ಬರಿದಾಗುತ್ತಿದೆ ಕಡವಿನಕಟ್ಟೆ ಡ್ಯಾಂ
Team Udayavani, Apr 26, 2019, 5:02 PM IST
ಭಟ್ಕಳ: ನಗರದ ನೀರು ಸರಬರಾಜಿನ ಏಕೈಕ ಮೂಲ ಕಡವಿನಕಟ್ಟೆ ಡ್ಯಾಂ ಬತ್ತಿಹೋಗುವ ಸಂಭವವಿದ್ದು ಹಾಗೇನಾದರೂ ಆದಲ್ಲಿ ನಗರದ ಜನತೆ ನೀರಿಗಾಗಿ ಪರಿತಪಿಸಬೇಕಾಗುವುದಂತೂ ಸತ್ಯ.
ಕಡವಿನಕಟ್ಟೆಯಲ್ಲಿ ಹರಿಯುತ್ತಿರುವ ಭೀಮಾ ನದಿಗೆ ವೆಂಕಟಾಪುರದಲ್ಲಿ ಅಡ್ಡಲಾಗಿ ಕಟ್ಟಲಾದ ಡ್ಯಾಂ ಹಲವಾರು ವರ್ಷ ಕೃಷಿ ಜಮೀನಿಗೆ ನೀರುಣಿಸಿತು. ಡ್ಯಾಂ ಕಟ್ಟಿರುವ ಉದ್ದೇಶವೇ ಅದು ಆಗಿದ್ದರೂ ಇಲಾಖೆಗಳ ಕಳಪೆ ನಿರ್ವಹಣೆಯಿಂದಾಗಿ ಕಾಲುವೆಯಲ್ಲಿ ನೀರಿನ ಹರಿವು ಬಂದಾಗಿದ್ದು ರೈತರು ಸಾಕಷ್ಟು ಪ್ರಯತ್ನ ಪಟ್ಟರೂ ನೀರು ಹರಿಸುವುದು ಕಷ್ಟಕರವಾಗಿದ್ದರಿಂದ ಕೃಷಿಯನ್ನೇ ನಂಬಿರುವ ಅನೇಕ ಕುಟುಂಬಗಳು ಇಂದು ಕೇವಲ ಮಳೆಗಾಲದಲ್ಲಿ ಮಾತ್ರ ಕೃಷಿ ಮಾಡುತ್ತಿವೆ.
ಕೃಷಿಕರಿಗೆ ನಿರಾಸೆ: ಕಡವಿನಕಟ್ಟೆ ಡ್ಯಾಂ ಕೃಷಿಕರಿಗೆಂದು ನಿರ್ಮಾಣವಾಗಿ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿದ್ದರೆ ಕಳೆದ ದಶಕದಿಂದ ಕೃಷಿಕರಿಗೆ ನೀರು ದೊರೆಯದೇ ಕೇವಲ ಕುಡಿಯುವ ನೀರಿಗೆ ಉಪಯೋಗವಾಗುತ್ತಿದೆ. ಮತ್ತೆ ಕೃಷಿಗೆ ನೀರು ಪಡೆಯಲು ರೈತರು ಮಾಡಿದ ಪ್ರಯತ್ನವೂ ವಿಫಲವಾಗಿದೆ. ಇದಕ್ಕೆ ಕಾರಣ ರೈತರಿಗೆ ನೀರು ಸರಬರಾಜು ಮಾಡಬೇಕಾಗಿದ್ದ ನೀರಿನ ಚಾನೆಲ್ ಸಂಪೂರ್ಣ ಕುಸಿದಿರುವುದು. ಡ್ಯಾಂನಲ್ಲಿನ ನೀರನ್ನು ಹೆಚ್ಚು ಹೆಚ್ಚು ಕುಡಿಯುವ ನೀರಿಗಾಗಿ ಬಳಸುತ್ತಿರುವುದು.
ಕುಡಿಯಲು ಬಳಕೆ: ಕಡವಿನಕಟ್ಟೆ ಡ್ಯಾಂನಿಂದ ಪ್ರತಿನಿತ್ಯ ಸಾವಿರಾರು ಗ್ಯಾಲನ್ ನೀರನ್ನು ಕುಡಿಯುವ ನೀರು ಸರಬರಾಜಿಗಾಗಿ ಬಳಸಲಾಗುತ್ತಿದೆ. ಮೊದಲು ಭಟ್ಕಳ ನಗರಕ್ಕೆ ನೀರು ಸರಬರಾಜು ಮಾಡಲು ರೈತರ ವಿರೋಧದ ನಡುವೆಯೂ ಪಂಪ್ ಹಾಕಲಾಗಿದ್ದು ನಂತರ ನಿಧಾನವಾಗಿ ಶಿರಾಲಿ ಗ್ರಾಪಂ ಪಂಪ್ ಅಳವಡಿಸಿ ಕುಡಿಯಲು ನೀರು ಬಳಸಿಕೊಂಡರೆ, ಕಳೆದೆರಡು ವರ್ಷಗಳ ಹಿಂದೆ ಮಾವಿನಕುರ್ವೆ ಗ್ರಾಪಂಗೆ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿದ ಅಂದಿನ ಶಾಸಕ ಮಂಕಾಳ ವೈದ್ಯ ಇದೇ ಡ್ಯಾಂನಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.
ಡ್ಯಾಂ ರಿಪೇರಿ: ದಶಕದ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗೆ ಗುತ್ತಿಗೆ ನೀಡಲಾಯಿತು. ಡ್ಯಾಂ ಸೈಟ್ ರಿಪೇರಿ ಮಾಡಲಾಯಿತಾದರೂ ಸಹ ಅಲ್ಲಿನ ಗೇಟ್ವಾಲ್ ಮಾತ್ರ ರಿಪೇರಿ ಮಾಡಲಾಗಿಲ್ಲ. ರಿಪೇರಿಗಾಗಿ ಸುಮಾರು 200-300 ಲಾರಿಗಷ್ಟು ಮಣ್ಣನ್ನು ಸುರಿದಿದ್ದು ರಿಪೇರಿ ಮುಗಿಯುವಾಗ ಮಳೆಗಾಲ ಆರಂಭವಾಗಿದ್ದರಿಂದ ಆ ಮಣ್ಣನ್ನು ತೆಗೆಯಲು ಸಾಧ್ಯವಾಗದೇ ಅಲ್ಲಿಯೇ ಉಳಿಯಿತು. ನಂತರ ಡ್ಯಾಂ ಸೈಟ್ನಲ್ಲಿರುವ ಮಣ್ಣನ್ನು ತೆಗೆಯಲು ಜನಾಗ್ರಹ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ತಲುಪಲು ಸಾಧ್ಯವಾಗೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ