ಆಗ ಊರೆಲ್ಲಾ ಬಂಧು-ಮಿತ್ರರು..ಈಗ ಯಾರಿಗೆ ಯಾರಿಲ್ಲ!

ಬನ್ನಿ ಎಂದು ಕರೆಯುವವರಿಲ್ಲ; ಸೂತಕದ ಛಾಯೆಯೇ ಎಲ್ಲ

Team Udayavani, May 21, 2020, 5:35 PM IST

ಆಗ ಊರೆಲ್ಲಾ ಬಂಧು-ಮಿತ್ರರು..ಈಗ ಯಾರಿಗೆ ಯಾರಿಲ್ಲ!

ಹೊನ್ನಾವರ: ಎಪ್ರಿಲ್‌, ಮೇ ತಿಂಗಳಲ್ಲಿ ಮುಂಬೈ, ಗುಜರಾತ್‌, ದೆಹಲಿ, ಬೆಂಗಳೂರು ಮೊದಲಾದ ಊರುಗಳಲ್ಲಿ ನೆಲೆಸಿ ಉದ್ಯೋಗಿಗಳಾಗಿರುವವರನ್ನು ಸ್ವಾಗತಿಸಲು ಬಸ್‌ನಿಲ್ದಾಣದಲ್ಲಿ ಬಂಧು-ಬಳಗ ಮಾತ್ರವಲ್ಲ ಊರವರೇ ಸೇರಿರುತ್ತಿದ್ದರು. ಅವರು ತರುವ ನಾಲ್ಕಾರು ಸೂಟ್  ಕೇಸ್‌ ತುಂಬಿದ ವಸ್ತ್ರ, ತಿಂಡಿ, ಸಾಮಾನುಗಳನ್ನು ಹೊರಲು ಅಗತ್ಯಕ್ಕಿಂತ ಹೆಚ್ಚಿನ ಜನ ಕಾಣಿಸುತ್ತಿದ್ದರು. ಇತ್ತ ಮನೆಯಲ್ಲಿ ಎರಡು ದಿನ ಮೊದಲೇ ತಯಾರಿ ನಡೆಯುತ್ತಿತ್ತು. ಕೇರಿಗೆಲ್ಲಾ ಕೇಳುವ ಹಾಗೆ ಬರುವ ನೆಂಟರೋ, ಮಗನೋ, ಅಳಿಯನೋ ಇವರಿಗೆ ಯಾವ ಊಟ, ತಿಂಡಿ ಇಷ್ಟ, ಊರಿನ ಯಾವ ಹಣ್ಣು ಇಷ್ಟ ಎಂದೆಲ್ಲಾ ದೊಡ್ಡದಾಗಿ ಚರ್ಚಿಸಿ ಕಾದಿಡಲಾಗುತ್ತಿತ್ತು. ಆಗ ಊರೆಲ್ಲಾ ನೆಂಟರಾಗಿದ್ದರು. ಈಗ ಯಾರಿಗೆ ಯಾರಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಊರಿಗೆ ಬರುತ್ತೇನೆ ಎನ್ನುವವರಿಗೆ ಬನ್ನಿ ಎಂದು ಕರೆಯುವವರೇ ಇಲ್ಲ.

ನೆಲದ ಪ್ರೀತಿಗೆ ಬಂದಿಳಿದರೆ ಪೊಲೀಸರು ಸ್ವಾಗತಿಸುತ್ತಾರೆ, ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಗಂಟಲಿಗೆ ಕಡ್ಡಿ ಹಾಕಿ ದ್ರವ ತೆಗೆದು ಕೈಗೆ ಅಳಿಸಲಾಗದ ಶಾಹಿಯಿಂದ ಸೀಲು ಹೊಡೆದು ದುಡ್ಡಿದ್ದರೆ ಹೋಟೆಲ್‌ಗೆ ಇಲ್ಲವಾದರೆ ಸರ್ಕಾರಿ ಕ್ವಾರಂಟೈನ್‌ ಗೆ ಕಳಿಸುತ್ತಾರೆ. 14 ದಿನ ಅಲ್ಲಿ ಉಳಿಯಬೇಕು. ಅಲ್ಲಿರುವಾಗ ಸೂತಕದ ಮನೆಯಂತೆ ಯಾರೂ ಹತ್ತಿರ ಬರುವುದಿಲ್ಲ. ಊರವರು, ಬಂಧು-ಬಳಗ ಫೋನಿನಲ್ಲಿಯೇ ವಿಚಾರಿಸಿಕೊಳ್ಳುತ್ತಾರೆ. ಇಲ್ಲಿ ಬಂದರೂ ಮನೆಗೆ ಬರುವ ಹಾಗಿಲ್ಲ, ತೊಂದರೆ ಪಡುವ ಬದಲು ಅಲ್ಲಿಯೇ ಉಳಿಯಬಹುದಿತ್ತು ಎಂದು ಪರ್ಯಾಯವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸೂತಕ 12 ದಿನವಾದರೆ ಕ್ವಾರಂಟೈನ್‌ ಸೂತಕ 14 ದಿನ ಕಳೆದ ಮೇಲೆ ಪುನಃ 14ದಿನ ಮನೆಯಲ್ಲಿ ಇರಬೇಕು. ಅಮ್ಮನ ಪಾದ ಮುಟ್ಟಿ ನಮಸ್ಕರಿಸುವಂತಿಲ್ಲ, ತಮ್ಮನ ಮಕ್ಕಳಿಗೆ ಹತ್ತಿರ ಹೋಗಬೇಡಿ ಎಂದು ಹೇಳಿಕೊಟ್ಟಿರುತ್ತಾರೆ. ಇದು ಕೋವಿಡ್ ಕಾಂಡ. ಕೋವಿಡ್ ಸೋಂಕಿನಿಂದ ಟೂರಿಸಂ ನಿಂತು ಹೋದ ಕಾರಣ ಆದಷ್ಟು ಆಯಿತು ಎಂದು ಹೋಟೆಲ್‌ಅನ್ನು ಕ್ವಾರಂಟೈನ್‌ಗೆ ಕೊಟ್ಟ ಮಾಲಕರಿಗೆ ತಲೆಬಿಸಿಯಾಗಿದೆ. ಆದಷ್ಟು ವ್ಯಾಪಾರ ಆಗಲಿ ಎಂದು ಕೊಟ್ಟಿದ್ದೆವು, ಆಕಸ್ಮಾತ್‌ ಸೋಂಕಿತ ಕಂಡುಬಂದರೆ ನಮ್ಮ ಹೋಟೆಲ್‌ ಬಂದ್‌ ಆಗಲಿದೆ ಎಂದು ಆಲೋಚಿಸಿ ರೂಂ ಫುಲ್‌ ಆಗಿದೆ, ಕೆಲಸಗಾರರಿಲ್ಲ, ನಮ್ಮಲ್ಲಿ ಕಳಿಸಬೇಡಿ ಅನ್ನುತ್ತಾರೆ.

ಎಲ್ಲರೂ ಮನುಷ್ಯರೇ.. :  ಆಗ ಊರೆಲ್ಲಾ ನೆಂಟರು, ಈಗ ಉಣ ಬಡಿಸುವವರ ಕಾಣೆ. “ಯಾರಿಗೆ ಯಾರಿಲ್ಲ ಎರವಿನ ಸಂಸಾರ, ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೆ’ ಎಂಬ ಮಾತುಗಳು ನೆನಪಾಗುತ್ತವೆ. ಕೋವಿಡ್‌ ಸೋಂಕಿತರೆಲ್ಲಾ ಸಾಯುವುದಿಲ್ಲ. ಕೊರೊನಾ ವಾರಿಯರ್ ಮತ್ತು ತಮ್ಮದಲ್ಲದ ತಪ್ಪಿನಿಂದ ಸೋಂಕಿತರಾದವರು ಎಲ್ಲರೂ ಮನುಷ್ಯರೇ. ಕೊರೊನಾ ತಗುಲಿದವರಲ್ಲಿ ಸಾವಿನ ಪ್ರಮಾಣ ಶೇ. 2 ಇದೆ. ಹೀಗಿರುವಾಗ ಇವರನ್ನೆಲ್ಲಾ ಭೂತದ ಹಾಗೆ ಕಾಣುವುದು ಪ್ರಜ್ಞಾವಂತ ಸಮಾಜಕ್ಕೆ ಸಲ್ಲದು.

ವಿಪರೀತ ಎನ್ನುವಷ್ಟು ಬೆಳವಣಿಗೆ! :  ಆಕಸ್ಮಾತ್‌ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಯಾರಾದರೊಬ್ಬರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡರೆ ಕಥೆ ಮುಗಿದು ಹೋಯಿತು. ತಹಶೀಲ್ದಾರ್‌ ಕಚೇರಿಗೆ ಗಂಟೆಗೊಬ್ಬರು ಬರುತ್ತಾರೆ, ಸೋಂಕಿತರನ್ನು ಭೇಟಿಯಾದವರ ಯಾದಿ ಕೊಡುತ್ತಾರೆ. ಅವರು ನಮ್ಮೂರವರು, ಕ್ವಾರಂಟೈನ್‌ ಮುಗಿದ ಮೇಲೂ ಊರಿಗೆ ಕಳಿಸಬೇಡಿ ಅನ್ನುತ್ತಾರೆ. ಮತ್ತೂಬ್ಬ ಬಂದು ನಮ್ಮ ಕೇರಿಯಲ್ಲಿ ಕ್ವಾರಂಟೈನ್‌ ಬೇಡ, ಸುತ್ತಲೂ ಮನೆಗಳಿವೆ, ವಯಸ್ಸಾದವರು ಮಕ್ಕಳಿದ್ದಾರೆ ಎನ್ನುತ್ತಾರೆ. ಇನ್ನೊಂದಿಷ್ಟು ಜನ ಇದೇ ಹೇಳಿಕೆಯನ್ನು ಬರೆದು ಸಹಿ ಹಾಕಿಸಿಕೊಂಡು ತರುತ್ತಿದ್ದಾರೆ.

 

ಜೀಯು ಹೊನ್ನಾವರ

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.