ಗೋಡಂಬಿ ಕಾರ್ಖಾನೆ ಕಾರ್ಮಿಕರ ಧರಣಿ


Team Udayavani, Sep 10, 2019, 12:55 PM IST

uk-tdy-2

ಕುಮಟಾ: ರಿಲೇಬಲ್ ಕ್ಯಾಶ್ಯೂ ಕಂಪನಿ ಕಾರ್ಮಿಕರು ಫ್ಯಾಕ್ಷರಿಯ ಎದುರು ಪ್ರತಿಭಟನೆ ನಡೆಸಿದರು.

ಕುಮಟಾ: ಧಾರೇಶ್ವರದಲ್ಲಿರುವ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯನ್ನು ಏಕಾಏಕಿ ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ನೂರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸಿದರು.

ಈ ಇಂಡಸ್ಟ್ರಿಯಲ್ಲಿ ಸುಮಾರು 750 ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, 24 ಗಂಟೆಯೂ ಇಲ್ಲಿ ಕೆಲಸ ನಡೆಯುತ್ತಿದೆ. 8 ಗಂಟೆಗಳ ಕಾಲಾವಧಿಯ ಪ್ರಕಾರ ದಿನದಲ್ಲಿ 3 ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ಈ ಭಾಗದ ಸುತ್ತಮುತ್ತಲಿನ ನೂರಾರು ಜನರು ಈ ಕಂಪನಿಯಿಂದಲೇ ಬದುಕುತ್ತಿದ್ದಾರೆ. ಏಕಾಏಕಿ ಕಂಪನಿ ಮುಚ್ಚಿರುವುದರಿಂದ ಕಾರ್ಮಿಕರು ಕಂಗಾಲಾಗಿದ್ದಾರೆ.

ಕೆಲ ದಿನಗಳಿಂದ ಆಡಳಿತ ಮಂಡಳಿಯವರು ದಿನದಲ್ಲಿ 2 ಪಾಳಿಯನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಅದಲ್ಲದೇ ದಿನದ ಸಂಬಳವನ್ನು ನೀಡದೇ, ಕೆ.ಜಿ ಲೆಕ್ಕದಲ್ಲಿ ಸಂಬಳವನ್ನು ನೀಡುವ ಬಗೆಗೆ ನೋಟಿಸ್‌ ಫಲಕದಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಒಳ್ಳೆಯ ಗೇರುಬೀಜಗಳನ್ನು ಯಂತ್ರ ಸುಲಿಯುತ್ತದೆ. ಆದರೆ ಯಂತ್ರದಿಂದಾಗದ ಬೀಜವನ್ನು ಕಾರ್ಮಿಕರೇ ಸುಲಿಯಬೇಕಾಗುತ್ತದೆ. ಒಳ್ಳೆಯ ಬೀಜಗಳನ್ನು ಕಾರ್ಮಿಕರ ಕೈಗೆ ನೀಡಿದ್ದಲ್ಲಿ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಕಾರ್ಮಿಕರು ಸುಲಿಯಲು ಸಾಧ್ಯವಿದೆ. ಆದರೆ ಕೆಟ್ಟ ಬೀಜವನ್ನು ಕಾರ್ಮಿಕರ ಕೈಗೆ ನೀಡಿದಾಗ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಸುಲಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಸಿಗುವ ಸಂಬಳ ಕಡಿಮೆಯಾಗುತ್ತಿದೆ ಎಂಬುದು ಕಾರ್ಮಿಕರ ಅಳಲಾಗಿದೆ.

ನಂತರ ಮಾಧ್ಯಮದವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಶ್ಯೂ ಇಂಡ‌ಸ್ಟ್ರಿ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ ತಿಲಕ ಗೌಡ ಮಾತನಾಡಿ, ಆಡಳಿತ ವರ್ಗವು ತುಂಡು ಮೌಲ್ಯದ ಕೆಲಸ ಮತ್ತು 3 ಪಾಳಿಯ ಬದಲು 2 ಪಾಳಿ ಮಾಡಬೇಕೆಂದು ನೋಟಿಸ್‌ ಬೋರ್ಡಿಗೆ ಹಾಕಿರುವುದು ಸರಿಯಲ್ಲ. ಈ ವಿಷಯವು ಸಂಘದ ಗಮನಕ್ಕೆ ಬಂದ ತಕ್ಷಣ ಸಂಘದ ಮುಖಂಡರು ಆಡಳಿತ ವರ್ಗವನ್ನು ಸಂಪರ್ಕಿಸಿ, ವಿಷಯದ ಕುರಿತು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಕೇಳಿಕೊಂಡರೂ, ಆಡಳಿತ ವರ್ಗ ಸ್ಪಂದಿಸುತ್ತಿಲ್ಲ. ಕಂಪನಿ ಮುಚ್ಚುವುದು ಸರಿಯಲ್ಲ. ಸಾಕಷ್ಟು ಜನರು ಇಲ್ಲಿನ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಕೊಡುತ್ತಿರುವ ಸಂಬಳಕ್ಕೆ ದುಡಿಯಲು ಸಾಧ್ಯವಿಲ್ಲ. ಸರಕಾರದ ನಿಯಮದ ಪ್ರಕಾರ ಇಲ್ಲಿಯ ಕಾರ್ಮಿಕರು ಸಂಘವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಆಡಳಿತ ಮಂಡಳಿಯು ಸಂಘದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ಸರಕಾರದ ನಿಯಮದ ಪ್ರಕಾರ ಕನಿಷ್ಠ ಕೂಲಿಯಾದರೂ ನೀಡಬೇಕು ಎಂದರು.

ನಾಳೆಯಿಂದಲೇ ಕಂಪನಿ ತೆರೆಯಲು ಸೂಚನೆ:

ಅಸಿಸ್ಟಂಟ್ ಲೇಬರ್‌ ಕಮಿಷನರ್‌ ಮೀನಾಕುಮಾರಿ ಪಾಟೀಲ್ ಅಧ್ಯಕ್ಷತೆಯಲ್ಲಿ ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆಯಿತು. ಕಾರ್ಮಿಕರಿಂದ ಎಲ್ಲ ಮಾಹಿತಿ ಪಡೆದುಕೊಂಡು, ಆಡಳಿತ ವರ್ಗದ‌ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ, ಆಡಳಿತ ವರ್ಗದವರು ಮಾಲಿಕರೊಂದಿಗೆ ಚರ್ಚಿಸಿ ಫ್ಯಾಕ್ಟರಿ ಪ್ರಾರಂಭಿಸಬೇಕು. ನಂತರ ಕಂಪನಿಯಲ್ಲಿಯೇ ಕುಳಿತು ಕಾರ್ಮಿಕರ ಹಾಗೂ ಮಾಲಿಕರ ಸಮಸ್ಯೆಗೆ ಪರಿಹಾರ ಹುಡುಕಬಹುದು. ನಾಳೆಯೇ ಕಂಪನಿ ಪ್ರಾರಂಭಿಸುವಂತೆ ಸೂಚಿಸಿದರು. ಕಂಪನಿ ಪ್ರೊಸೆಸಿಂಗ್‌ ಮುಖ್ಯಸ್ಥ ಎಡ್ವರ್ಡ್‌, ಕಂಪನಿ ಮಾಲಿಕರಿಗೆ ಈ ಎಲ್ಲ ವಿಷಯ ತಿಳಿಸುತ್ತೇನೆ. ಅವರು ಕೈಗೊಂಡ ನಿರ್ಣಯದಂತೆ ಮುಂದುವರೆಯಲಾಗುವುದು ಎಂದರು.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.