ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪ್ರಾಧ್ಯಾಪಕ ರ ಮೇಲೆ ಪ್ರಕರಣ ದಾಖಲು
Team Udayavani, Jan 23, 2022, 11:30 AM IST
ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಆರ್.ಶಿರೋಡಕರ ಎಂಬುವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಧ್ಯಾಪಕ ಶಿರೋಡಕರ ಇತ್ತೀಚೆಗೆ ಪರ ರಾಜ್ಯಕ್ಕೆ ಹೋಗಿ ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುವಾಗ ಅವರಿಗೆ ಕೋವಿಡ್ ಪಾಸಿಟಿವ್ ಎಂದು ವರದಿಯಾಗಿತ್ತು. 14 ದಿನ ಕಡ್ಡಾಯವಾಗಿ ಕ್ವಾರಂಟೈನದಲ್ಲಿರಲು ಸೂಚಿಸಲಾಗಿತ್ತು. ಆದರೂ ಅವರು ಕಾಲೇಜಿಗೆ ಬಂದು ಪಾಠ ಮಾಡಿದ್ದರ ಪರಿಣಾಮ 13 ವಿದ್ಯಾರ್ಥಿಗಳಿಗೂ ಕೊರೋನ ಪಾಸಿಟಿವ್ ವರದಿಯಾಗಿತ್ತು. ಮತ್ತು ಕಾಲೇಜು ಸೀಲ್ ಡೌನ ಮಾಡಲಾಗಿತ್ತು.
ಬೇಜವಾಬ್ದಾರಿಯಿಂದ ಕೋವಿಡ್ ವರದಿಯನ್ನು ಮರೆಮಾಚಿ ಅಪಾಯಕಾರಿಯಾದ ರೋಗದ ಸೋಂಕು ಬೇರೆಯವರಿಗೆ ಹರಡುತ್ತದೆ ಅಂತಾ ತಿಳಿದೂ ಸಹಾ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ನಿರ್ಲಕ್ಷತನದಿಂದ ಉದ್ದೇಶಪೂರ್ವಕವಾಗಿ ಕಾಲೇಜ್ನಲ್ಲಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಕಾಲೇಜಿನ 13 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ಹರಡಿಸಿರುವದರ ಕುರಿತು ಪುರಸಭೆಯ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ