ಹೆಗಡೆಕಟ್ಟಾ ಸೊಸೈಟಿಯಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ
ರೈತರ ಗಮನ ಸೆಳೆದ ಕೃಷಿ ಯಂತ್ರ ಸಾಧನ
Team Udayavani, Jul 22, 2019, 3:57 PM IST
ಶಿರಸಿ: ಹೆಗಡೆಕಟ್ಟಾ ಸೊಸೈಟಿಯಲ್ಲಿ ಯಂತ್ರ ಪ್ರಾತ್ಯಕ್ಷಿಕೆ ನಡೆಯಿತು.
ಶಿರಸಿ: ಹೆಗಡೆಕಟ್ಟಾ ಸೊಸೈಟಿ ಆವಾರದಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ಜರುಗಿತು. ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ, ಟಿಎಂಎಸ್ ಶಿರಸಿ ಮತ್ತು ಹೆಗಡೆ ಆಗ್ರೋಟೆಕ್ ಕಡ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ರೈತರಿಗಾಗಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಿತು.
ಇಲ್ಲಿನ ಜಡ್ಡಿಮನೆಯ ರವೀಂದ್ರ ಹೆಗಡೆ ಅವರ ತೋಟದಲ್ಲಿ ಅಡಕೆಗೆ ಕೆಳಗಿನಿಂದಲೇ ಮದ್ದು ಸಿಂಪಡಣೆ ಮಾಡುವ ಹೆಗಡೆ ಆಗ್ರೋಟೆಕ್ ಅವರಿಂದ ನಿರ್ಮಿತ ಟೆಲಿಸ್ಕೋಪಿಕ್ ದೋಟಿ, ಬ್ಯಾಟರಿ ಚಾಲಿತ ಪವರ್ ಸ್ಪ್ರೇಯರ್ ಮತ್ತು ಹಾಲು ಕರೆಯುವ ಯಂತ್ರದ ಬಗ್ಗೆ ರೈತರಿಗೆ ಸವಿವರವಾದ ಮಾಹಿತಿ ನೀಡಲಾಯಿತು.
ನೆಲದಿಂದಲೇ ಅರವತ್ತು ಹಾಗೂ ಎಂಭತ್ತು ಅಡಿ ಎತ್ತರದವರೆಗೆ ಮದ್ದನ್ನು ಸಿಂಪಡಿಸಲು ಈ ಯಂತ್ರದಿಂದ ಸಾಧ್ಯ. ಒಂದು ಬಾರಿ ಆರರಿಂದ ಎಂಟು ಡ್ರಮ್ಗಳ ವರೆಗೆ ಮದ್ದನ್ನು ಸಿಂಪಡಿಸುವಷ್ಟು ಬ್ಯಾಟರಿ ಶಕ್ತಿಯುತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ದರಕು ಬರಗುವ ಸಲಕರಣೆ, ಸಸ್ಯ ಬೀಜ ಹಾಗೂ ಬೀಜ ಬಿತ್ತುವ ಟ್ರೇ ಅಲ್ಲದೆ ಇನ್ನೂ ಅನೇಕ ಕೃಷಿ ಯಂತ್ರ ಸಾಧನಗಳು ರೈತರ ಗಮನ ಸೆಳೆದವು.
ಟಿಎಂಎಸ್ ಕೃಷಿ ತಜ್ಞ ಡಾ| ಕಿಶೋರ ಹೆಗಡೆ ಮಾತನಾಡಿ, ಬೋರ್ಡೋ ಮಿಶ್ರಣವನ್ನು ತಯಾರಿಸುವ ಹಾಗೂ ಸಿಂಪಡಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಕಡಿಮೆ ಮಳೆಯಾದರೂ ಕೊಳೆ ರೋಗ ಕಂಡು ಬರುತ್ತಿರುವ ಬಗ್ಗೆ ವಿವರಿಸಿದ ಅವರು, ಕಳೆದ ವರ್ಷದ ಫಂಗಸ್ ಈ ವರ್ಷವೂ ಬಾಧಿಸಿದೆ ಎಂದರು. ರೈತ ಸೇವೆಯ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತ ಗಮನ ಸೆಳೆದಿರುವ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟಿಎಂಎಸ್ ಉಪಾಧ್ಯಕ್ಷರೂ ಆಗಿರುವ ಎಂ.ಪಿ. ಹೆಗಡೆ ಕೊಟ್ಟೇಗದ್ದೆ ತಮ್ಮ ಸಂಘದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಬೇಕಾದ ಮಾಹಿತಿ ದೊರಕಿಸಿಕೊಟ್ಟರು. ಸಂಘವು ಈ ಮಾದರಿಯ ಕಾರ್ಯಕ್ರಮ ಪ್ರತಿವರ್ಷ ನಡೆಸುತ್ತ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಯಂತ್ರ ಪ್ರಾತ್ಯಕ್ಷಿಕೆಯಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುಪಾದ ಹೆಗಡೆ ಅಮಚಿಮನೆ, ರತ್ನಾಕರ ನಾಯ್ಕ ಬಬ್ಬೀಸರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ ಹಾಗೂ ಸಂಘದ ನಿರ್ದೇಶಕರು ಕೃಷಿ ಸಲಹೆಗಾರ ಗುರುಮೂರ್ತಿ ಹೆಗಡೆ ಮತ್ತು ಟಿಎಂಎಸ್ ಸಿಬ್ಬಂದಿ ನಾಗರಾಜ ಹೆಗಡೆ ಮತ್ತಿತರರು ಇದ್ದರು. ಸುಮಾರು ಐವತ್ತಕ್ಕೂ ಹೆಚ್ಚು ರೈತರು ಪ್ರಾತ್ಯಕ್ಷಿಕೆ ಪ್ರಯೋಜನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ