ಬನವಾಸಿ: ಜಿಂಕೆ ಹತ್ಯೆ ಪ್ರಕರಣ; ಇಬ್ಬರ ಬಂಧನ
Team Udayavani, Aug 18, 2022, 2:39 PM IST
ಶಿರಸಿ: ಜಿಂಕೆ ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬನವಾಸಿ ವಲಯಾರಣ್ಯಾಧಿಕಾರಿಗಳು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬನವಾಸಿ ಸಮೀಪದ ಕಾನಕೊಪ್ಪದಲ್ಲಿ ಜಿಂಕೆ ಹತ್ಯೆ ಮಾಡಿ ಅಡುಗೆ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ಪರಮೇಶ್ವರ ಮಡಿವಾಳ, ಶಿವಪ್ಪ ಗೌಡರನ್ನು ಬಂಧಿಸಲಾಗಿದೆ. ಶಿವರಾಮ ನಾಯ್ಕ ಬ್ಯಾಗದ್ದೆ ತಲೆಮರೆಸಿಕೊಂಡ ಆರೋಪಿ.
ಕಾರ್ಯಾಚರಣೆಯಲ್ಲಿ ಡಿಎಫ್ಓ ಅಜ್ಜಯ್ಯ, ಎಸಿಎಫ್ ಅಶೋಕ ಅಲಗೂರು, ವಲಯ ಅರಣ್ಯದ ಅಧಿಕಾರಿ ಉಷಾ ಕಬ್ಬೇರ ನೇತೃತ್ವದ ತಂಡ ಹಾಗೂ ಸಿಬಂದಿಗಳು ಪಾಲ್ಗೊಂಡಿದ್ದರು.