ಅಪ್ಸರಕೊಂಡ ಕಡಲ ತೀರದಲ್ಲಿ ಹೆಚ್ಚುತ್ತಿದೆ ಜನದಟ್ಟಣೆ

ಬ್ಲ್ಯೂ ಫ್ಲ್ಯಾಗ್‌ ದೊರೆತ ಮೇಲೆ ಇಕೋ ಬೀಚ್‌ ಚಿತ್ರಣವೇ ಬದಲು

Team Udayavani, Nov 11, 2020, 7:19 PM IST

ಅಪ್ಸರಕೊಂಡ ಕಡಲ ತೀರದಲ್ಲಿ ಹೆಚ್ಚುತ್ತಿದೆ ಜನದಟ್ಟಣೆ

ಹೊನ್ನಾವರ: ದಶಕಗಳಿಂದ ಆಕರ್ಷಣೆಯ ಕೇಂದ್ರವಾಗಿರುವ ಕಾಸರಕೋಡ ಇಕೋ ಬೀಚ್‌ ಬೇರೆ ಅದಕ್ಕೆ ಹೊಂದಿಕೊಂಡು ಇತ್ತೀಚೆ ಬ್ಲ್ಯೂ ಫ್ಲ್ಯಾಗ್‌ ಪಡೆದ ಸೌಲಭ್ಯಗಳು ಬೇರೆ. ಎರಡೂ ಒಂದೇ ಅಲ್ಲ,ಹಿಂದಿನವರು ಕಷ್ಟಪಟ್ಟು ಮಾಡಿದ್ದನ್ನು, ಇಂದಿನವರು ಮಾಡಿದ್ದನ್ನು ಇಲ್ಲಿ ಹೇಳಬೇಕಾಗಿದೆ.

ಹಿಂದೆ ಡಿಎಫ್‌ಒ ಆಗಿದ್ದ ಕೃಷ್ಣ ಉದುಪುಡಿ ಇವರ ಕಲ್ಪನೆ ಸಾಕಾರಗೊಂಡು ಸಮುದ್ರ ತೀರಕ್ಕೆ ಹೊಂದಿಕೊಂಡ ಗಾಳಿತೋಪಿನಲ್ಲಿ ವಿವಿಧ ರೀತಿಯ ಪ್ರಾಣಿಯ ಪ್ರತಿರೂಪ, ವಿಶ್ರಾಂತಿಗೆ ಬೆಂಚು, ಕೋಣೆಗಳು, ಸ್ನಾನದ ಮನೆ, ಮಕ್ಕಳಿಗೆ ಆಟಿಕೆ, ಜೋಕಾಲಿ ಒದಗಿಬಂತು. ಗ್ರಾಮ ಅರಣ್ಯ ಸಮಿತಿಗೆ ಇದನ್ನು ಆದಾಯ ಮೂಲವಾಗಿ ಕೊಟ್ಟರು. ನಂತರ ಬಂದ ಡಿಎಫ್‌ಒ ವಸಂತ ರೆಡ್ಡಿ ಇದನ್ನು ಅಭಿವೃದ್ಧಿಪಡಿಸಿದರು. ಸಂಜೆ ಮತ್ತು ರಜಾದಿನಗಳಲ್ಲಿ ಸಾವಿರಾರು ಜನ ಬಂದು ಇಲ್ಲಿ ಆನಂದಿಸಿದರು, ಕಡಲತೀರದಲ್ಲಿ ಓಡಾಡಿದರು.ಇದಕ್ಕೆ ಇಕೋ ಬೀಚ್‌ ಎಂದು ಹೆಸರಿಟ್ಟು ಇದರ ಮುಂದುವರಿದ ಭಾಗವಾಗಿ ಅಪ್ಸರಕೊಂಡದವರೆಗೆ, ಇಡಗುಂಜಿ ತಿರುವಿನಲ್ಲಿ, ರಾಮತೀರ್ಥ ಗುಡ್ಡದ ಮೇಲೆ ವಿವಿಧ ವನಗಳು ತಲೆ ಎತ್ತಿ ಜನಾಕರ್ಷಣೆಯ ಕೇಂದ್ರವಾದವು. ಈಗ ಸರಿಯಾಗಿ ನಿರ್ವಹಣೆಯಿಲ್ಲದೆ ಇದು ಸೊರಗಿದೆ.

ಇದಕ್ಕೆ ಹೊಂದಿಕೊಂಡು ಸಮುದ್ರ ತೀರದಲ್ಲಿ ಬಣ್ಣ ಬಣ್ಣದ ಇಂಟರ್‌ಲಾಕ್‌ ಜೋಡಿಸಿ ಫುಟ್ಪಾತ್ ನಿರ್ಮಿಸಿ ಬೀದಿದೀಪ ವ್ಯವಸ್ಥೆ ಮಾಡಲಾಗಿದೆ. ಫ್ರೈವುಡ್‌ ಮತ್ತು ಬಿದಿರು ಬಳಸಿ 6 ಶೆಡ್‌ ಗಳನ್ನು ನಿರ್ಮಿಸಿ ಕಾರ್ಯಾಲಯಕ್ಕೆ, ಪ್ರಥಮ ಚಿಕಿತ್ಸೆಗೆ, ಕುಡಿಯುವ ನೀರಿಗೆ, ಶೌಚಾಲಯಕ್ಕೆಒಂದೊಂದು ಕೋಣೆಯನ್ನಿಟ್ಟಿದ್ದು ಉಳಿದವುಗಳನ್ನುಬಯಲು ಸ್ನಾನಗೃಹವನ್ನಾಗಿ ಮಾಡಿ ಸಮುದ್ರ ಸ್ನಾನ ಮಾಡಿದವರಿಗೆ ಸಿಹಿನೀರಿನ ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ಬದಿಗೆ ಬಿದಿರು, ಬೆತ್ತ, ಹುಲ್ಲುಬಳಸಿ 4 ಪ್ಯಾರಾಗೋಲಾವನ್ನು ನಿಲ್ಲಿಸಿ ಮಕ್ಕಳ ಆಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವೀಕ್ಷಣಾಗೋಪುರ ನಿರ್ಮಾಣವಾಗಿದೆ. ಸ್ವತ್ಛತೆ ನಿರ್ವಹಣೆಗೆ 38 ಸಿಬ್ಬಂದಿ ನೇಮಿಸಲ್ಪಟ್ಟಿದ್ದು ಸ್ನಾನ ಶೌಚಾಲಯ ಬಳಕೆಗೆ ತಲಾ 10 ರೂ. ಪಡೆಯಲಾಗುತ್ತಿದೆ. ಇದಕ್ಕೆ ಬ್ಲ್ಯೂಫ್ಲ್ಯಾಗ್‌ ಬಂದಿದ್ದು ಇಕೋ ಬೀಚ್‌ಗೆ ಬಂತು ಎಂದು ಭಾರೀ ಪ್ರಚಾರದ ಹಿನ್ನೆಲೆಯಲ್ಲಿ ಜನ ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಿಆರ್‌ಝಡ್‌ ಕಾನೂನಿನಂತೆ ಎಲ್ಲವೂ ತಾತ್ಪೂರ್ತಿಕನಿರ್ಮಾಣಗಳು. ಇದಕ್ಕೆ 8 ಕೋಟಿ ರೂಪಾಯಿ ವೆಚ್ಚವಾಗಿದೆ.

ಅರಣ್ಯ ಇಲಾಖೆ ಕಾರ್‌ ಪಾರ್ಕಿಂಗ್‌ಗೆ 40ರೂ. ಪಡೆಯುತ್ತಿರುವುದು ಹೆಚ್ಚಾಯಿತು. ಇಕೋ ಬೀಚ್‌ ಒಳಗೆ ಹೋಗಲು 10 ರೂ, ಅಷ್ಟೇ ಪಡೆದರೆ ಸಾಕಿತ್ತು.ಈ ಎಲ್ಲ ವ್ಯವಸ್ಥೆ ಗುತ್ತಿಗೆ ಕೊಡಲಾಗಿದೆ. ಬ್ಲ್ಯೂ ಫ್ಲ್ಯಾಗ್‌ ಪ್ರಚಾರದ ಅಬ್ಬರ ಬಳಸಿಕೊಂಡು ಅಲ್ಲಿ ಜನ ತೃಪ್ತಿಪಡದಿದ್ದರೆ ಅರಣ್ಯ ಇಲಾಖೆ ಇಕೋ ಬೀಚ್‌ನಿಂದ ಖುಷಿ ಪಡುತ್ತಾರೆ. ಕಸಕಡ್ಡಿ ಸ್ವತ್ಛ ಮಾಡಿ ಸ್ನಾನಗೃಹ, ಶೌಚಾಲಯವನ್ನು ದುರಸ್ತಿಗೊಳಿಸಿ, ಇನ್ನೊಂದೆರಡುಕ್ಯಾಂಟೀನ್‌ಗೆ ಅವಕಾಶ ನೀಡಿ ಬಾಯಿರುಚಿ ತೃಪ್ತಿಪಡಿಸುವ ವ್ಯವಸ್ಥೆ ಆದರೆ, ಆಟಿಕೆಗಳಿಗೆ ಮತ್ತು ಡಾಲ್ಫಿನ್‌ ಮೊದಲಾದ ಸಿಮೆಂಟ್‌ ಮೊದಲಾದ ಕಲಾಕೃತಿಗಳಿಗೆ ಬಣ್ಣಹಚ್ಚಿದ್ದರೆ ಅರಣ್ಯ ಇಲಾಖೆಗೆ ಆದಾಯ ಹೆಚ್ಚಾಗುತ್ತಿತ್ತು. ಇಕೋಬೀಚ್‌ ಕಡಲ ಸಹಜ ಸೌಂದರ್ಯಕ್ಕೆ ಅಡ್ಡವಾಗಿರಲಿಲ್ಲ. ಬ್ಲ್ಯೂಫ್ಲ್ಯಾಗ್‌ ಸಹಜ ಸುಂದರಿಗೆ ಕೃತಕ ಆಭರಣದಿಂದ ಅಲಂಕರಿಸಿದಂತಿದೆ. ಈಗ ಜನಕ್ಕೆ ಬೇಕಾದದ್ದು ಅದೇ ಅಲ್ಲವೇ ?

 

ಜೀಯು, ಹೊನ್ನಾವರ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.