ಮುಂದುವರಿದ ವರುಣನ ಆರ್ಭಟ
•ಕೃಷಿ ಚಟುವಟಿಕೆಗಳಿಗೆ ಅನುಕೂಲ•ಮೀನುಗಾರರಿಗೆ ಪ್ರತಿಕೂಲ ವಾತಾವರಣ
Team Udayavani, Jul 20, 2019, 12:38 PM IST
ಹೊನ್ನಾವರ: ಮನೆಗಳಿಗೆ ನುಗ್ಗಿದ ಮಳೆ ನೀರು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಸಣ್ಣಗೆ ಆಗಾಗ ಮಳೆ ಬೀಳುತ್ತಿದೆ. ಕಾರವಾರದಲ್ಲಿ ಆಗಾಗ ಮಳೆ ಬೀಳುತ್ತಿದೆ. ಮಳೆ ರೈತರ ಚಟುವಟಿಕೆಗಳಿಗೆ ಅನುಕೂಲವಾಗಿದೆ.
ಸಮುದ್ರ ಅಬ್ಬರಿಸುತ್ತಿದ್ದು, ಮೀನುಗಾರಿಕೆ ಸಂಪೂರ್ಣ ನಿಂತಿದೆ. ಕಡಲದಂಡೆಯ ಸಂಪ್ರದಾಯಿಕ ಮೀನುಗಾರಿಕೆ ಸಹ ಪೂರ್ಣ ನಿಂತಿದೆ. ಅಲೆಗಳ ಅಬ್ಬರ ಜೋರಾಗಿದೆ. ಮೂರು ದಿನ ಭಾರೀ ಮಳೆಯ ಮುನ್ನೆಚ್ಚರಿಕೆ ಇದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದ್ದು, ಕಡಲಿಗೆ ಪ್ರವಾಸಿಗರು ಇಳಿಯದಂತೆ ಪೊಲೀಸರನ್ನು ಕಾವಲು ಹಾಕಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 214.5 ಮಿಮೀ ಮಳೆಯಾಗಿದ್ದು ಸರಾಸರಿ 19.5 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 991 ಮಿಮೀ ಇದ್ದು, ಇದುವರೆಗೆ ಸರಾಸರಿ 631.2 ಮಿಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾದಲ್ಲಿ 25.6 ಮಿಮೀ, ಭಟ್ಕಳ 34 ಮಿ ಮೀ, ಹಳಿಯಾಳ 20.6 ಮಿ.ಮೀ, ಹೊನ್ನಾವರ 65 ಮಿಮೀ, ಕಾರವಾರ 14 ಮಿಮೀ, ಕುಮಟಾ 14.3 ಮಿಮೀ, ಮುಂಡಗೋಡ 18.6 ಮಿಮೀ, ಸಿದ್ದಾಪುರ 21.2 ಮಿಮೀ, ಯಲ್ಲಾಪುರ 1.2 ಮಿ.ಮೀ ಮಳೆಯಾಗಿದೆ.