‌ಕರಾವಳಿಯಲ್ಲಿ ಮತ್ತೆ ವಾಣಿಜ್ಯ ಬಂದರು ನಿರ್ಮಾಣದ ಸದ್ದು!


Team Udayavani, Jun 27, 2021, 6:11 PM IST

26 honavar 01

ಜೀಯು, ಹೊನ್ನಾವರ

ಹೊನ್ನಾವರ: ಕರಾವಳಿಯಲ್ಲಿ ಮತ್ತೆ ಸುದ್ದಿ ಮಾಡಿರುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಈಗಿನದ್ದಲ್ಲ. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಿದ್ದಾಗ ಮೀನುಗಾರಿಕಾ ಮತ್ತು ಬಂದರು ಇಲಾಖೆ ಸಚಿವ ಕೃಷ್ಣ ಪಾಲೇಮಾರ್‌ ಈ ಯೋಜನೆಗೆ ಮಂಜೂರಾತಿ ನೀಡಿದ್ದರು. ಇದಕ್ಕಾಗಿ ಮೀನುಗಾರಿಕಾ ಬಂದರಿನ ಪಕ್ಕದಲ್ಲಿರುವ ಅಳವೆ ಬಳಿ ಹೊಸದಾಗಿ ನಿರ್ಮಾಣಕ್ಕಾಗಿ 100 ಎಕರೆ ಭೂಮಿಯನ್ನು ಆಂಧ್ರದವರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು.

ತೈಲ ಮೊದಲಾದ ವಸ್ತುಗಳ ಆಯಾತ, ನಿರ್ಯಾತಕ್ಕೆ ಸರ್ವಋತು ಬಂದರಾಗಿ ಇದು ರೂಪುಗೊಳ್ಳಲು ಸಿದ್ಧತೆ ನಡೆಸಿತ್ತು. ಈಗ ವಾಣಿಜ್ಯ ಬಂದರು ನಿರ್ಮಾಣವಾಗುತ್ತಿರುವ ಸ್ಥಳವನ್ನು ಬಂದರು ಇಲಾಖೆ ಗುತ್ತಿಗೆ ನೀಡಿದೆ. ಈ ಸ್ಥಳಕ್ಕೆ ಹೋಗಲು ಕಡಲ ತಡಿಯಿಂದ ರಸ್ತೆ ನಿರ್ಮಾಣವಾಗಬೇಕಿದೆ. ಈ ರಸ್ತೆಗಾಗಿ ಸಾಗರಮಾಲಾ ಯೋಜನೆಯಡಿ 100ಕೋಟಿ ರೂ. ಮಂಜೂರಾಗಿದೆ. ಬಂದರು ಕಂಪನಿಗೆ ಅಳವೆಯಲ್ಲಿ ಬ್ಯಾಕ್‌ವಾಟರ್‌ ತಡೆಗೋಡೆ ನಿರ್ಮಾಣವನ್ನು ವಹಿಸಿಕೊಡಲಾಗಿದ್ದು ಕಾಲಕಾಲಕ್ಕೆ ಅಳವೆಯಲ್ಲಿ ಹೂಳೆತ್ತುವ, ನಿರ್ವಹಿಸುವ ಜವಾಬ್ದಾರಿ ಸಹ ವಹಿಸಲಾಗಿದೆ. ಹೂಳೆತ್ತಬೇಕೆಂಬುದು ಮೀನುಗಾರರ ಬಹುದಿನದ ಬೇಡಿಕೆಯೂ ಆಗಿತ್ತು. ಈ ಕೆಲಸಕ್ಕೆ ಮೀನುಗಾರಿಕಾ ಬಂದರಿನ ರಸ್ತೆ ಬಳಸಿದಾಗ ಹಾಳಾದ ಕಾರಣ ಮೀನುಗಾರರು ವಿರೋಧಿಸಿದ್ದರು.

ಅಳವೆ ಬ್ಯಾಕ್‌ವಾಟರ್‌ ನಿರ್ಮಾಣಕ್ಕೆ ಭಾರೀ ಕಲ್ಲುಗಳನ್ನು ಒಯ್ಯಬೇಕಾಗಿರುವುದರಿಂದ ಕಂಪನಿ ಹೊಸ ರಸ್ತೆ ನಿರ್ಮಾಣಕ್ಕೆ ತೊಡಗಿಕೊಂಡಾಗ ಕೆಲವು ಮೀನುಗಾರರು ತಮ್ಮ ಆಸ್ತಿ ಹೋಗುತ್ತದೆ ಎಂದು ಪ್ರತಿಭಟನೆ ನಡೆಸಿದರು. ಗುತ್ತಿಗೆ ಕಂಪನಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು. ನಂತರ ರಾಜ್ಯದ ಆಡಳಿತ ಕಾಂಗ್ರೆಸ್‌ ಕೈಗೆ ಬಂತು. ಆಗ ಮಂಕಾಳು ವೈದ್ಯ ಶಾಸಕರಾಗಿದ್ದರು. ಆ ಅವಧಿಯಲ್ಲಿ ಬಂದರು ಕಂಪನಿ ಜಾಗವನ್ನು ತನ್ನ ವಶಕ್ಕೆ ತೆಗೆದುಕೊಂಡು ಕಾಂಪೌಂಡ್‌ ಹಾಕಿತು. ಬಂದರು ಯೋಜನೆಯಿಂದ ಮೀನುಗಾರಿಕೆ ಹಾಳಾಗುತ್ತದೆ ಎಂಬ ಕಾರಣ ಮುಂದೊಡ್ಡಿ ಮೀನುಗಾರರು ಪ್ರತಿಭಟನೆ ನಡೆಸಿದರು.

ಕಾಮಗಾರಿ ಸ್ಥಗಿತವಾಗಿತ್ತು, ನ್ಯಾಯಾಲಯದ ವ್ಯವಹಾರವೂ ನಡೆಯಿತು. ನಂತರ ಪುನಃ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ದೇಶದ ಕರಾವಳಿಯಲ್ಲಿ ವಾಣಿಜ್ಯ ಬಂದರುಗಳ ನಿರ್ಮಾಣ ಮತ್ತು ಅದಕ್ಕೆ ಪೂರಕವಾದ ಸಾಗರಮಾಲಾ ಸಂಪರ್ಕ ಯೋಜನೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಆದ್ಯತೆ ನೀಡಿದವು. ಗುತ್ತಿಗೆದಾರ ಕಂಪನಿ ಬೇಸಿಗೆಯಲ್ಲಿ ಕೆಲಸ ಆರಂಭಿಸಿತ್ತು. ಆಗ ಅರಣ್ಯ ಇಲಾಖೆ ಪರವಾನಗಿ ಇಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಲಯದ ತಡೆಯಾಜ್ಞೆ ದೊರಕಿತ್ತು. ಈಗ ಪುನಃ ಕೆಲಸ ಆರಂಭಿಸಿದಾಗ ಮೀನುಗಾರರು ಯೋಜನೆಯೇ ಬೇಡ, ಮೀನುಗಾರಿಕಾ ವ್ಯವಹಾರ ಹಾಳಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದಾರೆ.

ಮೀನುಗಾರರು ಬಂದರು ಬೇಡ ಎಂಬುದಕ್ಕೆ ಅವರದ್ದಾದ ಕಾರಣಗಳನ್ನು ಹೇಳುತ್ತಿದ್ದಾರೆ. ಕಂಪನಿ ಮೀನುಗಾರಿಕೆಗೆ ಅಂತಹ ಯಾವ ತೊಂದರೆಯೂ ಆಗುವುದಿಲ್ಲ ಎಂದು ಹೇಳುತ್ತಿದೆ. ಈ ಮಧ್ಯೆ ಇದರಲ್ಲಿ ರಾಜಕೀಯ ನುಸುಳಿದೆ. ಆಡಳಿತ ಪಕ್ಷದವರು ಈ ಯೋಜನೆ ಆಗಲೇಬೇಕು, ಮೀನುಗಾರಿಕೆಗೆ ತೊಂದರೆಯಿಲ್ಲ, ಮೀನುಗಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ, ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಿದ್ದರೆ ಪ್ರತಿಪಕ್ಷದವರು ಬಂದರು ನಿರ್ಮಾಣವಾದರೆ ಮೀನುಗಾರಿಕೆ ಸರ್ವನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಮೂರು ದಶಕಗಳ ಹಿಂದೆ ಅಳವೆ ಬಲದಂಡೆಯ ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮ, ಪಾವಿನಕುರ್ವೆಯ ಅರ್ಧಗ್ರಾಮ ಸಮುದ್ರ ಕೊರೆತಕ್ಕೆ ತುತ್ತಾಗಿ ಅಳವೆಯ ಎಡದಂಡೆಗೆ ಹೊಯ್ಗೆ ರಾಶಿಯಾಗಿ ಬಂದು ಕೂತಿತ್ತು. ಇದಕ್ಕೆ ಟೊಂಕ ಎಂದು ಹೆಸರಿಟ್ಟರು, ಇಲ್ಲಿ ಮನೆ ಕಟ್ಟಿಕೊಂಡಿರುವ ಬಹುಪಾಲು ಮೀನುಗಾರರ ಹೆಸರಿನಲ್ಲಿ ಆಸ್ತಿ ಇಲ್ಲ. ಬಂದರು ಹೆಸರಿನಲ್ಲಿ ಸ್ವಲ್ಪ ಭೂಮಿಪಡೆದ ಗುತ್ತಿಗೆದಾರರು ಮೀನುಗಾರರ ಆಸ್ತಿಯ ಮೇಲೆ ಕಣ್ಣು ಹಾಕಿದರೇ ಎಂಬ ಭಯ ಮೀನುಗಾರರನ್ನು ಕಾಡುತ್ತಿದೆ. ಮೀನುಗಾರ ಮುಖಂಡರ ಹೇಳಿಕೆಗಳು ದಿನಕ್ಕೊಂದು ಬರುತ್ತಿವೆ. ಪ್ರತಿಭಟನೆಯಲ್ಲಿ ರಾಜಕಾರಣಿಗಳು, ಬೇರೆ ತಾಲೂಕುಗಳ ಮೀನುಗಾರ ಮುಖಂಡರು ಪಾಲ್ಗೊಂಡು ರಾಜಕೀಯ ಸ್ವರೂಪ ಪಡೆದಿದೆ.

ಬಂದರಿನಿಂದ ದೇಶಕ್ಕೆ ಮತ್ತು ಜನತೆಗೆ ಯಾವ ರೀತಿ ಪ್ರಯೋಜನವಾಗಲಿದೆ, ಮೀನುಗಾರಿಕೆಗೆ, ಮೀನುಗಾರರರಿಗೆ ತೊಂದರೆಯಾಗುವುದಿಲ್ಲ, ಅಳವೆ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುವುದು ಸಮಸ್ಯೆಯಾಗಿದೆ. ಮೀನುಗಾರರು ಹಠಹಿಡಿದರೆ ಬಂದರು ಇಲಾಖೆಯವರು ಅಧಿ ಕಾರ ಬಳಸುತ್ತಿದ್ದಾರೆ. ಜಿಲ್ಲೆಯ ಸಂಸದರು, ಶಾಸಕರು, ಉಸ್ತುವಾರಿ ಮಂತ್ರಿಗಳು ಸ್ಥಳಕ್ಕೆ ಬಂದು ಮೀನುಗಾರರಿಗೆ ಮನದಟ್ಟುಮಾಡಿಕೊಟ್ಟರೆ ಒಳಿತಾಗುತ್ತಿತ್ತು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.