ಬರಿದಾಗುತ್ತಿದೆ ಕಡವಿನಕಟ್ಟೆ ಡ್ಯಾಂ


Team Udayavani, Apr 26, 2019, 5:02 PM IST

nc-1

ಭಟ್ಕಳ: ನಗರದ ನೀರು ಸರಬರಾಜಿನ ಏಕೈಕ ಮೂಲ ಕಡವಿನಕಟ್ಟೆ ಡ್ಯಾಂ ಬತ್ತಿಹೋಗುವ ಸಂಭವವಿದ್ದು ಹಾಗೇನಾದರೂ ಆದಲ್ಲಿ ನಗರದ ಜನತೆ ನೀರಿಗಾಗಿ ಪರಿತಪಿಸಬೇಕಾಗುವುದಂತೂ ಸತ್ಯ.

ಕಡವಿನಕಟ್ಟೆಯಲ್ಲಿ ಹರಿಯುತ್ತಿರುವ ಭೀಮಾ ನದಿಗೆ ವೆಂಕಟಾಪುರದಲ್ಲಿ ಅಡ್ಡಲಾಗಿ ಕಟ್ಟಲಾದ ಡ್ಯಾಂ ಹಲವಾರು ವರ್ಷ ಕೃಷಿ ಜಮೀನಿಗೆ ನೀರುಣಿಸಿತು. ಡ್ಯಾಂ ಕಟ್ಟಿರುವ ಉದ್ದೇಶವೇ ಅದು ಆಗಿದ್ದರೂ ಇಲಾಖೆಗಳ ಕಳಪೆ ನಿರ್ವಹಣೆಯಿಂದಾಗಿ ಕಾಲುವೆಯಲ್ಲಿ ನೀರಿನ ಹರಿವು ಬಂದಾಗಿದ್ದು ರೈತರು ಸಾಕಷ್ಟು ಪ್ರಯತ್ನ ಪಟ್ಟರೂ ನೀರು ಹರಿಸುವುದು ಕಷ್ಟಕರವಾಗಿದ್ದರಿಂದ ಕೃಷಿಯನ್ನೇ ನಂಬಿರುವ ಅನೇಕ ಕುಟುಂಬಗಳು ಇಂದು ಕೇವಲ ಮಳೆಗಾಲದಲ್ಲಿ ಮಾತ್ರ ಕೃಷಿ ಮಾಡುತ್ತಿವೆ.

ಕೃಷಿಕರಿಗೆ ನಿರಾಸೆ: ಕಡವಿನಕಟ್ಟೆ ಡ್ಯಾಂ ಕೃಷಿಕರಿಗೆಂದು ನಿರ್ಮಾಣವಾಗಿ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿದ್ದರೆ ಕಳೆದ ದಶಕದಿಂದ ಕೃಷಿಕರಿಗೆ ನೀರು ದೊರೆಯದೇ ಕೇವಲ ಕುಡಿಯುವ ನೀರಿಗೆ ಉಪಯೋಗವಾಗುತ್ತಿದೆ. ಮತ್ತೆ ಕೃಷಿಗೆ ನೀರು ಪಡೆಯಲು ರೈತರು ಮಾಡಿದ ಪ್ರಯತ್ನವೂ ವಿಫಲವಾಗಿದೆ. ಇದಕ್ಕೆ ಕಾರಣ ರೈತರಿಗೆ ನೀರು ಸರಬರಾಜು ಮಾಡಬೇಕಾಗಿದ್ದ ನೀರಿನ ಚಾನೆಲ್ ಸಂಪೂರ್ಣ ಕುಸಿದಿರುವುದು. ಡ್ಯಾಂನಲ್ಲಿನ ನೀರನ್ನು ಹೆಚ್ಚು ಹೆಚ್ಚು ಕುಡಿಯುವ ನೀರಿಗಾಗಿ ಬಳಸುತ್ತಿರುವುದು.

ಕುಡಿಯಲು ಬಳಕೆ: ಕಡವಿನಕಟ್ಟೆ ಡ್ಯಾಂನಿಂದ ಪ್ರತಿನಿತ್ಯ ಸಾವಿರಾರು ಗ್ಯಾಲನ್‌ ನೀರನ್ನು ಕುಡಿಯುವ ನೀರು ಸರಬರಾಜಿಗಾಗಿ ಬಳಸಲಾಗುತ್ತಿದೆ. ಮೊದಲು ಭಟ್ಕಳ ನಗರಕ್ಕೆ ನೀರು ಸರಬರಾಜು ಮಾಡಲು ರೈತರ ವಿರೋಧದ ನಡುವೆಯೂ ಪಂಪ್‌ ಹಾಕಲಾಗಿದ್ದು ನಂತರ ನಿಧಾನವಾಗಿ ಶಿರಾಲಿ ಗ್ರಾಪಂ ಪಂಪ್‌ ಅಳವಡಿಸಿ ಕುಡಿಯಲು ನೀರು ಬಳಸಿಕೊಂಡರೆ, ಕಳೆದೆರಡು ವರ್ಷಗಳ ಹಿಂದೆ ಮಾವಿನಕುರ್ವೆ ಗ್ರಾಪಂಗೆ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿದ ಅಂದಿನ ಶಾಸಕ ಮಂಕಾಳ ವೈದ್ಯ ಇದೇ ಡ್ಯಾಂನಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.

ಡ್ಯಾಂ ರಿಪೇರಿ: ದಶಕದ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗೆ ಗುತ್ತಿಗೆ ನೀಡಲಾಯಿತು. ಡ್ಯಾಂ ಸೈಟ್ ರಿಪೇರಿ ಮಾಡಲಾಯಿತಾದರೂ ಸಹ ಅಲ್ಲಿನ ಗೇಟ್ವಾಲ್ ಮಾತ್ರ ರಿಪೇರಿ ಮಾಡಲಾಗಿಲ್ಲ. ರಿಪೇರಿಗಾಗಿ ಸುಮಾರು 200-300 ಲಾರಿಗಷ್ಟು ಮಣ್ಣನ್ನು ಸುರಿದಿದ್ದು ರಿಪೇರಿ ಮುಗಿಯುವಾಗ ಮಳೆಗಾಲ ಆರಂಭವಾಗಿದ್ದರಿಂದ ಆ ಮಣ್ಣನ್ನು ತೆಗೆಯಲು ಸಾಧ್ಯವಾಗದೇ ಅಲ್ಲಿಯೇ ಉಳಿಯಿತು. ನಂತರ ಡ್ಯಾಂ ಸೈಟ್‌ನಲ್ಲಿರುವ ಮಣ್ಣನ್ನು ತೆಗೆಯಲು ಜನಾಗ್ರಹ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ತಲುಪಲು ಸಾಧ್ಯವಾಗೇ ಇಲ್ಲ.

ಇನ್ನೊಂದು ಡ್ಯಾಂಗೆ ಬೇಡಿಕೆ

ಕಡವಿನಕಟ್ಟೆ ಡ್ಯಾಂ ಎತ್ತರಿಸಬೇಕೆನ್ನುವ ಬೇಡಿಕೆ ಇದೆಯಾದರೂ ಇದರಿಂದ ಡ್ಯಾಂ ಮೇಲುಗಡೆಯಲ್ಲಿರುವ ಹಲವರ ಜಮೀನು ಮುಳುಗಡೆಯಾಗುವುದರಿಂದ ಎತ್ತರಿಸಲಿಲ್ಲ. ಆದರೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಈಗಿರುವ ಕಡವಿನಕಟ್ಟೆ ಡ್ಯಾಂ ಕೆಳಗಡೆಯಲ್ಲಿ ಇನ್ನೊಂದು ಡ್ಯಾಂ ನಿರ್ಮಾಣ ಮಾಡಬೇಕು ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತಾದರು ನಮ್ಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇನ್ನೂ ಕೂಡಾ ಈ ಕುರಿತು ಚಿಂತಿಸಲು ಸಮಯವೇ ದೊರೆತಿಲ್ಲ ಎನ್ನಬಹುದು. ಅನಾವಶ್ಯಕವಾಗಿ ನೀರು ಹರಿದು ಹೋಗುವುದನ್ನು ತಪ್ಪಿಸಿ, ಉಪಯೋಗ ಮಾಡಿಕೊಳ್ಳಬಹುದು ಎನ್ನುವುದು ಜನರ ಅಳಲಾಗಿದೆ.
ಮಾರ್ಗ ಕಂಡು ಹಿಡಿಯಲಿ

ಕಡವಿನಕಟ್ಟೆ ಡ್ಯಾಂನಿಂದ ಭಟ್ಕಳ ನಗರ, ಶಿರಾಲಿ, ಮಾವಿನಕುರ್ವೆಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಎಂದೂ ಡ್ಯಾಂನಲ್ಲಿನ ನೀರಿನ ಸಾಮರ್ಥ್ಯ ಮಾತ್ರ ಅಳತೆ ಮಾಡಿಲ್ಲ. ವರ್ಷ ಕಳೆದಂತೆಲ್ಲಾ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದು ಮೊದಲು ಎಪ್ರಿಲ್ ಮೇ ತನಕ ನೀರು ಹರಿಯುತ್ತಿದ್ದರೆ, ಇಂದು ಮಾರ್ಚ್‌ ಎಪ್ರಿಲ್ನಲ್ಲಿಯೇ ನೀರಿನ ಒಳಹರಿವು ಬಂದ್‌ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ನೀರು ಅಗತ್ಯವಿದೆ. ನೀರಿನ ಒಳಹರಿವು ಇನ್ನೂ ಕೂಡಾ ಕಡಿಮೆಯಾದರೆ ನೀರನ್ನು ಹಿಡಿದಿಟ್ಟುಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮ ಏನು ಎಂದು ಯೋಚಿಸಬೇಕಾಗಿದೆ.
ಆರ್ಕೆ, ಭಟ್ಕಳ

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.