ಆಳಸಮುದ್ರಕ್ಕೆ ತೆರಳುತ್ತಿಲ್ಲ ಬೋಟ್
Team Udayavani, Sep 11, 2019, 11:11 AM IST
ಪಣಜಿ: ಮಾಲಿಮ್ ಜೆಟ್ಟಿಯಲ್ಲಿ ಮೀನುಗಾರಿಕಾ ಬೋಟ್ಗಳು ನಿಂತಿವೆ.
ಪಣಜಿ: ಗೋವಾದಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆ ನಡೆಸದಂತೆ ಹೇರಿದ್ದ ನಿರ್ಬಂಧ ತೆರವುಗೊಂಡು ತಿಂಗಳು ಕಳೆದರೂ ಹವಾಮಾನ ವೈಪರೀತ್ಯದಿಂದಾಗಿ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಮೀನುಗಾರರ ಬಳಿ ಸಾಧ್ಯವಾಗದೆಯೇ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.
ಪಣಜಿ ಸಮೀಪದ ಮಾಲಿಮ್ ಜೆಟ್ಟಿಯಲ್ಲಿ ಸುಮಾರು 200 ಮೀನುಗಾರಿಕಾ ಬೋಟ್ಗಳು ದಡದಲ್ಲಿಯೇ ನಿಂತಿವೆ. ಅಂತೆಯೇ ರಾಜ್ಯದ ಇತರ ಜೆಟ್ಟಿಗಳಲ್ಲಿಯೂ ಮೀನುಗಾರಿಕಾ ಬೋಟ್ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕಾ ಬೋಟ್ಗಳ ಕಾರ್ಮಿಕರಿಗೆ ದಿನಕ್ಕೆ ಊಟ-ತಿಂಡಿ ಇತರ ಖರ್ಚು ಬಿಟ್ಟು ಒಬ್ಬರಿಗೆ 400 ರೂ. ವೇತನ ನೀಡಬೇಕಾಗುತ್ತದೆ. ಆದರೆ ಆಳಸಮುದ್ರಕ್ಕೆ ತೆರಳಲು ಸಾಧ್ಯವಾಗದಿದ್ದರೂ ವೇತನ ನೀಡಲೇ ಬೇಕು. ಇದರಿಂದಾಗಿ ಮೀನುಗಾರಿಕಾ ಬೋಟ್ ಹೊಂದಿದ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ