ವಿಶ್ರಾಂತಿ ಇಲ್ಲದೆ ಒತ್ತಡವೇ ಹೆಚ್ಚಿರುವ ಬದುಕಿಗೆ ಯೋಗವೇ ಬೇಕು


Team Udayavani, Jun 22, 2019, 11:10 AM IST

SHOBHA-SHETTY

ಬದುಕಿನಲ್ಲಿ ಯೋಗ-ಭಾಗ್ಯ ಒಟ್ಟಿಗೆ ಸಾಗಬೇಕೆಂದರೆ “ಯೋಗ’ ಇರಲೇಬೇಕು. “ಯೋಗ ಜೀವನ ‘ ಅಂಕಣ ಇಂದಿನಿಂದ ಆರಂಭ. ಒಂದು ತಿಂಗಳ ಕಾಲ ಹಲವಾರು ಯೋಗ ಗುರುಗಳು ಇಂದಿನ ಬದುಕಿಗೆ ಯೋಗದ ಅಗತ್ಯವನ್ನು ಇಲ್ಲಿ ವಿವರಿಸುವರು.

ಉಡುಪಿ: ಈಗ ಮಹಿಳೆಯರಿಗೆ ಮನೆ ಕೆಲಸದ ಜತೆ ಉದ್ಯೋಗದ ಧಾವಂತವೂ ಇದೆ. ಮಹಿಳೆಯರಿಗೆ ರೆಸ್ಟ್‌ ಇಲ್ಲವಾಗಿದೆ, ಸ್ಟ್ರೆಸ್‌ ಹೆಚ್ಚಿಗೆಯಾಗಿದೆ. ಆದ್ದರಿಂದ ಮಹಿಳೆಯರಿಗೆ ಯೋಗಾಸನ ಅತ್ಯಗತ್ಯ ಎನ್ನುತ್ತಾರೆ ಯೋಗ ಪಟು, “ಯೋಗಾಚಾರ್ಯ’ ಬಿ.ಕೆ.ಎಸ್‌. ಅಯ್ಯಂಗಾರರ ಶಿಷ್ಯೆ ಶೋಭಾ ಶೆಟ್ಟಿ.

* ಮಹಿಳೆಯರಿಗೆ ಯೋಗಾಸನ ಬೇಕೆ?
ಖಂಡಿತವಾಗಿ. ಮಹಿಳೆಯರು ಕುಟುಂಬ ವನ್ನು ಸಲಹುವ ಜತೆಗೆ ಉದ್ಯೋಗವನ್ನು ನಿಭಾಯಿಸಬೇಕಿದೆ. ಈ ಕಾಲದಲ್ಲಿ ಮಹಿಳೆಯ ರಿಗೆ ವಿಶ್ರಾಂತಿ ಎಂಬುದಿಲ್ಲ. ಇರುವುದು ಸ್ಟ್ರೆಸ್‌ ಮಾತ್ರ. ಕೆಲಸಕ್ಕೆ ಹೋಗುವುದರಿಂದ ಕುಳಿತು ಕೊಂಡು ಕೆಲಸ ಮಾಡಿ ಬೆನ್ನು ನೋವು, ಕಾಲು ನೋವು ಬರುತ್ತದೆ. ಇದೆಲ್ಲದರ ಒತ್ತಡ ಕಡಿಮೆ ಮಾಡಲು ಯೋಗಾಸನಕ್ಕೆ ಶರಣಾಗಬೇಕು.

* ಯಾವ ಯಾವ ಆಸನಗಳು ಸೂಕ್ತ?
ಎಲ್ಲ ಆಸನಗಳನ್ನೂ ಮಾಡಬಹುದು. ಒಂದೊಂದು ಆಸನಗಳ ಲಾಭ ಒಂದೊಂದು ಬಗೆ. ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಸೇತುಬಂಧ ಸರ್ವಾಂಗಾಸನ, ವಿಪರೀತ ಕರಣಿ-ಈ 5 ಆಸನಗಳನ್ನು ಎಲ್ಲರೂ ಮಾಡ ಬೇಕು. ಇದರಿಂದ ಹಾರ್ಮೋನ್‌ ಸಿಸ್ಟಮ್‌ ಸರಿಯಾಗುತ್ತದೆ ಎಂದು ಗುರೂಜಿ ಬಿ.ಕೆ.ಎಸ್‌. ಅಯ್ಯಂಗಾರ್‌ ಹೇಳುತ್ತಿದ್ದರು.

* ಮಹಿಳೆಯರಿಗೆ ಕೆಲಸದ ಒತ್ತಡದ ಜತೆಗೆ ಯೋಗಾಭ್ಯಾಸ ಕಷ್ಟವಲ್ಲವೆ?
ಏನಾದರೂ ಸಮಯ ಹೊಂದಾಣಿಕೆ ಮಾಡಿ ಕೊಂಡು ಯೋಗಾಭ್ಯಾಸ ಮಾಡಬೇಕು. ಉದಾಹರಣೆಗೆ, ಬೆಳಗ್ಗೆ ಸ್ವಲ್ಪ ಹೊತ್ತು, ಸಂಜೆ ಸ್ವಲ್ಪ ಹೊತ್ತು ಯೋಗಾಭ್ಯಾಸ ಮಾಡಬಹುದು. ಸುಸ್ತಾಗಿ ಬಂದು ಮಲಗಿದಾಗಲೇ ಸುಪ್ತ ಪಾದಾಂಗುಷ್ಠಾಸನವನ್ನು ಮಾಡಬಹುದು. ದಿಂಬಿನ ಮೇಲೆ ಅಂಗಾತ ಮಲಗಿ ಸುಪ್ತಬದ್ಧ ಕೋನಾಸನವನ್ನು ಮಾಡಬಹುದು. ಇದೆಲ್ಲ ದೇಹವನ್ನು ರೀಚಾರ್ಜ್‌ ಮಾಡುತ್ತದೆ. ಸುಮ್ಮನೆ ನಿಂತುಕೊಂಡು ಮಾಡುವ ಆಸನಗಳೂ ಇವೆ.

* ಗರ್ಭಿಣಿಯರಿಗೆ ಯೋಗಾಸನ ಸೂಕ್ತವೆ?
ಹೌದು. ಆದರೆ ಗರ್ಭಿಣಿಯರಾದಾಗಲೇ ಯೋಗಾಸನವನ್ನು ಶುರು ಮಾಡಬಾರದು. ಮೊದಲೇ ಯೋಗಾಭ್ಯಾಸ ಮಾಡುತ್ತಿದ್ದು, ಗರ್ಭಿಣಿಯರಾದ ಬಳಿಕ ಮುಂದುವರಿಸಿದರೆ ಉತ್ತಮ.

ಕಾರ್ಕಳ ತಾಲೂಕು ನೀರೆಯವರಾದ ಶೋಭಾ ಶೆಟ್ಟಿಯವರು ಹುಟ್ಟಿದ್ದು ಬೆಳೆದದ್ದು ಪುಣೆಯಲ್ಲಿ. 1979ರಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿದಾಗ ಪುಣೆಯ ಬಿ.ಕೆ.ಎಸ್‌. ಅಯ್ಯಂಗಾರರ ಸಂಸ್ಥೆಗೆ ಸೇರಿದರು. ಅಲ್ಲಿ ಬಿಎ ಪದವಿ ಓದಿದ ಶೋಭಾ ಅನಂತರ ಯೋಗ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿದರು. 1985ರಲ್ಲಿ ಉಡುಪಿಗೆ ಮದುವೆಯಾಗಿ ಬಂದ ಬಳಿಕ ಉಡುಪಿ ಮಿಶನ್‌ ಕಂಪೌಂಡ್‌ನ‌ಲ್ಲಿರುವ ಮನೆಯಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಮಂದಬುದ್ಧಿಯವರಿಗೂ ಯೋಗಾಸನದ ಮೂಲಕ ಚುರುಕು ಬುದ್ಧಿ ಬರುವಂತೆ ಮಾಡಿದ ಉದಾಹರಣೆಗಳೂ, ಸಹಜ ಹೆರಿಗೆಗೆ ಬೇಕಾದ ಯೋಗಾಸನಗಳನ್ನು ಕಲಿಸಿಕೊಟ್ಟ ಉದಾಹರಣೆಗಳೂ ಇವೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.