ಮರಾಠಿ ಭಾಷೆಯಲ್ಲಿ ಕರಾವಳಿಯ ಯಕ್ಷಗಾನ !
ಮರಾಠಿ ರಂಗಭೂಮಿಗೆ ಯಕ್ಷಗಾನ ಪ್ರವೇಶ ಯಕ್ಷಗಾನ ಕೇಂದ್ರಕ್ಕೆ ಪುಣೆ ತಂಡ ಭೇಟಿ
Team Udayavani, May 30, 2019, 10:17 AM IST
ಉಡುಪಿ: ಕರಾವಳಿಯ ಕಲೆ ಯಕ್ಷಗಾನವಿನ್ನು ಅಧ್ಯಯನದ ದೃಷ್ಟಿಯಲ್ಲಿ ಗಡಿ ಮೀರಿ ಹೋಗಲಿದೆ. ಮಹಾರಾಷ್ಟ್ರದ ಪುಣೆಯ ಸಾಂಸ್ಕೃತಿಕ ತಂಡವೊಂದು ಯಕ್ಷಗಾನವನ್ನು ಮರಾಠಿ ಭಾಷೆಗೆ ಅನುವಾದಿಸಿ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರಸ್ತುತ ಪಡಿಸಲು ಸಿದ್ಧತೆ ನಡೆಸಿದೆ.
ಯಕ್ಷಗಾನ ಈಗಾಗಲೇ ಕನ್ನಡ, ಇಂಗ್ಲಿಷ್, ತುಳು ಹಾಗೂ ಸಂಸ್ಕೃತ ಭಾಷೆಗೆ ಅನುವಾದಗೊಂಡಿದೆ. ಇದೀಗ ಅತ್ಯಂತ ಪ್ರಭಾವಶಾಲಿ ರಂಗಭೂಮಿ
ಯಾಗಿ ಗುರುತಿಸಿಕೊಂಡ ಮರಾಠಿಗೆ ಭಾಷಾಂತರಗೊಳ್ಳುವ ಮೂಲಕ ತಲೆಮಾರುಗಳಿಂದ ಮಹಾರಾಷ್ಟ್ರದಲ್ಲಿ ನೆಲೆ ನಿಂತ ಕನ್ನಡಿಗರಿಗೆ ಯಕ್ಷಗಾನ ಕಲೆಯ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಪುಣೆ ವಿದ್ವಾಂಸರ ತಂಡ ಉಡುಪಿಗೆ ಪುಣೆಯ ತಂಡ ಮೇ 29ರಂದು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಭೇಟಿ ನೀಡಿ ಯಕ್ಷಗಾನ ಕಲೆಗೆ ಸಂಬಂ« ಪಟ್ಟ ಪುಸ್ತಕಗಳ ಅಧ್ಯಯನ ಮಾಡುತ್ತಿದೆ. ಕೇಂದ್ರದ ಯಕ್ಷಗುರು ಸಂಜೀವ ಸುವರ್ಣ ಅವರಿಂದ ಯಕ್ಷಗಾನ ಕಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಭಿಮನ್ಯು ಕಾಳಗ ಹಾಗೂ ಸೀತಾ ಪಹರಣ ಪ್ರಸಂಗವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7 ಪ್ರಸಂಗ ಮರಾಠಿಗೆ ಅನುವಾದ
ವಾಲಿ ಮೋಕ್ಷ, ಪಾಂಡವರ ವನ ವಾಸ ಸೇರಿದಂತೆ ಒಟ್ಟು 7 ಪ್ರಸಂಗಗಳನ್ನು ಮರಾಠಿಗೆ ಅನುವಾದಿಸಿ ಪುಸಕ್ತದ ರೂಪದಲ್ಲಿ ಅಗಸ್ಟ್ನಲ್ಲಿ ಬಿಡು
ಗಡೆ ಮಾಡಲಾಗುತ್ತದೆ. ಅನಂತರ ದಿನದಲ್ಲಿ ಪುಣೆಯಲ್ಲಿ ನೆಲೆ ನಿಂತ ಕನ್ನಡಿಗರ ಸಂಘಟನೆಯ ಸಹಾಯದಿಂದ ಮರಾಠಿ ಭಾಷೆಯಲ್ಲಿ ಪುಣೆಯಲ್ಲಿ ಪ್ರದರ್ಶನ ಮಾಡಲಾಗು ತ್ತದೆ. ಮುಂದೆ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆಯಲ್ಲಿ ಮರಾಠಿ ಭಾಷೆಯ ಯಕ್ಷಗಾನವನ್ನು ವಿಸ್ತರಿಸುವ ಗುರಿಯನ್ನು ಈ ತಂಡ ಹೊಂದಿದೆ. ಮೂಲ ಸ್ವರೂಪದಲ್ಲಿ ಕರಾವಳಿ ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮರಾಠಿಗೆ ಭಾಷಾಂತರ ಪಡಿಸುವ ಕುರಿತು ಪುಣೆ ತಂಡ ಭರವಸೆ ನೀಡಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ ಕೇಂದ್ರದ ಕಲಾವಿದರು ಹಾಗೂ ಹಿಮ್ಮೇಳದವರಿಂದ ಪುಣೆಯ ಆಸಕ್ತ ಕಲಾವಿದರಿಗೆ ತರಬೇತಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
MUST WATCH
ಹೊಸ ಸೇರ್ಪಡೆ
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ