ಡಿ. 26ರಂದು ಮತ್ತೆ ಕಂಕಣ ಸೂರ್ಯಗ್ರಹಣ


Team Udayavani, Jun 10, 2019, 10:41 AM IST

uk-tdy-2…

ಅಂಕೋಲಾ: 40 ವರ್ಷಗಳ ಬಳಿಕ ಮತ್ತೂಮ್ಮೆ ಡಿ.26 ರಂದು ಗೋಚರಿಸಲಿರುವ ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಲು ಅಂಕೋಲಾದಲ್ಲಿ ಖಗೋಳ ತಜ್ಞರು ವಿಶೇಷ ಸಿದ್ಧತೆ ನಡೆಸಿದ್ದಾರೆ.

1980 ಫೆಬ್ರುವರಿಯಲ್ಲಿ ಸಂಭವಿಸಿದ ಸೌರಮಂಡಲದ ಚಮತ್ಕಾರಗಳಲ್ಲಿ ಒಂದಾದ ಪೂರ್ಣ ಸೂರ್ಯಗ್ರಹಣ ಈ ವರ್ಷ ಡಿ.26 ರಂದು ಮತ್ತೆ ಕಾಣಿಸಿಕೊಳ್ಳಲಿದೆ. ಅಂದು ಘಟಿಸಿದ ಈ ಸೂರ್ಯ ಗ್ರಹಣ ಭಾರತದ ಅಂಕೋಲಾದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮತ್ತು ವಿಶೇಷವಾಗಿ ಕಾಣಿಸಿದ ಬಗ್ಗೆ ಖಗೋಳ ತಜ್ಞರು ಮಾಹಿತಿ ನೀಡಿದ್ದಾರೆ.

1980 ಫೆ.16 ಶಿವರಾತ್ರಿ ಅಮಾವಾಸ್ಯೆಯ ದಿನ. ಪ್ರಪಂಚದ ಖಗೋಳ ಇತಿಹಾಸದಲ್ಲಿ ಅಂಕೋಲಾ ಊರಿಗೆ ಐತಿಹಾಸಿಕ ಮಹತ್ವ ದೊರೆತಿತ್ತು. ಆ ದಿನ ಅತ್ಯಂತ ವಿರಳಾತಿ ವಿರಳ, ಬಹುಶಃ ಅದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಗೊಮ್ಮೆ ನಡೆಯಬಹುದಾದ ಕೌತುಕಪೂರ್ಣ ಖಗೋಳ ವಿದ್ಯಾಮಾನವೊಂದು ನಡೆದು ಹೋಯಿತು. ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಸೂರ್ಯನಿಗೆ ಚಂದ್ರಬಿಂಬ ಅಡ್ಡ ಹಾಯ್ದ ಪರಿಣಾಮ ನಡು ಹಗಲಿನಲ್ಲಿಯೇ ನಕ್ಷತ್ರ ಕಾಣುವಂತೆ ನಡುರಾತ್ರಿಯ ಅನುಭವ ಸ್ಥಳೀಯರಿಗಾಯಿತು. ವಜ್ರದ ಉಂಗುರದಂತೆ ಸೂರ್ಯ ಕೆಲ ಕಾಲ ರಂಜಿಸಿದ. ಮುನ್ನೆಚ್ಚರಿಕೆ ಯಿಲ್ಲದೇ ಸೌರಗಾಜು, ಬೆಳಕು ನಿರೋಧಕ ಸಾಧನಗಳ ಸಹಾಯವಿಲ್ಲದೇ ತದೇಕದೃಷ್ಟಿಯಿಂದ ಸೂರ್ಯನನ್ನು ಗ್ರಹಣದ ಸಮಯದಲ್ಲೇ ಆಗಲಿ ಬೆಳಗು ಸಂಜೆಯಲ್ಲದೇ ಬೇರಾವುದೇ ಸಮಯದಲ್ಲಿ ನೋಡುವುದು ಕಣ್ಣಿಗೆ ಹಾನಿಯಾಗುತ್ತದೆ ಎಂಬುದನ್ನು ಬಿಟ್ಟರೆ ಇತರ ಯಾವುದೇ ತೊಂದರೆಗಳು ಗ್ರಹಣ ವೀಕ್ಷಣೆಯಿಂದ ಆಗುತ್ತದೆ ಎಂಬುದಕ್ಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

•40 ವರ್ಷಗಳ ಬಳಿಕ ಗೋಚರಿಸಲಿದೆ

•ಅಂಕೋಲಾದಲ್ಲಿ ವೀಕ್ಷಿಸಲು ಖಗೋಳ ತಜ್ಞರಿಂದ ನಡೆದಿದೆ ಸಿದ್ಧತೆ

•1980 ಫೆ.16 ಶಿವರಾತ್ರಿ ಅಮಾವಾಸ್ಯೆಯ ದಿನ ಕಾಣಿಸಿ ಕೊಂಡಿತ್ತು

•ಅಂಕೋಲಾದಲ್ಲಿ ಮಾತ್ರ ಪೂರ್ಣ ಪ್ರಮಾಣ- ವಿಶೇಷವಾಗಿ ಕಾಣಿಸಿತ್ತು

•ಬೆಳಕು ನಿರೋಧಕ ಸಾಧನದಿಂದಲೇ ಗ್ರಹಣ ವೀಕ್ಷಿಸಬೇಕು

ಎರಡೂ ಮುಕ್ಕಾಲು ನಿಮಿಷಗಳ ಅವಧಿಯ ಅಂದಿನ ಪೂರ್ಣ ಸೂರ್ಯಗ್ರಹಣ ಆಫ್ರಿಕಾ ಖಂಡದಿಂದ ಪ್ರಾರಂಭವಾಗಿ ಅಂಕೋಲಾದಲ್ಲಿ ಭಾರತವನ್ನು ಪ್ರವೇಶಿಸಿ ರಾಯಚೂರು, ಆಂಧ್ರದ ಸೂರ್ಯಪೇಟೆ, ಒರಿಸ್ಸಾದ ಧರ್ಮಪುರಿ ಮತ್ತು ಪುರಿಯ ಮಾರ್ಗವಾಗಿ ಸಾಗಿ ಬರ್ಮಾ ಮತ್ತು ಚೀನಾದಲ್ಲಿ ಕೊನೆಗೊಂಡಿತು. ಆನಂತರ ಭಾರತದಲ್ಲಿ ಬೆರಳೆಣಿಕೆಯಷ್ಟು ಪೂರ್ಣ ಸೂರ್ಯ ಗ್ರಹಣಗಳಾದರೂ ಕರ್ನಾಟಕದಲ್ಲಿ ಗ್ರಹಣ ನೋಡುವ ಅವಕಾಶ ಲಭ್ಯವಾಗಿರಲಿಲ್ಲ. ಈಗ 40 ವರ್ಷದ ನಂತರ ಮತ್ತೂಮ್ಮೆ ಗ್ರಹಣ ನೋಡುವ ಸದಾವಕಾಶ ಲಭ್ಯವಾಗಿದೆ. ಮತ್ತೆ ಈ ಅವಕಾಶಕ್ಕೆ ಇನ್ನೂ ನಲವತ್ತೈದು ವರ್ಷ 17 ಫೆಬ್ರವರಿ 2064ರವರೆಗೆ ಕಾಯಬೇಕು.

ಈ ವರ್ಷದ ಡಿಸೆಂಬರ್‌ ತಿಂಗಳ ಗ್ರಹಣ ಮೂರು ಕಾಲು ನಿಮಿಷಗಳ ಅವಧಿಯ ಕಂಕಣ ಸೂರ್ಯ ಗ್ರಹಣವಾಗಿದೆ. ಇದು ನಮ್ಮ ಕರ್ನಾಟಕದ ಮಂಗಳೂರಿನ ಕರಾವಳಿ ಮೂಲಕ ಮಡಿಕೇರಿ, ಗುಂಡ್ಲುಪೇಟೆ, ತಮಿಳುನಾಡಿನ ಊಟಿ, ತಿರುಪಟೂರು, ದಿಂಡಿಗಲ್ ಮತ್ತು ಕಾರೈಕುಡಿ ಮಾರ್ಗವಾಗಿ ಬಂಗಾಳ ಕೊಲ್ಲಿಯ ಮೂಲಕ ಮಲೇಷಿಯಾಕ್ಕೆ ಹೋಗಲಿದೆ.

ಅಲ್ಲದೆ ಖಗೋಳ ತಜ್ಞ ಮಂಜುನಾಥ ಜೇಡಿಕುಣಿ ಅವರ ನೇತೃತ್ವದಲ್ಲಿ ಗ್ರಹಣದ ಬಗ್ಗೆ ಮಾಹಿತಿ ನೀಡುವ ಅಭಿಯಾನ ಸಹ ರಾಜ್ಯವ್ಯಾಪಿ ನಡೆಯಲಿದೆ ಎಂದು ತಿಳಿಸಿದ್ದಾರೆ.

•ಅರುಣ ಶೆಟ್ಟಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.