ತಿರುಗಾಟಕ್ಕೆ ಹೊರಟ ಮೇಳಗಳು: ಯಕ್ಷಪಯಣ ಆರಂಭ


Team Udayavani, Nov 12, 2018, 2:15 AM IST

yakshagana-600.jpg

ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ ಯಕ್ಷಲೋಕ ಅನಾವರಣಗೊಳ್ಳಲಿದೆ.

ಚಾಲನೆ
ನವರಸಗಳನ್ನು ಸ್ಪುರಿಸುವ, ಭಕ್ತಿಭಾವದಲ್ಲಿ ಮಿಂದೇಳಿಸುವ, ಯಕ್ಷಗಾನದ ಮೇಳಗಳ ಈ ವರ್ಷದ ತಿರುಗಾಟಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆತಿದೆ. ಸರಿಸುಮಾರು 190 ಆಟಗಳನ್ನು ಈ ತಿರುಗಾಟದಲ್ಲಿ ಮೇಳಗಳು ಪ್ರದರ್ಶಿಸಲಿವೆ. ಇಂದಿನಿಂದ ಪತ್ತನಾಜೆವರೆಗೆ ತಿರುಗಾಟ ಇರುತ್ತದೆ. ಮಳೆಗಾಲದಲ್ಲಿ ಮೊದಲು ಕಲಾವಿದರಿಗೆ ಪೂರ್ಣವಿರಾಮ ಇದ್ದರೂ ಈಗ ಗಾನವೈಭವ, ನಾಟ್ಯವೈಭವ, ಕಾಲಮಿತಿ ಯಕ್ಷಗಾನಗಳ ಮೂಲಕ ಕಲಾವಿದರೂ ಬಿಡುವಿಲ್ಲದೇ ಕಲಾಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಷ್ಟಕ್ಕಿಲ್ಲ ಸ್ಪಂದನೆ
ಇರುಳಲ್ಲಿ ಸ್ವರ್ಗಾಧಿಪತಿಯಾದರೂ ವೇಷ ತೆಗೆದಾಗ ನರಕಯಾತನೆ ತಪ್ಪಿದ್ದಲ್ಲ. ಇಂತಹ ಸಂಕಷ್ಟ ಉಳ್ಳ ಕಲಾವಿದರಿಗೆ ನೆರವಾಗಲು ಧರ್ಮಸ್ಥಳದಂತಹ ಕೆಲವು ಮೇಳಗಳು ವಿಮೆ ಮಾಡಿಸುತ್ತಿವೆ. ಕಟೀಲಿನಂತಹ ಮೇಳಗಳು ಮಳೆಗಾಲದ ಅವಧಿಯಲ್ಲಿ ಅರ್ಧ ಸಂಬಳ ಕೊಡುತ್ತಿವೆ. ಯಕ್ಷಗಾನ ಸಂಬಂಧಿ ಯಕ್ಷಧ್ರುವ ಪಟ್ಲದಂತಹ ಸಂಘಟನೆಗಳು ಒಂದಷ್ಟು ನೆರವಾಗುತ್ತಿವೆ. ಮಂದರ್ತಿ ಮೇಳ ವರ್ಷವಿಡೀ ಹರಕೆಯಾಟ ಆಡಿಸುವ ಮೂಲಕ ಕಲಾವಿದರಿಗೆ ವಿರಾಮದ ದಿನಗಳಲ್ಲಿ ಕೆಲಸ ಇಲ್ಲ ಎಂಬ ಅಪವಾದ ತೆಗೆದುಹಾಕಿದೆ. ಆದರೆ ಸರಕಾರ, ಅಕಾಡೆಮಿ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂಬ ಕೂಗು ಕಲಾವಿದರದ್ದು.

ಬೇಡಿಕೆ
50ಕ್ಕಿಂತ ಅಧಿಕ ಮೇಳಗಳು ತೆಂಕು ಬಡಗಿನಲ್ಲಿದ್ದರೂ ಯಕ್ಷಗಾನದ ಬೇಡಿಕೆ ಕುಂದಿಲ್ಲ. ಕಟೀಲು, ಮಂದರ್ತಿ, ಧರ್ಮಸ್ಥಳ ಮೊದಲಾದ ಮೇಳಗಳಿಗೆ ಇನ್ನೂ ಕೆಲವು ದಶಕಗಳಿಗೆ ಆಗುವಷ್ಟು ಹರಕೆ ಯಕ್ಷಗಾನಗಳಿಗೆ ಬೇಡಿಕೆ ಇದೆ. ಈ ವರ್ಷ ತೆಂಕಿನಲ್ಲಿ ಸುಬ್ರಹ್ಮಣ್ಯ ಮೇಳ ಹೊಸದಾಗಿ ಆರಂಭವಾಗುತ್ತಿದೆ. ಟೆಂಟಿನ ಮೇಳಕ್ಕೆ ಕಲೆಕ್ಷನ್‌ ಕಮ್ಮಿ ಎನ್ನುವ ಅಪವಾದ ಇದೆ. ಈ ನಿಟ್ಟಿನಲ್ಲಿ ಕಾಲಮಿತಿ ಪ್ರದರ್ಶನಗಳ ಕಡೆಗೆ ಜನರ ಒಲವು ಹೆಚ್ಚುತ್ತಿದೆ.

ಮೇಳಗಳ ಆರಂಭ ದಿನಾಂಕ
ಬಡಗುತಿಟ್ಟು

ಹಟ್ಟಿಯಂಗಡಿ ಮೇಳ ನ. 11, ಮೇಗರವಳ್ಳಿ ಮೇಳ ನ. 11, ಪೆರ್ಡೂರು ಮೇಳ ನ.12, ಸಾಲಿಗ್ರಾಮ ಮೇಳ ನ.15, ಕಮಲಶಿಲೆ ಮೇಳ ನ. 17, ಅಮೃತೇಶ್ವರಿ ಮೇಳ ನ.17, ಆಜ್ರಿ ಮೇಳ ನ.17, ಮಾರಣಕಟ್ಟೆ ಮೇಳ ನ. 18, ಮಂದಾರ್ತಿ ಮೇಳ ನ. 19, ಸೌಕೂರು  ಮೇಳ  ನ. 19, ಗೋಳಿಗರಡಿ ಮೇಳ ನ. 20, ನೀಲಾವರ ಮೇಳ ನ.21, ಹಾಲಾಡಿ ಮೇಳ ನ.26.  

ತೆಂಕುತಿಟ್ಟು
ಶ್ರೀ ಧರ್ಮಸ್ಥಳ ಮೇಳ ನ. 14, ಹನುಮಗಿರಿ ಮೇಳ ನ.21, ಸುಂಕದಕಟ್ಟೆ ಮೇಳ ನ. 21, ಶ್ರೀ ದೇಂತಡ್ಕ ಮೇಳ ನ. 23, ಸಸಿಹಿತ್ಲು ಮೇಳ ನ.25, ಬಪ್ಪನಾಡು ಮೇಳ ನ.30, ಕಟೀಲು ಮೇಳಗಳು ಡಿ.2, ಮಂಗಳಾದೇವಿ ಮೇಳ (ಡಿಸೆಂಬರ್‌ ಪ್ರಥಮ ವಾರದಲ್ಲಿ), ಬಾಚಕೆರೆ ಮೇಳ (ನವೆಂಬರ್‌ ಕೊನೆಯ ವಾರ) ತಿರುಗಾಟಕ್ಕೆ ಹೊರಡಲಿವೆ.

ಹೊಸಪ್ರಸಂಗ
ಟೆಂಟ್‌ ಮೇಳಗಳಾದ ಪೆರ್ಡೂರು ಮೇಳದವರು ಶತಮಾನಂ ಭವತಿ, ಸಾಲಿಗ್ರಾಮ ಮೇಳದವರು ಚಕ್ರ ಪೌರ್ಣಮಿ, ಕಸ್ತೂರಿ ತಿಲಕ ಪ್ರಸಂಗಗಳನ್ನು ಈ ವರ್ಷದ ನೂತನ ಆಖ್ಯಾನವಾಗಿ ಪ್ರದರ್ಶಿಸಲಿವೆ. 

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.