ಯಕ್ಷಗಾನ ಕಲಾವಿದರ ನೋವಿಗೆ ಭರವಸೆ ಬೆಳಕು ನೀಡಿತು ‘ಸೆಲ್ಕೋ’


Team Udayavani, Jun 24, 2021, 9:47 AM IST

selko-2

ಶಿರಸಿ: ಕಳೆದ ಒಂದುವರೆ ವರ್ಷದಿಂದ ಕೊರೋನಾದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸಾಂಸ್ಕೃತಿಕ ಕ್ಷೇತ್ರದ ನೋವಿಗೆ ಸ್ಪಂದಿಸುವ, ಭರವಸೆಯ ಬೆಳಕು ನೀಡುವಲ್ಲಿ ಸೆಲ್ಕೋ ಫೌಂಡೇಶನ್ ಸದ್ದಿಲ್ಲದೇ ಒಂದು ಹೆಜ್ಜೆ ಮುಂದಿಟ್ಟಿದೆ.

ಮ್ಯಾಗ್ಸತ್ಸೇ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ ಅವರ ನೇತೃತ್ವದ ಸೆಲ್ಕೋ ಫೌಂಡೇಶನ್ ಶಕ್ತಿ ಆಧಾರಿತವಾಗಿ ಸಮಾಜದಲ್ಲಿ ಬದುಕಿನ ಭರವಸೆಯನ್ನು ಮೂಡಿಸುತ್ತಿದೆ. ಹೊಸ ಹೊಸ ಆವಿಷ್ಕರ, ಉದ್ಯಮ ಸ್ಥಾಪನೆಗೆ ನೆರವು, ಕಲೆ ಹಾಗೂ ಗ್ರಾಮೀಣ ಗುಡಿಕೈಗಾರಿಕೆ ಉಳಿಸಿ ಬೆಳಸುವ ದೃಷ್ಟಿಯಿಂದ, ಆರೋಗ್ಯ ಉಪಕರಣಗಳನ್ನು ಒದಗಿಸುವ ಜೊತೆಗೆ ಕಡಿಮೆ ಇಂಧನ ಬಳಸಿ ಪರಿಸರ ಉಳಿಸುವ ಅನುಪಮ ಕಾರ್ಯಕ್ಕೂ ಮುಂದಾಗಿದೆ.

ಈ ಸೆಲ್ಕೋ ಫೌಂಡೇಶನ್ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಹೆರಿಗೆ ಆಸ್ಪತ್ರೆಗೆ ಸಂಪೂರ್ಣ ಸೋಲಾರ್ ಅಳವಡಿಕೆ, ಬೆಂಗಳೂರಿನಲ್ಲಿ ನೂರು ಬೆಡ್‌ನ ಆಸ್ಪತ್ರೆ ಸ್ಥಾಪನೆಗೆ ಪ್ರಮುಖ ಸಹಭಾಗಿತ್ವ ಸೇರಿದಂತೆ ಅನೇಕ ರಚನಾತ್ಮಕ, ಸಮಾಜಕ್ಕೆ ಕೆಳ ಸ್ಥರದಲ್ಲಿ ಸ್ಪಂದಿಸುವ ಕಾರ್ಯ ಮಾಡುತ್ತಿದೆ.

ಸಂಕಷ್ಟಕ್ಕೆ ಸ್ಪಂದನೆ:

ಕೊರೋನಾ ಸಂಕಷ್ಟದಿಂದ ಯಕ್ಷಗಾನದ ವೃತ್ತಿ ಮೇಳ, ಹವ್ಯಾಸಿ ಮೇಳಗಳಲ್ಲಿ ತೊಡಗಿಕೊಂಡ, ಅದನ್ನೇ ವೃತ್ತಿಯಾಗಿಸಿಕೊಂಡ ಕಲಾವಿದರುಗಳಿಗೆ ಏನು ಮಾಡಬೇಕು ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಕಲೆಯ ಬದುಕು ಬಿಟ್ಟರೆ, ವೇಷ ಬಳಿದುಕೊಂಡು ರಾತ್ರಿಯನ್ನು ಹಗಲಾಗಿಸಿ ಜಗಮಗಿಸುವ ಸಾಂಸ್ಕೃತಿಕ ಔತಣ ನೀಡುವ ಸಾಂಪ್ರದಾಯಿಕ ಕಲಾವಿದರಿಗೆ ಕೊರೋನಾ ಪ್ರದರ್ಶನಕ್ಕೆ ತೊಡಕಾಗಿ ತಣ್ಣೀರು ಬಟ್ಟೆ ನೀಡಿತ್ತು.

ಅನೇಕರು ಬದಲೀ ಉದ್ಯೋಗ ಕೂಡ ನೋಡಿಕೊಳ್ಳಲೂ ಆಗದೇ ಸಂಕಷ್ಟಕ್ಕೆ ತಲುಪಿತ್ತು. ರಂಗದಲ್ಲಿ ರಾಜನಾಗಿ, ಹಾಸ್ಯದಲ್ಲಿ ನಗಿಸಿದ ಕಲಾವಿದನಾಗಿ ಮಿಂಚಿದವರಿಗೆ ಕರೋನಾ ಬರೆ ಸಿಡಿಲಾಗಿತ್ತು. ಈ ನೋವನ್ನು ಸ್ವತಃ ಯಕ್ಷಗಾನ, ತಾಳಮದ್ದಲೆ ಕಲಾವಿದರೂ ಆಗಿ ಅರಿತ ಸೆಲ್ಕೋ ಫೌಂಡೇಶನ್‌ನ ಸಿಇಓ ಮೋಹನ ಹೆಗಡೆ ಸಾಧ್ಯವಿದ್ದ ಜನರಿಗೆ ನೆರವಾಗುವ ಸಂಕಲ್ಪ ತೊಟ್ಟರು. ಹಂದೆ ಅವರ ಕಲಾ ಪ್ರೀತಿ ಇಲ್ಲಿ ಭರವಸೆಯ ಬೆಳಕಾಗಿಸುವಲ್ಲಿ ನೆರವಾಯಿತು.

ಕಳೆದ ವರ್ಷದ ಪ್ರಥಮ ಕೋವಿಡ್ ಅಲೆಗೆ ಸುಮಾರು 120 ಜನ ಯಕ್ಷಗಾನ ಹಾಗೂ ಇತರ ವಿಭಾಗದ ಕಲಾವಿದರಿಗೆ ಫೌಂಡೇಶನ್ ಸರಾಸರಿ 5 ಸಾವಿರ ರೂ. ನಂತೆ ನೆರವಾಯಿತು. ಕಳೆದ ವರ್ಷ ಜೂನ್‌ದಲ್ಲಿ ಆರೋಗ್ಯ ಸಮಸ್ಯೆ ಇದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇದ್ದವರಿಗೆ, ಯುವ ಕಲಾವಿದರಿಗೆ, ಆರ್ಥಿಕ ಅನಿವಾರ್‍ಯತೆ ಇದ್ದವರಿಗೆ ನೆರವಿನ ಹಸ್ತ ಚಾಚಿ ಯಾವುದೇ ಪ್ರಚಾರ ಬಯಸದೇ ಮುಂದಡಿ ಇಟ್ಟಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಇತರ ಪ್ರದೇಶದ ಯಕ್ಷಗಾನ ಕಲಾವಿದರಿಗೆ ನೆರವಾಯಿತು.

ಕಳೆದ ವರ್ಷ ಯಕ್ಷಗಾನ ವೇಷಧಾರಿಗಳು, ವೇಷ ಭೋಷಣ ಕಲಾವಿದರು, ಹಿಮ್ಮೇಳ ಕಲಾವಿದರು ಸಹಿತ ಹಲವರಿಗೆ ನೆರವಾದರೆ ಈ ಬಾರಿ ಕೂಡ ೧೦೦ರಷ್ಟು ಕಲಾವಿದರಿಗೆ ಸ್ವತಃ ಮುಂದೆ ಬಂದು ನೆರವಾಗುತ್ತಿದೆ. ಇನ್ನೂ ಅಧಿಕ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಎಲ್ಲರಿಗೆ ನೆರವಾಗುವ ಆಸಕ್ತಿ ಇದ್ದರೂ ಒಂದು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದೂ ಹೇಳುತ್ತಾರೆ ಮೋಹನ್ ಹೆಗಡೆ.

ಯಕ್ಷಗಾನದಂತ ಸಾಂಪ್ರದಾಯಿಕ ಕಲೆಯನ್ನು ಉಳಿಸಿ, ಉತ್ತೇಜಿಸಬೇಕಾಗಿದೆ. ಈ ಕಾರಣದಿಂದ ನಮ್ಮ ಕಾಣಿಕೆ ಸಲ್ಲಿಸಿದ್ದೇವೆ.

– ಮೋಹನ್ ಹೆಗಡೆ ಹೆರವಟ್ಟ, ಸೆಲ್ಕೋ ಫೌಂಡೇಶನ್ ಸಿಇಓ

ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಸೆಲ್ಕೋ ಯಾವುದೇ ಪ್ರಚಾರ, ಪ್ರತಿಫಲ ಬಯಸದೇ ಕೆಲಸ ಮಾಡುತ್ತಿರುವದು ಮಾದರಿ.

– ಕೇಶವ ಹೆಗಡೆ‌ ಕೊಳಗಿ,‌ಪ್ರಸಿದ್ದ ಭಾಗವತ

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.