಜ. 22ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.
ಸಂಬಳ ಆಗದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಸ್ನೇಹಿತರಲ್ಲಿ ಆಗಾಗ ಸಂಕಷ್ಟ ಹೇಳಿಕೊಳ್ಳುತ್ತಿದ್ದರು. ಕೆಲವು ದಿನಗಳ ಬಳಿಕ ಇದೇ ಕೊರಗಿನಿಂದ ಸಾವಿಗೆ ಶರಣಾಗಿದ್ದರು. ಪತ್ನಿ, 2 ವರ್ಷಗಳ ಹೆಣ್ಣು ಮಗು, ಅನಾರೋಗ್ಯ ಪೀಡಿತ ಸಹೋದರ, ವೃದ್ಧೆ ತಾಯಿ ಮನೆಯಲ್ಲಿದ್ದು, ಏಕೈಕ ಆಶ್ರಯದಾತ ಇವರಾಗಿದ್ದರು. ಹಣಕಾಸಿನ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಕೂಡ ಶಂಕಿಸಿದ್ದಾರೆ.
ಆಧಾರವನ್ನು ಕಳೆದುಕೊಂಡ ಕುಟುಂಬವೀಗ ಕಣ್ಣೀರಿಡುತ್ತಿದೆ. ಇತರ ಹೊರಗುತ್ತಿಗೆ ನೌಕರರ ಕುಟುಂಬಗಳ ಸಮಸ್ಯೆಯೂ ಇದಕ್ಕಿಂತ ಭಿನ್ನವೇನಲ್ಲ.
ಸರಕಾರದಿಂದ ಇಲಾಖೆಗೆ ನಿಗದಿತ ಸಮಯಕ್ಕೆ ಹಣ ಬಿಡುಗೆಯಾಗುತ್ತಿಲ್ಲ. ಬಂದ ಬಳಿಕವೂ ನಮ್ಮಿಂದ ಗುತ್ತಿಗೆದಾರರಿಗೆ ಪಾವತಿಗೆ ಬಾಕಿಯಾಗಿಲ್ಲ. ಗುತ್ತಿಗೆದಾರರಿಗೆ ನೌಕರರ ಸಮಸ್ಯೆ ತಿಳಿದಿದ್ದರೂ ಕೋಟಿಗಟ್ಟಲೆ ರೂ. ಮುಂಗಡ ಭರಿಸುವುದು ಕಷ್ಟ ಎನ್ನುತ್ತಿದ್ದಾರೆ.
– ಹರಿಪ್ರಸಾದ್, ಕುದುರೆಮುಖ ವನ್ಯಜೀವಿ ವಿಭಾಗದ ಸೂಪರಿಂಟೆಂಡೆಂಟ್
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ