ಯಕ್ಷಗಾನ ಇತಿಹಾಸ ತೆರೆದಿಟ್ಟ ಕರಪತ್ರ!


Team Udayavani, Dec 10, 2018, 3:23 PM IST

10-december-14.gif

ಹೊನ್ನಾವರ: 61ವರ್ಷಗಳ ಹಿಂದಿನ ಕತೆ. ಇಡಗುಂಜಿ ಮಹಾಗಣಪತಿ ಪ್ರಸಾದಿತ ಯಕ್ಷಗಾನ ಮಂಡಳಿ ಕೆರೆಮನೆ ಇವರು ಕುಮಟಾ ರಮಣ ಮುದ್ರಣಾಲಯದಲ್ಲಿ ಮುದ್ರಿಸಿದ ಈ ಕರಪತ್ರ ಯಕ್ಷಗಾನಕ್ಕೆ ಸಂಬಂಧಿ ಸಿದ ಹಲವು ಕತೆಗಳನ್ನು ತೆರೆದಿಡುತ್ತದೆ.

15-3-1957ನೇ ಶುಕ್ರವಾರ ರಾತ್ರಿ ಸಿದ್ದಾಪುರ ತಾಲೂಕು ಕಾನಸೂರಿನ ಗಿರಣಿಬಯಲಿನಲ್ಲಿ ಕಟ್ಟಿಸಿದ ಭವ್ಯ ತಂಬುವಿನಲ್ಲಿ ಆಟ. ಪ್ರಸಂಗ ಹಿಡಂಬಾ ವಿವಾಹ ಮತ್ತು ಬೇಡರ ಕಣ್ಣಪ್ಪ. ಈ ಆಖ್ಯಾನದಲ್ಲಿ ಅಭಿನಯಿಸುವವರು… ಎಂದು ಹೇಳಿದೆ. ಈಗ ಒಬ್ಬ ಕಲಾವಿದ ಎರಡು ಪಾತ್ರ ಮಾಡಿದರೆ ಹಣದ ಆಸೆಗೆ ಮಾಡಿದ ಎಂದು ಟೀಕಿಸುತ್ತಾರೆ. ಆಕರ್ಷಣೆಗಾಗಿ ಮತ್ತು ಕಲಾವಿದನ ಸಾಮರ್ಥ್ಯ ಪ್ರದರ್ಶನಕ್ಕೆ ಎರಡು ಪಾತ್ರ ಮಾಡುವ ಸಂಪ್ರದಾಯ ಅಂದೂ ಇತ್ತು. ಕೆರೆಮನೆ ಶಿವರಾಮ ಹೆಗಡೆ ಹಿಡಂಬಾ ವಿವಾಹದಲ್ಲಿ ಭೀಮನಾಗಿ ಮತ್ತು ಬೇಡರ ಕಣ್ಣಪ್ಪದಲ್ಲಿ ಹಾಸ್ಯಪಾತ್ರ ಕೈಲಾಸ ಶಾಸ್ತ್ರಿಯಾಗಿ ಅಭಿನಯಿಸಿದ್ದರು.

ಪ್ರಸಿದ್ಧ ಕಲಾವಿದರನ್ನು ಅತಿಥಿಯಾಗಿ ಕರೆಸಿಕೊಂಡರೆ ಈಗ ಮೇಳದ ಕಲಾವಿದರಲ್ಲಿ ಅಸಮಾಧಾನ ಇರುತ್ತದೆ. ಆಗ ಮೇಳದ ಯಾಜಿ ಭಾಗÌತ್‌ ಮತ್ತು ಮಾರ್ವಿ ನಾರಾಯಣ ಭಾಗÌತರು ವಿಶೇಷ ಆಕರ್ಷಣೆಯಾಗಿದ್ದರು. ಸ್ಪೇಷಲ್‌ ಆಗಿ ಬಹುಜನ ನೋಡಬೇಕು ಎಂದು ಅಪೇಕ್ಷಿಸುವ ಪ್ರಖ್ಯಾತ ಹಾಸ್ಯಗಾರ ಸಾಲಿಗ್ರಾಮ ಮಂಜುನಾಥಯ್ಯ ಅವರನ್ನು ಕರೆಸಲಾಗಿದೆ ಎಂದು ಕರಪತ್ರ ಹೇಳಿದ್ದು, ಹಾಸ್ಯಗಾರ ಮಂಜುನಾಥಯ್ಯನವರ ಕುಮಾರಿ ಪಂಡರಿಬಾಯಿ ಇವಳನ್ನು ಡ್ಯಾನ್ಸ್‌ ಮಾಡಲು ಕರೆಸಲಾಗಿದೆ. ಈ ಸುಸಂಧಿ  ಕಳೆದುಕೊಳ್ಳಬೇಡಿ ಎಂದು ಕರಪತ್ರ ಹೇಳಿದೆ. ಇಂದು ವಿಶೇಷ ಆಕರ್ಷಣೆ ಟೀಕೆಗೊಳಗಾಗುತ್ತದೆ.

ಅಪರೂಪದ ಈ ಕರಪತ್ರ ಫೇಸ್‌ ಬುಕ್‌ನಲ್ಲಿ ಪ್ರಕಟಿಸಿದಾಗ ಆಗಲೂ ಡ್ಯಾನ್ಸ್‌ ಇತ್ತು ಎಂದು ಕಡತೋಕಾ ಸೂರಣ್ಣ ಈಗಿನ ಟೀಕೆಗೆ ಉತ್ತರಿಸಿದ್ದಾರೆ. ಅದ್ಭುತ ದಾಖಲೆ ಎಂದು ಕೆರೆಮನೆ ಶಿವಾನಂದ ಹೇಳಿದ್ದಾರೆ. ಅಮೆರಿಕದಿಂದ ಆನಂದ ಹಾಸ್ಯಗಾರ ಮೆಚ್ಚುಗೆ ವ್ಯಕ್ತಮಾಡಿ ಕೆರೆಮನೆ ಶಿವರಾಮ ಹೆಗಡೆ ಆ ಕಾಲದಲ್ಲಿ ಎರಡು ವೇಷ ಮಾಡಿದ್ದು, ಕಲೆಗಾಗಿ ಹಿಂದಿನ ಮುಖ್ಯ ಕಲಾವಿದರು ಕೋಡಂಗಿಯಿಂದ ಆರಂಭಿಸಿ ಮುಖ್ಯವೇಷ, ಸಣ್ಣವೇಷಗಳನ್ನು ಮಾಡಿ ಆಕರ್ಷಣೆ ಉಳಿಸಿದ್ದರು ಎಂದು ಹೇಳಿದ್ದಾರೆ.

ಅಂದು ಟಿಕೆಟ್‌ ದರ ಕುರ್ಚಿ 2ರೂ. ಬೇಂಚ್‌ 1ರೂ. ಚಾಪೆ ಎಂಟಾಣೆ, ನೆಲ ಆರಾಣೆ ಇತ್ತು. ಹೆಚ್ಚು ಪ್ರೇಕ್ಷಕರು ಬಂದರೆ ಎಂದು ಸಮಯಾನುಸಾರ ಟಿಕೆಟ್‌ ದರದಲ್ಲಿ ಹೆಚ್ಚು ಕಡಿಮೆ ಮಾಡಲಾಗುವುದು ಎಂದು ಹೇಳಲಾಗಿದೆ. ಈಗ ಗೌರವ ಪ್ರವೇಶ ಎಂದು ಕವರ್‌ ಕೊಟ್ಟು ಹಣ ಪಡೆದುಕೊಂಡು, ಟಿಕೆಟ್‌ ದರ ಪಸ್ಟ್‌ ಕ್ಲಾಸ್‌ 500ರೂ. ಇಟ್ಟು ಅರ್ಧ ಸಭಾಗೃಹದ ನಂತರ ಕೂರಿಸುವುದು ಮಾಮೂಲಾಗಿದೆ. ಹಿಲಾಲು ಬೆಳಕಿನಲ್ಲಿ ಬಯಲು ಚಪ್ಪರದಲ್ಲಿ ನಡೆಯುತ್ತಿದ್ದ ಆಟ ತಂಬುವಿಗೆ ಬದಲಾಗಿ ಝಗಝಗಿಸುವ ಗ್ಯಾಸ್‌ ಲೈಟ್‌ ದೀಪ, ನಂತರ ಜನರೇಟರ್‌ನಿಂದ ಬೆಳಗುವ ವಿದ್ಯುತ್‌ ದೀಪ, ಹಲವು ಹತ್ತು ಮೇಳಗಳ ಸ್ಪರ್ಧೆ, ದೇವಾಲಯದ ಆಶ್ರಯ, ಒಂದು ಕಲಾವಿದ ಒಂದೇ ಮೇಳಕ್ಕೆ ಬೆಳ ತನಕ ಆಟ ಎಂಬುದೆಲ್ಲಾ ಬದಲಾಗುತ್ತಾ ಅರ್ಧಶತಮಾನದ ಹಿಂದಿನ ಸಂಪ್ರದಾಯ ಹೆಸರು ಬದಲಾವಣೆಯೊಂದಿಗೆ ಪುನಃ ಚಾಲ್ತಿಯಲ್ಲಿದೆ. ಪರಿವರ್ತನೆ ಜಗದ ನಿಯಮ ಎಂಬುದಕ್ಕೆ ಸಾಕ್ಷಿಯಾಗಿದೆ.

ಜೀಯು, ಹೊನ್ನಾವರ 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.