“ಚಲನಶೀಲತೆ, ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತ’


Team Udayavani, May 13, 2019, 6:16 AM IST

chalanasheelate

ಉಡುಪಿ: ಚಲನಶೀಲತೆ ಮತ್ತು ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತವಾಗಿದೆ. ಇದೇ ಕಾರಣಕ್ಕೆ ವಿಶ್ವದ ರಂಗಭೂಮಿಯಲ್ಲಿ ಯಕ್ಷಗಾನ ಕಲೆ ಪ್ರಸಿದ್ದಿ ಪಡೆದಿದೆ ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ ಹೇಳಿದರು.

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಕ್ಷೇತ್ರದಲ್ಲಿ ಅಕಾಡೆಮಿಕ್‌ ಮತ್ತು ಶೈಕ್ಷಣಿಕೇತರ ಎಂಬ ಎರಡು ರೀತಿಯ ಬದುಕಿದೆ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ತಮ್ಮ 40 ವರ್ಷಗಳ ಅವಧಿಯಲ್ಲಿ ಮಾಡಿದ ಕೆಲಸ ಅಕಾಡೆಮಿಕ್‌ ನೆಲೆಯಲ್ಲಿದೆ. ಮತ್ತೂಂದು ಕೆಲಸವನ್ನು ಕಲಾರಂಗ ಮಾಡುತ್ತಿದೆ ಎಂದರು.

ಯಕ್ಷಗಾನ ಪರಂಪರೆ, ಸಂರಕ್ಷಣೆ, ಪ್ರಯೋಗಗಳ ಬಗ್ಗೆ ಪ್ರಶ್ನೆಗಳಿವೆ. ಇದಕ್ಕೆ ಬೊಟ್ಟಿಕೆರೆಯವರ ಕೆಲಸದಿಂದ ನಾವು ಉತ್ತರ ಕಂಡುಕೊಳ್ಳಬಹುದು. ಶೈಕ್ಷಣಿಕವಾಗಿ ಅವರ ಕೆಲಸಗಳನ್ನು ಪರಿಶೀಲಿಸಬೇಕು ಎಂದರು.

ಮುಂದಿನ ತಲೆಮಾರಿಗೆ ಯಕ್ಷಗಾನ
ಮುಂದಿನ ತಲೆಮಾರಿಗೆ ಯಕ್ಷಗಾನ ತಲುಪುವ ನಿಟ್ಟಿನಲ್ಲಿ ಕಲಾವಿದರಿಗೆ ಯಕ್ಷಗಾನ ಕಲೆಗೆ ಸಂಬಂಧಿಸಿ ಇರುವ ಸಮಸ್ಯೆ, ಯೋಜನೆ, ಜಾಹೀರಾತು ಸಹಿತ ವಾಣಿಜ್ಯ ಮುಖಗಳ ಅನೇಕ ಪ್ರಶ್ನೆಗಳು ಎರಡನೇ ಬದುಕಿಗೆ ಸಂಬಂಧಿಸಿವೆ ಎಂದರು.

ತೂಕದ ಕಲೆ
ಯಕ್ಷಗಾನ ತೂಕದ ಕಲೆಯಾಗಿದೆ. ಸಾಹಿತ್ಯ ಮತ್ತು ಬಣ್ಣಕ್ಕೆ ತೂಕ ಇದೆ. ಯಕ್ಷಗಾನದ ಔಚಿತ್ಯ, ಲಯದ ಪ್ರತೀಕವಾಗಿ ಬೊಟ್ಟಿಕೆರೆಯವರು ಕಾಣುತ್ತಾರೆ. ಪರಂಪರೆಯ ಗಾಂಭೀರ್ಯ, ಆಧುನಿಕತೆಯ ಉತ್ಸಾಹ ಪೂಂಜಾರಲ್ಲಿದೆ ಎಂದರು.

ಸಮ್ಮಾನ
ಭಾಗವತ, ಬಹುಮುಖ ಪ್ರತಿಭೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ದಂಪತಿಯನ್ನು ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಾರಂಗವು ಯಕ್ಷಗಾನಕ್ಕಾಗಿಯೇ ಯಕ್ಷಗಾನ ಆಸಕ್ತರಿಂದ ರಚಿಸಲ್ಪಟ್ಟ ಸಂಸ್ಥೆ. ಕಲಾವಿದರ ಸಮಸ್ಯೆಗಳನ್ನು ನಿವಾರಿಸಿ ಕಲೆ, ಕಲಾವಿದರಿಗೆ ಲೋಪವಾಗದಂತೆ ಯಕ್ಷಗಾನ ಸಾಗುವಂತೆ ಮಾರ್ಗದರ್ಶನ ಮಾಡುವ, ಕಲಾವಿದರಿಗೆ ಪ್ರೋತ್ಸಾಹ ನೀಡುವ, ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹ ನೀಡುವಂತಹ ಘನ ಉದ್ದೇಶವಿರುವ ಸಂಸ್ಥೆ ಎಂದರು.

ಕಲಾವಿದರ ಸಾಮರ್ಥ್ಯ ತಿಳಿಯುವ ಗುಣ
ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌ ಅಭಿನಂದನ ಭಾಷಣಗೈದು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಕಲಾವಿದರ ಸಾಮರ್ಥ್ಯವನ್ನು ತಿಳಿಯುವ ಗುಣವಿದೆ. ರಂಗದಲ್ಲೇ ಸ್ವಯಂಸ್ಫೂರ್ತಿಯಿಂದ ಆಶುಕವಿತ್ವ ರಚಿಸುವ ಗುಣ ಹೊಂದಿದ್ದು, ಸಾಹಿತ್ಯದ ಮೂಲಕ ವಿಶೇಷ ಮೆರುಗು ಹೊಂದಿದ್ದಾರೆ. ಇವರ ಸಾಹಿತ್ಯ, ಪ್ರಸಂಗ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಬೊಟ್ಟಿಕೆರೆಯವರು ರಂಗಧರ್ಮವನ್ನು ಅರಿತಿರುವ ಭಾಗವತರಾಗಿದ್ದಾರೆ. ರಂಗದೊಳಗೆ ತನ್ನನ್ನು ತಾನು ಲೀನವಾಗಿಸಿಕೊಳ್ಳುತ್ತಾರೆ. ಮರುದಿನ ಅದರ ಮರುವ್ಯಾಖ್ಯಾನವನ್ನೂ ಮಾಡುತ್ತಿದ್ದರು. ಈ ಮೂಲಕ ಅವರು ಕಲಾವಿದರ ಸಾಮರ್ಥ್ಯವನ್ನು ತಿಳಿಯುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಡಾ| ತಲ್ಲೂರು ಶಿವರಾಮ ಶೆಟ್ಟಿ ದಂಪತಿ, ಕಟೀಲು ಮೇಳದ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಎಂ.ಎಲ್‌.ಸಾಮಗ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಕೆ.ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಲೀ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದದರು.

ಮದುವೆಯಲ್ಲಿ ಯಕ್ಷಗಾನ; ಹೊಸ ಪ್ರಯೋಗ
ಮದುವೆಯಲ್ಲಿ ಯಕ್ಷಗಾನದ ವೇಷ ಹಾಕಿದ ಕಾರಣಕ್ಕೆ ನಮ್ಮ ಪರಂಪರೆ ಹಾಳಾಗುವುದಿಲ್ಲ. ಪ್ರಯೋಗಗಳಿಂದ ಪರಂಪರೆ ಉಳಿಯಬೇಕು. ಇಂತಹ ಪ್ರಯೋಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಅದು ಯಕ್ಷಗಾನ ಪರಂಪರೆಯೊಳಗೆ ಬರುವುದಿಲ್ಲ. 150 ವರ್ಷಗಳ ಹಿಂದಿನ ಯಕ್ಷಗಾನ ಕಲೆಯನ್ನು ಪುನರ್‌ನಿರ್ಮಿಸುವ ಅಗತ್ಯವಿದೆ ಎಂದು ಡಾ| ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.