ಇನ್ನೂ ಆಗಬೇಕಿದೆ 150 ಮಂಗಲ ಕಾರ್ಯ

ಎಚ್ಚರ ತಪ್ಪಿದರೆ ಅಮಂಗಲ ಕಟ್ಟಿಟ್ಟ ಬುತ್ತಿ!

Team Udayavani, May 19, 2021, 7:30 PM IST

cats

ವರದಿ : ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚಳಕ್ಕೆ ನಿರಂತರವಾಗಿ ನಡೆದ ವಿವಾಹಗಳೇ ಕಾರಣ ಎಂದು ಸಮೀಕ್ಷೆಗಳು ದೃಢಪಡಿಸಿವೆ.

ವಿವಾಹ ಸಮಾರಂಭಕ್ಕೆ ಹೋಗಿ ಬಂದವರಿಗೆ ಸೋಂಕು ತಗುಲಿ ಮೃತಪಟ್ಟ ಘಟನೆಗಳೂ ನಡೆದಿವೆ. ಒಂದು ಮದುವೆ ಸಾವಿರಾರು ಜನರಿಗೆ ಸೋಂಕು ತಲುಗಿಸುವಂತೆ ಮಾಡಿತ್ತು. ಕಾರಣ ಹೊಸತಾಗಿ ವಿವಾಹಗಳಿಗೆ ಅನುಮತಿ ಇಲ್ಲ, ಅನುಮತಿ ನೀಡಲಾದ ಮದುವೆಗೆ ಜನರ ಮಿತಿ 20ಕ್ಕೆ ಇಳಿಸಿ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ, ನಿರ್ಬಂಧ ಹೇರುವ ಮೊದಲೇ ನೀಡಲಾದ 227 ವಿವಾಹಗಳಲ್ಲಿ ಬುಧವಾರದಿಂದ ಇನ್ನೂ 150 ವಿವಾಹಗಳು ನಡೆಯಬೇಕಾಗಿದೆ! ಸಮಸ್ಯೆ ಆಗಿದ್ದವು: ಜಿಲ್ಲೆಯಲ್ಲಿ ನಿತ್ಯ 1000 ದಿಂದ 1200 ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ.

ಸಾವಿನ ಪ್ರಮಾಣ ಕೂಡ ಸೋಂಕಿತರಲ್ಲಿ ಆತಂಕ ಮೂಡಿಸುವಷ್ಟು ಹೆಚ್ಚಲು ಆರಂಭವಾಗಿತ್ತು. ಜಿಲ್ಲೆಯ ಕಾರವಾರ, ದಾಂಡೇಲಿ ನಗರ ಸಹಿತ 19 ಗ್ರಾಪಂಗಳನ್ನೂ ಸೀಲ್‌ಡೌನ್‌ ಮಾಡಲಾಗಿದೆ. ಇದಕ್ಕೆಲ್ಲ ಬಹುತೇಕ ಕಾರಣ ಆಯಾ ಭಾಗದಲ್ಲಿ ನಡೆದ ಮದುವ ಶೇ.40 ಕ್ಕಿಂತ ಅಧಿಕ ಹೆಚ್ಚು ಸೋಂಕುಗಳನ್ನು ಹಂಚಲು ಕಾರಣವಾಗಿದ್ದವು. ಎರಡನೇ ಕೋವಿಡ್‌ ಅಲೆ ಆರಂಭವಾಗುತ್ತಿದ್ದಂತೆ 40 ಜನರಿಗೆ ವಿವಾಹಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌, ವಿವಾಹ ಸಮಾರಂಭಗಳಿಗೆ ಅನಿವಾರ್ಯವಾಗಿ ಅದರ ಮಿತಿಯನ್ನು 20ಕ್ಕೆ ಇಳಿಸಿ ಆದೇಶ ಮಾಡಿದ್ದರು. ಹೊಸತಾಗಿ ಅನುಮತಿ ಕೇಳಿದರೆ ನೀಡಲಾಗುವುದಿಲ್ಲ ಎಂಬ ಆದೇಶ ಕೂಡ ಮಾಡಿದ್ದರು. ಈಗಾಗಲೇ ತಹಶೀಲ್ದಾರ್‌ ಮೂಲಕ ಕೊಟ್ಟ ವಿವಾಹ ಸಮಾರಂಭಗಳೇ 227ಕ್ಕೂ ಅಧಿಕ ಇದ್ದವು. ಈ ಪೈಕಿ ಕೆಲವು ಗ್ರಾಮಗಳೇ ಸೀಲ್‌ಡೌನ್‌ ಆಗಿದ್ದರಿಂದ, ಕೆಲವು ಕುಟುಂಬಗಳು ಸಾಮಾಜಿಕ ಜವಾಬ್ದಾರಿಯಿಂದ ವಿವಾಹ ಮುಂದೂಡಿದ್ದರು. ಇನ್ನೂ ಆಗಬೇಕಿವೆ ಹಳೆವೇ: ಆದರೆ, ಮೇ 19ರಿಂದ ಜೂನ್‌ 2ರ ತನಕ ಜಿಲ್ಲೆಯಲ್ಲಿ ಇನ್ನೂ 140ಕ್ಕೂ ಅಧಿಕ ಮದುವೆಗಳಿಗೆ ಅನುಮತಿ ನೀಡಿದ್ದೇ ಇದೆ.

ಮೇ 16 ರಿಂದ ಜೂ.2 ರ ತನಕ ಅಂಕೋಲಾದಲ್ಲಿ 20, ಭಟ್ಕಳ 3, ದಾಂಡೇಲಿ 7, ಹಳಿಯಾಳ 3, ಹೊನ್ನಾವರ 28, ಕಾರವಾರ 19, ಕುಮಟಾ 65, ಮುಂಡಗೋಡ 19, ಶಿರಸಿ 32, ಜೋಯಿಡಾ 8, ಯಲ್ಲಾಪುರ 6, ಸಿದ್ದಾಪುರದಲ್ಲಿ 18 ವಿವಾಹಗಳಿಗೆ ಆಯಾ ತಾಲೂಕಿನ ತಹಶೀಲ್ದಾರರು ಅನುಮತಿ ನೀಡಿದ್ದರು. ಕಾರವಾರದಲ್ಲಿ 16, ದಾಂಡೇಲಿಯಲ್ಲಿ 4 ಪ್ರದೇಶದದಲ್ಲೂ ವಿವಾಹ ನಡೆಸಲು ಅನುಮತಿ ಪಡೆದದ್ದೇ ಇದೆ. ಶಿರಸಿ ತಾಲೂಕಿನ ಬನವಾಸಿ ಹೋಬಳಿಯಲ್ಲೇ ಅಧಿಕ ಸೋಂಕು ಇದ್ದು, ಅದೇ ಭಾಗದಲ್ಲಿ ಮದುವೆಗಳಿಗೆ ಈ ಮೊದಲೇ ಕೊಟ್ಟ ಅನುಮತಿಯೂ ಹೆಚ್ಚಿದೆ.

ಆತಂಕ ಇದೆ: 40 ಮಂದಿ ಮದುವೆಗೆ ಎಂದು ಅನುಮತಿ ಪಡೆದವರು ನೂರಾರು ಜನ ಸೇರಿದ್ದೇ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಯಿತು. ಹೊರ ಜಿಲ್ಲೆಗಳಿಂದಲೂ ಸೋಂಕಿತರು ಬಂದು ಹಂಚಿ ಹೋಗಿದ್ದೂ ಆಯಿತು. ಇದರ ಪರಿಣಾಮ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ವಿವಾಹ ಬ್ಲಾಕ್‌ ಲೀಸ್ಟ್‌ಗೆ ಹೋಗುವಂತೆ ಆಯಿತು. ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳೂ ಕೋವಿಡ್‌ ಸೋಂಕು ಕಡಿಮೆ ಆಗುವತನಕ ವಿವಾಹಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚಿಸಿದ್ದರು. ಇನ್ನು ವಿವಾಹಗಳನ್ನು ನಡೆಸುವ ಕುಟುಂಬಗಳಿಗೂ ಸಾಮಾಜಿಕ ಜವಾಬ್ದಾರಿ ಕೂಡ ಅಂಟಿಕೊಂಡಿದೆ. ಸೋಂಕು ಹರಡದಂತೆ, ಸರಕಾರ ಅನುಮತಿ ನೀಡಿದಷ್ಟೇ ಜನರು ಪಾಲ್ಗೊಂಡು ನಡೆಸಬೇಕು.

ವಿವಾಹದ ಸಂದರ್ಭದಲ್ಲೂ ಸಾಮಾಜಿಕ ಅಂತರ, ಸ್ಯಾನಿಟೈಜರ್‌, ಮಾಸ್ಕ್ ಬಳಸಬೇಕು ಎಂಬ ಸಾಮಾಜಿಕ ಸಂದೇಶಗಳೂ ಕೇಳಿ ಬಂದಿವೆ. ಈ ಮಧ್ಯೆ ಆಯಾ ತಾಲೂಕು ಆಡಳಿತ ಸಂಬಂಧಪಟ್ಟ ವಿವಾಹಗಳಿಗೆ ನೋಡಲ್‌ ಅಧಿಕಾರಿ ಹಾಗೂ ಆಯಾ ಪಂಚಾಯತ್‌ ಅಧಿಕಾರಿಗಳು ನಿರ್ವಹಣೆ ಮಾಡಲು ಆಯಾ ತಾಲೂಕಿನ ತಹಶೀಲ್ದಾರರು ಸೂಚಿಸಿದ್ದಾರೆ. ವಿವಾಹಗಳು ಮತ್ತೆ ಸೋಂಕು ಹೆಚ್ಚಳಕ್ಕೆ ನಾಂದಿ ಹಾಡಬಾರದು ಎಂಬ ಸಾಮಾಜಿಕ ಹಕ್ಕೊತ್ತಾಯ ಕೂಡ ಕೇಳಿ ಬಂದಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.