ಹೆಚ್ಚಿದ ಸಂಚಾರ; ಮರೆತರು ಅಂತರ
Team Udayavani, Apr 9, 2020, 3:04 PM IST
ಹಳಿಯಾಳ: ಪಟ್ಟಣದ ಬ್ಯಾಂಕ್ವೊಂದರ ಬಳಿ ಜನಜಂಗುಳಿ
ಹಳಿಯಾಳ: ಕಳೆದೆರಡು ದಿನಗಳಿಂದ ಪಟ್ಟಣದಲ್ಲಿ ಜನಸಂಚಾರ ಹೆಚ್ಚಿದ್ದು, ಬೈಕ್ ಗಳ ಓಡಾಟ ಮಿತಿ ಮೀರಿರುವುದು ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜನಧನ ಖಾತೆಗೆ 500 ರೂ. ಹಾಕಿದ್ದು ಅದನ್ನು ಬೇಗ ತೆಗೆದುಕೊಳ್ಳದಿದ್ದರೆ ವಾಪಸ್ ಹೋಗುತ್ತದೆ ಎಂಬ ವದಂತಿ ನಂಬಿ ಜನರು ಬ್ಯಾಂಕ್ಗಳಿಗೆ ಮುಗಿಬೀಳುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಪುರಸಭೆಯಿಂದ ಹಾಲು, ತರಕಾರಿ, ಕಿರಾಣಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ಉದ್ದೇಶಕ್ಕಾಗಿ ಸುಮಾರು 300 ಪಾಸ್ ಗಳನ್ನು ನೀಡಲಾಗಿದೆ. ಎಪಿಎಮ್ಸಿಯಿಂದ ರೈತರಿಗೆ 70ಕ್ಕೂ ಹೆಚ್ಚು ಪಾಸ್, ತಹಶೀಲ್ದಾರ್ ಕಚೇರಿಯಿಂದ 150ಕ್ಕೂ ಹೆಚ್ಚು ಪಾಸ್ ಪೂರೈಸಲಾಗಿದೆ. ಕೆಲವರು ಪಾಸ್ಗಳ ದುರುಪಯೋಗ ಪಡೆದು ವಿನಾಕಾರಣ ಸುತ್ತಾಡುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಐದು ಪ್ರಮುಖ ಸ್ಥಳ ಗುರುತಿಸಿ ನಾಕಾಬಂಧಿ ಮಾಡಿ ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಹಾಗೂ ಬುಧವಾರ ಸ್ವತಃ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರೇ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿದ್ದು ಪರಿಶೀಲನೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ