ಮೆಕ್ಕೆ ಜೋಳ ಒಣಗಿಸಲು ವಿದ್ಯುತ್‌ ಬೆಳಕು-ಫ್ಯಾನ್‌ ಅಳವಡಿಕೆ!

ಮುಂಡಗೋಡ ತಾಲೂಕು ಮುಡಸಾಲಿ ಗ್ರಾಮದ ರೈತರ ವಿಶಿಷ್ಟ ಪ್ರಯೋಗ

Team Udayavani, May 24, 2022, 10:23 AM IST

4

ಮುಂಡಗೋಡ: ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅನ್ನದಾತರ ಬದುಕು ಅಸಹನೀಯವಾಗಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ರಾಶಿ ಮಾಡಿದ ಗೋವಿನ ಜೋಳ ಮೊಳಕೆಯೊಡೆಯುತ್ತಿದ್ದು ತನ್ನ ಉಳಿದ ಬೆಳೆಯನ್ನು ರಕ್ಷಿಸಿಕೊಳ್ಳಲು ಮುಡಸಾಲಿ ಗ್ರಾಮದ ರೈತರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ತಾಡಪತ್ರಿಗಳಿಂದ ಗುಡಿಸಲ ಮಾದರಿಯಲ್ಲಿ ಶೆಡ್‌ ನಿರ್ಮಿಸಿ ಅದರಲ್ಲಿ ಜೋಳ, ಭತ್ತದ ರಾಶಿ ಹಾಕಿ ವಿದ್ಯುತ್‌ ಬೆಳಕು ಹಾಗೂ ಫ್ಯಾನ್‌ ಮೂಲಕ ಬೆಳೆಗಳನ್ನು ಒಣಗಿಸುತ್ತಿದ್ದಾರೆ.

ತಾಲೂಕಿನಲ್ಲಿ ಈಗಾಗಲೇ ರೈತರು ಭತ್ತದ ಕೊಯ್ಲು ಮಾಡಿದ್ದಾರೆ. ನಿರಂತರ ಮಳೆಯಿಂದಾಗಿ ಕೊಯ್ದ ಭತ್ತದ ತೆನೆಗಳು ಗದ್ದೆಯಲ್ಲಿಯೇ ಮೊಳಕೆಯೊಡೆಯುತ್ತಿವೆ. ಗೋವಿನ ಜೋಳ ತೆನೆಗಳನ್ನು ಕಟಾವು ಮಾಡಿದ ರೈತರಿಗೆ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದ ಅವುಗಳನ್ನು ಒಣಗಿಸಲು ಆಗದೆ ಪೇಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂಗಾರು ಬೆಳೆಯಲ್ಲಿ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ರೈತರು ತಮ್ಮ ಗದ್ದೆಯಲ್ಲಿನ ಗೋವಿನ ಜೋಳ ಕಟಾವು ಮಾಡಿ ಕಾಳಗಳನ್ನು ಒಣಗಿಸಲು ರಸ್ತೆಯಲ್ಲಿ ಹಾಕಿದ್ದರು. ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಬೆಳೆಗೆ ತಾಡಪತ್ರಿ ಹೊದಿಕೆ ಹಾಕಲಾಗಿದ್ದರೂ ಗೋವಿನ ಜೋಳ ಮಳೆ ನೀರಿಗೆ ಸಿಕ್ಕು ಮೊಳಕೆಯೊಡೆಯುತ್ತಿದ್ದವು. ಹೇಗಾದರು ಮಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹೊಸ ಪ್ಲ್ಯಾನ್‌ ಮಾಡಿದ್ದಾರೆ.

ರೈತರಾದ ರಾಮಕೃಷ್ಣ ಪಾಟೀಲ್‌, ಪರಶುರಾಮ ಕೀರ್ತೆಪ್ಪನವರ, ಮಾರುತಿ ಕೀರ್ತೆಪ್ಪನರ, ನಾಗೇಂದ್ರ ಹಿರೇಹಳ್ಳಿ, ಈಶ್ವರಪ್ಪ ಗುಲ್ಯಾನವರ, ಶಿವಾನಂದ ಕೇದಾರ, ಲಕ್ಷ್ಮಣ ಬಂಕಾಪುರ, ಸುರೇಶ ದಂಡಿ ಮತ್ತು ಜಗದೀಶ ಪಾಟೀಲ್‌ ಅವರು ತಾಡಪತ್ರಿಗಳಿಂದಲೇ ಗುಡಿಸಲಿನ ಮಾದರಿಯಲ್ಲಿ ಶೆಡ್‌ ನಿರ್ಮಿಸಿ ಅದರೊಳಗೆ ಕಾಳಿನ ರಾಶಿ ಹಾಕಿದ್ದಾರೆ. ಶೆಡ್‌ ಒಳಗೆ ವಿದ್ಯುತ್‌ ಲೈಟ್‌ ಹಾಗೂ ಪ್ಯಾನ್‌ ಅಳವಡಿಸಿ ಕಾಳನ್ನು ಒಣಗಿಸುತ್ತಿದ್ದಾರೆ.

ವರ್ಷವಿಡೀ ಕಷ್ಟಪಟ್ಟು ಸಾಲ ಮಾಡಿ ಗೊಬ್ಬರ, ಆಳು-ಕಾಳು ಎಂದು ಖರ್ಚು ಮಾಡಿ ಬೆಳೆಗಳನ್ನು ಬೆಳೆದ ರೈತರಿಗೆ ಇನ್ನೇನು ಫಸಲು ಕೈಗೆ ಸಿಗುವ ಸಮಯದಲ್ಲಿ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಈ ರೈತರ ವಿನೂತನ ಪ್ರಯೋಗ ಇತರೆ ರೈತರಿಗೆ ಮಾದರಿಯಾಗಿದೆ.

8 ದಿನಗಳ ಹಿಂದೆ 3 ಎಕರೆ ಹೊಲದಲ್ಲಿ ಬೆಳೆದ ಗೋವಿನ ಜೋಳ ಕಟಾವು ಮಾಡಿ ರಸ್ತೆ ಬದಿ ಒಣಗಿಸಲು ಹಾಕಿದ್ದೆ. ಐದಾರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದ ಕಾರಣ ಕಾಳುಗಳ ಮೇಲೆ ತಾಡಪತ್ರಿಗಳ ಹೊದಿಕೆ ಮಾಡಿದೆ. ಆದರೆ ತಾಡಪತ್ರಿ ಒಳಗೆ ನೀರು ಹಾಗೂ ಹೊದಿಕೆ ಮಾಡಿದ ಕಾರಣ ಕಾಳು ಜವಳು ಹಿಡಿದು ಮೊಳಕೆಯೊಡೆಯುತ್ತಿತ್ತು. ತಾಡಪತ್ರಿ ಗುಡಿಸಲು ಹಾಕಿ ಒಳಗೆ ಪ್ಯಾನ್‌ ಹಾಗೂ ವಿದ್ಯುತ್‌ ಲೈಟ್‌ ಅಳವಡಿಸಿ ಹಸಿಯಾದ ಕಾಳುಗಳನ್ನು ಒಣಗಿಸುತ್ತಿದ್ದೇನೆ. ಇದ್ದನ್ನು ನೋಡಿ ಗ್ರಾಮದ ಇತರೆ ರೈತರು ಮಾಡುತ್ತಿದ್ದಾರೆ. ರಾಮಕೃಷ್ಣ ಪಾಟೀಲ್‌, ಮುಡಸಾಲಿ ರೈತ

-ಮುನೇಶ ತಳವಾರ

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.