ಅಂತರ್ಜಾತಿ ವಿವಾಹವಾದ 157 ಜೋಡಿ

ಮುಂಡಗೋಡ-ಶಿರಸಿಯಲ್ಲೇ ಅತಿ ಹೆಚ್ಚು ಮದುವೆ­ಅಸ್ಪೃಶ್ಯತೆ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಸರಕಾರ

Team Udayavani, Jul 16, 2021, 5:15 PM IST

cats

ನಾಗರಾಜ ಹರಪನಹಳ್ಳಿ

ಕಾರವಾರ: ಜಾತಿ ವ್ಯವಸ್ಥೆ ತೊಡೆದು ಹಾಕಲು ಹಾಗೂ ಅಂತರ್ಜಾತಿ ವಿವಾಹವೇ ಮದ್ದೆಂದು ತಿಳಿದಿರುವ ಸರ್ಕಾರ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅಂತರ್ಜಾತಿ ವಿವಾಹಗಳನ್ನು ಕಾನೂನು ಬದ್ಧವಾಗಿಯೇ ಬೆಂಬಲಿಸುತ್ತ ಬಂದಿದೆ.

ಅಸ್ಪೃಶ್ಯತೆ ನಿವಾರಣೆಗೆ ಸಮಾಜ ಕಲ್ಯಾಣ ಇಲಾಖೆ ಶ್ರಮಿಸುತ್ತಲೇ ಬಂದಿದ್ದು, ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಅಂತರ್ಜಾತಿ ವಿವಾಹಿತರು 5 ಲಕ್ಷದವರೆಗೆ ಆದಾಯ ಹೊಂದಿದ್ದರೂ ಪ್ರೋತ್ಸಾಹಧನ ಪಡೆಯಲು ಅರ್ಹರು ಎಂದು ಕೆಲ ತಿದ್ದುಪಡಿಗಳನ್ನು ಮಾಡಲಾಯಿತು. ಮೊದಲ ಕಂತಾಗಿ 50 ಸಾವಿರ ನಗದು ನೀಡಿದರೆ, ಎರಡನೇ ಕಂತಿನ ಹಣವನ್ನು ಶಾಶ್ವತ ಠೇವಣಿಯಾಗಿ ಇಡುವ ಪದ್ಧತಿ ಈಗ ಅನುಷ್ಠಾನದಲ್ಲಿದೆ. ಅಲ್ಲದೇ ಮೂರನೇ ಕಂತನ್ನು ವಿವಾಹಿತರಿಗೆ ನೀಡುವ ಪದ್ಧತಿ ನಮ್ಮಲ್ಲಿದೆ. ಪರಿಶಿಷ್ಟ ಜಾತಿಯ ಹೆಣ್ಣು ಮಗಳು ಪರಿಶಿಷ್ಟ ವರ್ಗ ಅಥವಾ ಮೇಲ್ಜಾತಿಯಲ್ಲಿ ವಿವಾಹವಾದರೆ 3ಲಕ್ಷ ರೂ. ಪ್ರೋತ್ಸಾಹಧನ ಸೌಲಭ್ಯವಿದ್ದರೆ, ಪರಿಶಿಷ್ಟ ಜಾತಿಯ ಹುಡುಗ ಮೇಲ್ಜಾತಿಯ ಯುವತಿಯನ್ನು ಮದುವೆಯಾದರೆ 2.50 ಲಕ್ಷ ಪ್ರೋತ್ಸಾಹಧನವಿದೆ. ಅಲ್ಲದೇ ಅಂತರ್ಜಾತಿ ವಿವಾಹಗಳಿಗೂ ಆರ್ಥಿಕ ಪ್ರೋತ್ಸಾಹದ ಯೋಜನೆಗಳಿವೆ. ಆಯಾ ಸಮುದಾಯಗಳಲ್ಲಿ ಸರಳ- ಸಾಮೂಹಿಕ ವಿವಾಹವಾದರೆ 50 ಸಾವಿರವರೆಗೆ ಪ್ರೋತ್ಸಾಹಧನವಿದೆ.

ಅಂತರ್‌ ಧರ್ಮೀಯ ವಿವಾಹಗಳಿಗೆ ಸಹಾಯಧನವಿಲ್ಲ: ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಇರುವ ಕಾರಣ ಅಂತರ್ಜಾತಿ ಮದುವೆಗಳಿಗೆ ಸರ್ಕಾರದ ಪ್ರೋತ್ಸಾಹಧನವಿದೆ. ಅದೇ ಒಂದು ಧರ್ಮದ ಯುವಕರು, ಜೈನ, ಸಿಖ್‌, ಇಸ್ಲಾಂ, ಕ್ರಿಶ್ಚಿಯನ್‌ ಧರ್ಮದ ಯುವತಿಯರನ್ನು ಅಥವಾ ಅನ್ಯ ಧರ್ಮದ ಯುವತಿಯರು ಹಿಂದೂ ಯುವಕರನ್ನು ಮದುವೆಯಾದರೆ ಸರ್ಕಾರದ ಪ್ರೋತ್ಸಾಹದಧನ ಸಿಗಲ್ಲ. ಕಾರಣ ಹಿಂದೂ ಧರ್ಮ ಹೊರತುಪಡಿಸಿ ಇತರೆ ಧರ್ಮಗಳಲ್ಲಿ ಅಸ್ಪೃಶ್ಯತೆ ಇಲ್ಲ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟುಕೊಂಡಿದೆ. ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಕಾರಣ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ, ಮನುಷ್ಯರಲ್ಲಿ, ಯುವ ಜನಾಂಗದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸುವುದೇ ಆಗಿದೆ. ಅಲ್ಲದೆ ಸಮಾನತೆ ತರುವುದು ಸಹ ಅಂತರ್‌ ಜಾತಿ ವಿವಾಹಗಳಿಗೆ ಪ್ರೋತ್ಸಾಹದ ಪ್ರಮುಖ ಉದ್ದೇಶವಾಗಿದೆ. ಕಳೆದ ಸಾಲಿನಲ್ಲಿ ನಡೆದ ಇಂಟರ್‌ಕಾಸ್ಟ್‌ ಮ್ಯಾರೇಜಸ್‌: ಜಿಲ್ಲೆಯಲ್ಲಿ ಇಂಟರ್‌ಕಾಸ್ಟ್‌ ಮ್ಯಾರೇಜಸ್‌ ನಡೆಯುತ್ತಲೇ ಇವೆ.

2019-20ನೇ ಸಾಲಿನಲ್ಲಿ 68 ಯುವಕರು, ತಮ್ಮ ಜಾತಿ ಮೀರಿ ಮೇಲ್ಜಾತಿ ಅಥವಾ ಶೂದ್ರ ಸಮುದಾಯದ ಅಥವಾ ತಮ್ಮದೇ ಸಮುದಾಯದ ಇತರೆ ಪಂಗಡಗಳ ಯುವತಿಯರನ್ನು ಮದುವೆಯಾಗಿ ಆದರ್ಶ ಮೆರೆದಿದ್ದಾರೆ. ಪರಿಶಿಷ್ಟ ವರ್ಗದ ಯುವಕ, ಬ್ರಾಹ್ಮಣ, ದೈವಜ್ಞ ಬ್ರಾಹ್ಮಣ ಇಲ್ಲವೇ ನಾಯ್ಕ, ಮಡಿವಾಳ ಇಲ್ಲವೇ ಬೋವಿ, ವಾಲ್ಮೀಕಿ, ವಡ್ಡರ ಸಮುದಾಯದ ಯುವತಿಯನ್ನು ಮದುವೆಯಾದ ಉದಾಹರಣೆಗಳು ಇವೆ. ಇನ್ನು ಪರಿಶಿಷ್ಟ ಜಾತಿಯ ಯುವತಿಯರು ಮೇಲ್ಜಾತಿಯ ಯುವಕರನ್ನು, ಶೂದ್ರ ಸಮುದಾಯದಲ್ಲಿ ಇಲ್ಲದೇ ಪರಿಶಿಷ್ಟ ಪಂಗಡದಲ್ಲಿ ವಿವಾಹವಾದ ಘಟನೆಗಳಿವೆ. ಮೇಲ್ಜಾತಿಯ ಯುವತಿಯರು ದಲಿತ ಸಮುದಾಯದ ಯುವಕರನ್ನು ವರಿಸಿದ ಉದಾಹರಣೆಗಳು ಇವೆ. ಒಂದು ರೀತಿಯ ಸಣ್ಣ ಪ್ರಮಾಣದ ಚಲನೆ ಜಿಲ್ಲೆಯಲ್ಲಿ ಕಂಡು ಬಂದಿದೆ. 2019-20ನೇ ಸಾಲಿನಲ್ಲಿ 89 ಯುವತಿಯರು ಅಂತರ್ಜಾತಿ ವಿವಾಹವಾಗಿದ್ದಾರೆ. ಒಟ್ಟು 157 ಕುಟುಂಬಗಳು ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ 2.60 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದೆ.

2020-21ರಲ್ಲಿ 22 ಜೋಡಿಗಳ ಅಂತರ್ಜಾತಿ ವಿವಾಹ: ಉತ್ತರ ಕನ್ನಡ ಜಿಲ್ಲೆಯಲ್ಲಿ 2020-21ರಲ್ಲಿ 22 ಜೋಡಿಗಳು ಅಂತರ್ಜಾತಿ ವಿವಾಹವಾಗಿವೆ. 11 ಯುವಕರು ಜಾತಿ ಬಂಧನ ಮುರಿದು ಅಂತರ್ಜಾತಿ ಯುವತಿಯರ ಕೈ ಹಿಡಿದಿದ್ದಾರೆ. ಹಾಗೆ 11 ಯುವತಿಯರು ಸಹ ತಮ್ಮ ಜಾತಿ ಚೌಕಟ್ಟು ಮುರಿದು ಅನ್ಯ ಜಾತಿಯ ಯುವಕರನ್ನು ಮದುವೆಯಾಗಿ ಮನುಷ್ಯರು ಒಂದೇ ಎಂಬ ಸಂದೇಶ ಸಾರಿದ್ದಾರೆ. ಅಲ್ಲದೆ ಅಂತರ್ಜಾತಿ ವಿವಾಹ ಆಗಿದ್ದ 49ಜನ ಸಮಾಜ ಕಲ್ಯಾಣ ಇಲಾಖೆಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಜೋಡಿಗಳ ದಾಖಲೆ, ಸ್ಥಳ ಪರಿಶೀಲನೆ ನಡೆದಿದೆ. ಪ್ರಸಕ್ತ ಸಾಲಿನಲ್ಲಿ 22 ಅಂತರ್ಜಾತಿ ವಿವಾಹಿತರಿಗೆ 57 ಲಕ್ಷ ರೂ. ಪ್ರೊತ್ಸಾಹಧನ ತಲುಪಿದ್ದು, ಉಳಿದ ಪ್ರೊತ್ಸಾಹಧನ ಇನ್ನಾರು ತಿಂಗಳಲ್ಲಿ ತಲುಪಲಿದೆ. ಶಿರಸಿ-ಮುಂಡಗೊಡಲ್ಲಿ ಹೆಚ್ಚು: ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚು ನಡೆದಿವೆ ಎಂದು ದಾಖಲೆಗಳು ಹೇಳುತ್ತಿವೆ. 2019-20ನೇ ಸಾಲಿನಲ್ಲಿ ಮುಂಡಗೋಡ ತಾಲೂಕಿನಲ್ಲಿನ 30 ಜೋಡಿ ಅಂತರ್ಜಾತಿ ವಿವಾಹವಾಗಿದ್ದಾರೆ.

ಶಿರಸಿ ತಾಲೂಕಿನಲ್ಲಿ 25 ಮದುವೆಗಳು ಆಗಿವೆ. ಅಂಕೋಲಾ, ಹಳಿಯಾಳದಲ್ಲಿ ತಲಾ 15, ಹೊನ್ನಾವರದಲ್ಲಿ 23, ಭಟ್ಕಳದಲ್ಲಿ 11, ಕುಮಟಾ, ಸಿದ್ದಾಪುರ, ಕಾರವಾರದಲ್ಲಿ ತಲಾ 9, ಯಲ್ಲಾಪುರದಲ್ಲಿ 10 ಜೊಡಿ ಅಂತರ್ಜಾತಿ ವಿವಾಹವಾಗಿ ಅಂಬೇಡ್ಕರ್‌ ಹಾದಿಯಲ್ಲಿ ನಡೆದಿದ್ದಾರೆ. ಜೊಯಿಡಾದಲ್ಲಿ 1 ಜೋಡಿ ಮಾತ್ರ ಅಂತರ್ಜಾತಿ ವಿವಾಹದ ಬೆಳಕು ಕಂಡಿದೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.