ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನ
Team Udayavani, Jun 24, 2021, 6:28 PM IST
ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಡಿ.ಎಸ್.ಪಿ. ರವಿ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 7 ಜನರನ್ನು ಬಂಧಿಸಿರುವ ಘಟನೆ ನಗರದ ಆರ್.ಟಿ.ಓ. ಆಪೀಸ್ ಕಚೇರಿ ಹತ್ತಿರ ನಡೆದಿದ್ದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂರ ಅಹ್ಮದ್ ಮಹಮ್ಮದ್ ಹನೀಫ್ ಭಟ್ಕಳ 27 ವರ್ಷ ಇಂದಿರಾನಗರ, ಇದಾಯತ್ ತಸಲುಲ್ಲಾ ಖಾಜಿ ೩೧ ವರ್ಷ ಕಸ್ತೂರಾ ಬಾ ನಗರ, ಮೊಹಮ್ಮದ್ ಯಾಸೀನ್ ಹಬೀಭ್ ರೆಹಮಾನ ಭಟ್ಕಳ 24 ವರ್ಷ, ಆಫ್ರೀದ್ ಮಹಮ್ಮದ್ ಹನೀಫ್ ಭಟ್ಕಳ23 ವರ್ಷ ಇಂಧಿರಾನಗರ, ಹುಸೇನ್ ಪಾರೂಕ್ ಮೀರಾಪುರ 37 ವರ್ಷ ಹೊನ್ನಾವರ, ಅಬ್ದುಲ್ ಖಾದರ ಪರೀದ ಹಸನ್ 30 ವರ್ಷ ಇಂದಿರಾನಗರ ಹಾಗೂ ಮಹಮ್ಮದ್ ಇಮ್ರಾನ್ ಶೇಕ್ 32 ವರ್ಷ ಕಸ್ತೂರಾ ಬಾ ನಗರ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 6410 ರೂಪಾಯಿ ನಗದು, ೭ ಮೊಬೈಲ್ ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿ.ವಾಯ್.ಎಸ್.ಪಿ. ರವಿ ಡಿ. ನಾಯ್ಕ ನೇತೃತ್ವದಲ್ಲಿ ಮಾರುಕಟ್ಟೆ ಪಿ.ಎಸ್.ಐ. ಭೀಮಾ ಶಂಕರ ದಾಳಿ ನಡೆಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ