ವಿಶ್ವ ಆಹಾರ ದಿನ: ಮಣಿಪಾಲದಲ್ಲಿ ಸೈಕಲ್ ರಾಲಿ
Team Udayavani, Oct 18, 2019, 5:48 AM IST
ಉಡುಪಿ: ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಮಾಹೆ ವಿ.ವಿ. ಆವರಣದಲ್ಲಿ ವೆಲ್ಕಮ್ಗ್ರೂಪ್ ಗ್ರಾಜುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ (ವಾಗಾÏ) ಬುಧವಾರ ಬೈಸಿಕಲ್ ರ್ಯಾಲಿಯನ್ನು ನಡೆಸಿತು.
ಮಾಹೆ ವಿ.ವಿ. ಆಡಳಿತ ಕಚೇರಿ ಎದುರು ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಅವರು ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು. “ಶೂನ್ಯ ಹಸಿವಿನ ವಿಶ್ವಕ್ಕಾಗಿ ಆರೋಗ್ಯ ಪಥ್ಯಾ ಹಾರಗಳು’ ಎಂಬ ಈ ವರ್ಷದ ಥೀಮ್ನಡಿ ಜಾಗೃತಿ ರೂಪಿಸಲು ಸೈಕಲ್ ಸವಾರರು ಕ್ಯಾಂಪಸ್ ಸುತ್ತ ರ್ಯಾಲಿ ನಡೆಸಿದರು.
ಭಾರತೀಯ ಆಹಾರ ಸುರಕ್ಷಾ ಪ್ರಾಧಿಕಾರ ಹೊರತಂದ
“ದಿ ಈಟ್ ರೈಟ್ ಮೂವ್ಮೆಂಟ್’ ಕಾರ್ಯಕ್ರಮದ ಕುರಿತೂ ಜಾಗೃತಿ ಮೂಡಿಸಲಾಯಿತು. ವಾಗಾÏದ ನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. “ಇಂದು ಬಹುತೇಕ ಮಕ್ಕಳಿಗೆ ಯಾವುದು ಸರಿ? ಯಾವುದು ತಪ್ಪು’ ಎಂಬ ಅರಿವಿಲ್ಲದೆ ಉತ್ತಮವಲ್ಲದ ಪಥ್ಯಾಹಾರ ಸೇವಿಸಿ ತೂಕವನ್ನು ಕಳೆದು ಕೊಳ್ಳುತ್ತಿದ್ದಾರೆ. ಉತ್ತಮ ವ್ಯಾಯಾಮದಿಂದ ಸಮತೋಲನವನ್ನು ಕಾಪಾಡ ಬಹುದು’ ಎಂದು ಡಾ| ಬಾಳಿಗಾ ಹೇಳಿದರು.
ಸಮತೋಲಿತ ಆಹಾರ ಸ್ವೀಕರಿಸಿ
ಅಪೌಷ್ಟಿಕ ಆಹಾರ ಸೇವನೆಯಿಂದ ಗರ್ಭಿಣಿಯರು ಬಳಲುತ್ತಿದ್ದಾರೆ. ಶಾಲಾ ಮಕ್ಕಳಿಗೂ ಇದೇ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬರೂ ಸಮತೋಲಿತ ಆಹಾರ ಸ್ವೀಕರಿಸುವ ಜತೆಗೆ ಸೂಕ್ತ ವ್ಯಾಯಾಮವನ್ನು “ಫಿಟ್ ಇಂಡಿಯಾ’ಕ್ಕಾಗಿ ಮಾಡುತ್ತಿರಬೇಕು. ಹಸಿವು ಮುಕ್ತ ಥೀಮ್ ಕುರಿತು ಸ್ನೇಹಿತರು, ಕುಟುಂಬ, ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಸಂಸ್ಥೆ ಆಹಾರ ಸುರಕ್ಷಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡಿದೆ ಎಂದು ವಾಗಾÏ ಪ್ರಾಂಶುಪಾಲ ತಿರುಜ್ಞಾನಸಂಬಾಂತಮ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ