ಯಡ್ತರೆ ರಾಹುತೇಶ್ವರ ಬಾಲಕ – ಬಾಲಕಿಯರ ಯಕ್ಷಗಾನ ಸಂಘ ಉದ್ಘಾಟನೆ
Team Udayavani, Jan 1, 2019, 9:15 PM IST
ಬೈಂದೂರು: ಇಲ್ಲಿನ ಡಾ ಬಿ ಆರ್ ಅಂಬೇಡ್ಕರ್ ಮಹಿಳಾ ಸಂಘ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಯಡ್ತರೆ ರಾಹುತೇಶ್ವರ ಬಾಲಕ-ಬಾಲಕಿಯರ ಯಕ್ಷಗಾನ ಸಂಘ ಉದ್ಘಾಟನಾ ಸಮಾರಂಭ ಯಡ್ತರೆ ಸ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು.ನಿವೃತ್ತ ಐ.ಎಫ್.ಎಸ್ ಅಧಿಕಾರಿ ಬಿ.ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಕಲಾವಿದರು ಬದುಕಿನಲ್ಲಿ ಏನೇ ಕಷ್ಟಬಂದರೂ ಅವರು ಯಕ್ಷಗಾನದಿಂದ ವಿಮುಖರಾಗದೆ ಕಲೆಯಲ್ಲಿಯೇ ಜೀವನವನ್ನು ಮುಡಿಪಾಗಿರಿಸಿಕೊಂಡಿರುವುದರಿಂದ, ನಿಜವಾದ ಕಲಾ ತಪಸ್ವಿಗಳು. ಯಕ್ಷಗಾನ ವೃತ್ತಿ ಸಂಸ್ಕಾರ, ಸಂಸ್ಕೃತಿ, ಇತಿಹಾಸ ತತ್ವಜ್ಞಾನವನ್ನು ಕಲಿಸುತ್ತದೆ. ಆದರೆ ಬೈಂದೂರಿನ ಡಾ ಬಿ ಆರ್ ಅಂಬೇಡ್ಕರ್ಮಹಿಳಾ ಸಂಘದವರು ಮಕ್ಕಳಿಗೆ ತರಬೇತಿಯನ್ನು ಆಯೋಜಿಸಿರುವುದು ಶ್ಲಾಘನಿಯ ಎಂದ ಅವರು ಇದರಿಂದ ಮಕ್ಕಳ ಸಂಸ್ಕೃತಿ ಪರಿಜ್ಞಾನ ಹಾಗೂ ವಾಕ್ ಸಾಮರ್ಥ್ಯ ಹೆಚ್ಚುತ್ತದೆ ಎಂದರು.
ಯಡ್ತರೆ ರಾಹುತೇಶ್ವರ ಬಾಲಕ-ಬಾಲಕಿಯರ ಯಕ್ಷಗಾನ ಸಂಘದ ಅಧ್ಯಕ್ಷೆ ಗೀತಾ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಸ.ಹಿ.ಪ್ರಾ. ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ದೇವಾಡಿಗ ಯಡ್ತರೆ, ಕುಂದಾಪುರ ವಕೀಲ ಮಂಜುನಾಥ ಗಿಳಿಯಾರು, ಬೈಂದೂರು ಡಾ ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯ ಮಾಸ್ತಿಕಟ್ಟೆ, ಯಕ್ಷಗಾನ ಕಲಾವಿದ ನಾಗೇಂದ್ರ ರಾವ್ ಉಪ್ಪುಂದ, ಯಡ್ತರೆ ಸ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕಿ ಪಾರ್ವತಿ, ಬೈಂದೂರು ರೋಟರಿ ಕ್ಲಬ್ನ ನಿಕಟಪೂರ್ವಾಧ್ಯಕ್ಷ ಕೃಷ್ಣಪ್ಪ ಶೆಟ್ಟಿ ಹುಂಚನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನದ ಕಲಾವಿದ ಹಾಗೂ ಯಕ್ಷಗಾನದ ತರಬೇತಿ ಗುರು ಶ್ರೀಧರ ಗಾಣಿಗ ಅವರಿಗೆ ಮಕ್ಕಳಿಂದ ಗುರುವಂದನೆ ಕಾರ್ಯ ನಡೆಯಿತು ಹಾಗೂ ಸಂಘದ ವತಿಯಿಂದ ಯಡ್ತರೆ ಆಶಾ ಕಾರ್ಯಕರ್ತೆ ಮಂಜಮ್ಮ ಶೆಡ್ತಿ ಅವರನ್ನು ಗೌವಿಸಲಾಯಿತು. ಸಂಘದ ಮಾಲಾ ಸ್ವಾಗತಿಸಿದರು, ಕಾರ್ಯದರ್ಶಿ ರೇವತಿ ಪ್ರಾಸ್ತಾವಿಕ ಮಾತನಾಡಿದರು, ಕೋಶಾಧಿಕಾರಿ ಶ್ಯಾಮಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್