ವಿಶ್ವದರ್ಜೆ ಆಧ್ಯಾತ್ಮಿಕ ಕೇಂದ್ರ: ಪುತ್ತಿಗೆ ಶ್ರೀ


Team Udayavani, Apr 23, 2019, 6:04 AM IST

vishwadarge

ಉಡುಪಿ: ಪುತ್ತಿಗೆ ಮೂಲ ಮಠವನ್ನು ಧಾರ್ಮಿಕ ಹಾಗೂ ಸಂಸ್ಕೃತ ಅಧ್ಯಯನದಲ್ಲಿ ವಿಶ್ವದರ್ಜೆಯ ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡುವ ಆಶಯವನ್ನು ಹೊಂದಿರುವುದಾಗಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಸೋಮವಾರ ನಡೆದ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮಧ್ವಾಚಾರ್ಯರು, ಶ್ರೀಕೃಷ್ಣ ದೇವರ ಪ್ರೇರಣೆಯಂತೆ ಈಗಾಗಲೇ ವಿದೇಶದಲ್ಲೂ ಶ್ರೀಕೃಷ್ಣ ತತ್ತÌ ಪ್ರಸಾರ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಗುರು- ಶಿಷ್ಯರು ಈ ಕಾರ್ಯದಲ್ಲಿ ತೊಡಗುವವರಿದ್ದೇವೆ. ವಿಶ್ವಸಂಸ್ಥೆ ಸೇರಿದಂತೆ 182 ರಾಷ್ಟ್ರಗಳ ಧಾರ್ಮಿಕ ಸಂಸ್ಥೆಯ ಅಧ್ಯಕ್ಷನ ನೆಲೆಯಲ್ಲಿ ಉಗ್ರ ನಿಗ್ರಹ ಕಾರ್ಯ ಜವಾಬ್ದಾರಿಯೂ ತಮ್ಮ ಮೇಲಿದೆ. ಇದು ನಮ್ಮ ಸಾಹಸವೇ ಹೊರತು ದುಸ್ಸಾಹಸವಲ್ಲ. ಈಗಾಗಲೇ ಅಮೆರಿಕಾ, ಕೆನಡಾ, ಲಂಡನ್‌ ಮತ್ತು ಆಸ್ಟ್ರೇಲಿಯಾ ಸಹಿತ ವಿವಿಧ ಕಡೆ 11 ಪುತ್ತಿಗೆ ಶಾಖಾ ಮಠಗಳಿದ್ದು, ಮುಂದಿನ ದಿನದಲ್ಲಿ ವಿಶ್ವಾದ್ಯಂತ 108 ಪುತ್ತಿಗೆ ಶಾಖಾಮಠ ಸ್ಥಾಪನೆಯ ಸಂಕಲ್ಪವಿದೆ ಎಂದರು.

ಭಗವಂತನನ್ನು ಸೇರಲು ಎರಡು ಮಾರ್ಗಗಳಿವೆ. ಸನ್ಯಾಸ ಧರ್ಮಾನು ಸರಣೆ ಮೂಲಕ ಕ್ಷಿಪ್ರವಾಗಿ ಭಗವಂತನ ದರ್ಶನ ಹೊಂದ ಬಹುದಾದರೆ, ಗೃಹಸ್ಥಾಶ್ರಮದವರಿಗೂ ಭಗವತಾøಪ್ತಿ ಸಾಧ್ಯ. ಶ್ರೀಮಠದ ಸಂಪ್ರದಾಯದಂತೆ ಉತ್ತರಾಧಿಕಾರಿ ಶಿಷ್ಯ ಪರಿಗ್ರಹಣದ ಕರ್ತವ್ಯ ನೆರವೇರಿಸಲಾಗಿದೆ ಎಂದರು.

ಆಯ್ಕೆ ತರಾತುರಿಯಲ್ಲಿ ನಡೆದಿಲ್ಲ
ಮಠದ ಉತ್ತರಾಧಿಕಾರಿಯ ಆಯ್ಕೆ ತರಾತುರಿಯಲ್ಲಿ ನಡೆದಿಲ್ಲ. ಕಳೆದ ಎಂಟು ತಿಂಗಳಿಂದ ಕುಂಜಿಬೆಟ್ಟು ಪ್ರಶಾಂತ ಆಚಾರ್ಯ ಅವರ ಬಗ್ಗೆ ತಿಳಿದು ಅಂತಿಮವಾಗಿ ಶಿಷ್ಯನನ್ನಾಗಿ ಸ್ವೀಕರಿಸಲಾಗಿದೆ. ಅವರಿಂದ ತಣ್ತೀ ಪ್ರಚಾರ, ಪರಸ್ಪರ ಐಕ್ಯಭಾವದಿಂದ ಮಠದ ವ್ಯವಹಾರಗಳು, ಯತಿಧರ್ಮ ಪಾಲನೆ ಬಗ್ಗೆ ವಚನ ಪಡೆದುಕೊಳ್ಳ ಲಾಗಿದೆ. ಈ ದಿನ ಬಿಟ್ಟರೆ ಇನ್ನು ಒಂದೂವರೆ ವರ್ಷ ಮುಹೂರ್ತ ಕೂಡಿಬರುವುದಿಲ್ಲ. ಆದ್ದರಿಂದ ಇಂದೇ ಕಾರ್ಯಕ್ರಮ ನಡೆಸಿದೆವು ಎಂದು ಶ್ರೀಪಾದರು ಹೇಳಿದರು.

ಗುರುವಂದನೆ
ಮೇ 16ರಂದು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶತಾಯುಷಿಗಳಾಗಲಿ
ಐಟಿ ಸ್ವಾಮೀಜಿಯಿಂದ ಆಧ್ಯಾತ್ಮಿಕ, ಧಾರ್ಮಿಕ ಪ್ರಚಾರವಾಗಲಿ. ತಮ್ಮ ಮಠದ ಪರಂಪರೆಯಲ್ಲಿ ಶತಾಯುಷಿ ಗಳಾದ ಶ್ರೀಹಂಸೇಂದ್ರ ತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ಸುಧೀಂದ್ರ ತೀರ್ಥರು, ಶ್ರೀ ರಾಘವೇಂದ್ರ ತೀರ್ಥರು, ಶ್ರೀ ವಿಜಯೀಂದ್ರ ತೀರ್ಥರು, ಶ್ರೀ ಸುಮತೀಂದ್ರತೀರ್ಥ ಶ್ರೀಪಾದರಂತೆ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶತಾಯುಷಿಯಾಗಲಿ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾರೈಸಿದರು.

ಸನ್ಯಾಸಿಯಾಗಬೇಕೆಂಬ ಆಸೆ ಇತ್ತು
ಬಾಲ್ಯದಿಂದ ಸನ್ಯಾಸಿಯಾಗಬೇಕೆಂಬ ಆಸೆ ಇತ್ತು. ಸನ್ಯಾಸಿ ಯಾಗಬೇಕೆಂಬ ತವಕ ಇದ್ದರೂ ಕೋಟಿಗೊಬ್ಬರಂತೆ ಆ ಅವಕಾಶ ಪ್ರಾಪ್ತಿಯಾಗಲಿದೆ. ತಮ್ಮ ಪೂರ್ವಜನ್ಮದ ಸುಕೃತ, ಮಾತಾಪಿತರ ಗುರು ಭಕ್ತಿಯಿಂದ ಕೃಷ್ಣ ಸೇವೆ ತಮಗೆ ಪ್ರಾಪ್ತವಾಗಿದೆ. ತಮಗೆ ಸನ್ಯಾಸದೀಕ್ಷೆ ನೀಡಿದ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನಂಬಿಕೆ ಉಳಿಸಿಕೊಳ್ಳುತ್ತೇನೆ.
– ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ

12 ವರ್ಷ ಅಧ್ಯಯನ
ಉತ್ತರಾಧಿಕಾರಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮುಂದಿನ 12 ವರ್ಷಗಳ ಮೂಲ ಮಠದಲ್ಲಿ ವೇದ ವೇದಾಂತ ಶಿಕ್ಷಣ ಪಡೆಯಲಿದ್ದಾರೆ. ವೇದಾಂತ ಶಿಕ್ಷಣ ಬೋಧನೆಗಾಗಿ ತಜ್ಞ ವಿದ್ವಾಂಸರನ್ನು ನಿಯೋಜಿಸಲಾಗುತ್ತದೆ.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.