ಸಕಾಲದಲ್ಲಿ ಔಷಧ ಪಡೆದರೆ ಸೋಂಕು ಗುಣಮುಖ

ಸರ್ಕಾರ ಸಕಲ ವ್ಯವಸ್ಥೆ ಮಾಡಿದ್ದರೂ ಸೋಂಕು ಹೆಚ್ಚಳಕ್ಕೆ ಕಾರಣ ಬಿಚ್ಚಿಟ್ಟ ವೈದ್ಯರು­ಸಹಕರಿಸಲು ಮನವಿ

Team Udayavani, May 25, 2021, 9:47 PM IST

6544455

ಜೀಯು, ಹೊನ್ನಾವರ

ಹೊನ್ನಾವರ: ಕರ್ಣಪಟಲ ಹರಿಯುವಂತೆ ಪ್ರತಿ ಬಾರಿ ರಿಂಗ್‌ ಮಾಡಿದಾಗಲೂ ಫೋನ್‌ ಎಚ್ಚರಿಸುತ್ತಿದ್ದರೂ, ಮನೆಮನೆಗೆ ಆಶಾ ಕಾರ್ಯಕರ್ತೆಯರು ಹೋಗಿ ಹೇಳುತ್ತಿದ್ದರೂ, ಸರ್ಕಾರ ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಕೋವಿಡ್‌ನಿಂದ ಸೋಂಕಿತರು ಹೆಚ್ಚುತ್ತಲೇ ಇದ್ದು ಯಾಕೆ? ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದಕ್ಕೆ ಕೆಲವು ವೈದ್ಯರ ಅಭಿಪ್ರಾಯ ಹೀಗಿದೆ.

ಅತಿ ಹೆಚ್ಚು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಉಡುಪಿ ಟಿಎಂಎಪೈ ಆಸ್ಪತ್ರೆಯ ವೈದ್ಯ ಡಾ| ಶಶಿಕಿರಣ್‌ ಶೇ. 95ರಷ್ಟು ಜನರಿಗೆ ಕೋವಿಡ್‌ ಪ್ರಥಮ ಹಂತದಲ್ಲಿಯೇ ಗುಣವಾಗುತ್ತದೆ ಅನುತ್ತಾರೆ. ಕೋವಿಡ್‌ ಹರಡಿ ಆಯಿತು, ಈಗ ಆಸ್ಪತ್ರೆಗೆ ಬರಲು ವಿಳಂಬ ಮಾಡಿ, ಬಂದ ಮೇಲೂ ರಾತ್ರಿ ಆಕ್ಸಿಜನ್‌ ಸಂಪರ್ಕವನ್ನು ಕಿತ್ತುಹಾಕುವಂತಹ ರೋಗಿಗಳಿಂದಾಗಿ ಸಮಸ್ಯೆ ಉಂಟಾಗುತ್ತದೆ. ನಾವು ಜೀವ ಉಳಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಇದು ಜನರಿಗೆ ಅರ್ಥವಾಗಬೇಕು ಎನ್ನುತ್ತಾರೆ ಹೊನ್ನಾವರ ತಾಲೂಕಾಸ್ಪತ್ರೆಯ ಮೆಡಿಸಿನ್‌ ವಿಭಾಗದ ಡಾ| ಪ್ರಕಾಶ ನಾಯ್ಕ.

ಸಕಾಲದಲ್ಲಿ ಬಂದರೆ ಜೀವ ಉಳಿಯುತ್ತದೆ, ಅಕಾಲದಲ್ಲಿ ಬಂದರೆ ಎಲ್ಲರಿಗೂ ಕಷ್ಟ, ನಾವು ನಮ್ಮ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ, ಆದರೆ ಜನರ ನಿಷ್ಕಾಳಜಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂದು ಶಿರಸಿ ಪಂಡಿತ ಆಸ್ಪತ್ರೆಯ ಡಾ| ಗಜಾನನ ಭಟ್‌ ವಿಷಾದಿಸುತ್ತಾರೆ.

ತಾಲೂಕು ವೈದ್ಯಾಧಿಕಾರಿಯಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಆಶಾ ಕಾರ್ಯಕರ್ತೆಯವರೆಗೆ ಕೋವಿಡ್‌ ಗುರುತಿಸಿ, ತಕ್ಷಣ ಅಗತ್ಯ ಚಿಕಿತ್ಸೆ ನೀಡುವ ವ್ಯವಸ್ಥೆ ಹಳ್ಳಿಹಳ್ಳಿಗಳಲ್ಲಿ ಕಲ್ಪಿಸಲಾಗಿದೆ. ಪ್ರತಿಯಾಗಿ ಜನರ ಸ್ಪಂದನೆಯಿಲ್ಲ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲ್ಲವೂ ವ್ಯರ್ಥ ಅನಿಸುತ್ತದೆ ಎಂದು ಟಿಎಚ್‌ಓ ಉಷಾ ಹಾಸ್ಯಗಾರ ಬೇಸರಿಸುತ್ತಾರೆ.

ಪ್ರತಿ ತಾಲೂಕಿನಲ್ಲೂ ನಾಲ್ಕೈದು ಆಂಬ್ಯುಲೆನ್‌ Õಗಳಿವೆ. ಕೋವಿಡ್‌ ಸೋಂಕಿತರನ್ನು ಗುರುತಿಸಲು ಮನೆಮನೆಗೆ ಆಶಾ ಕಾರ್ಯಕರ್ತೆಯರು ಓಡಾಡುತ್ತಾರೆ. ಕೋವಿಡ್‌ನ‌ ಆರಂಭದಲ್ಲಿ ನೆಗಡಿ, ಜ್ವರ, ಬೇ ಧಿ, ಇಂಥ ಸಾಮಾನ್ಯ ಲಕ್ಷಣಗಳು ಕಂಡಾಗ ಆಶಾ ಕಾರ್ಯಕರ್ತೆಯರು ಕೊಡುವ ಔಷಧವನ್ನೇ ನಾಲ್ಕು ದಿನ ಸೇವಿಸಿದರೆ ಶೇ. 95ರಷ್ಟು ಕೋವಿಡ್‌ ಪೀಡಿತರು ಗುಣವಾಗುತ್ತಾರೆ. ಇತರ ಕಾಯಿಲೆ ಸಮಸ್ಯೆಯಿದ್ದರೆ, ವಯಸ್ಸಾಗಿದ್ದರೆ ಆಸ್ಪತ್ರೆಗೆ ಬರಬೇಕಾಗುತ್ತದೆ.

ಪ್ರಾಥಮಿಕ ಹಂತದ ಔಷಧ ನಾಲ್ಕು ದಿನ ಸೇವಿಸಿಯೂ ಗುಣವಾಗದೆ ಆಸ್ಪತ್ರೆಗೆ ಬಂದರೆ ಆಕ್ಸಿಜನ್‌ ಇಲ್ಲದೆಯೂ ಗುಣಪಡಿಸಬಹುದು. ಅಗತ್ಯಬಿದ್ದರೆ ಆಕ್ಸಿಜನ್‌ ಮಾತ್ರವಲ್ಲ ಮೌಖೀಕವಾಗಿ ಕೊಡುವ ವೆಂಟಿಲೇಟರ್‌ ಬಳಸುತ್ತೇವೆ. ಈ ಹಂತದಲ್ಲಿ ರೋಗಿ ಖಂಡಿತ ಗುಣವಾಗುತ್ತಾನೆ. ಇಷ್ಟು ಸರಳವಾದಂತಹ ಸಂಗತಿಗಳನ್ನು ಎರಡು ವರ್ಷವಾದರೂ ತಿಳಿದುಕೊಳ್ಳದ ಜನ ತಮಗೆ ಕಂಡಂತೆ ಔಷಧ ಸೇವಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರ, ತಲೆಗೊಂದು ಮಾತು ಹೇಳುವವರ ಸಲಹೆ ಪಡೆದು ನಾಲ್ಕು ಹೆಜ್ಜೆ ನಡೆಯಲಾರದ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಾರೆ ಎನ್ನುತ್ತಾರೆ ಡಾ| ಪ್ರಕಾಶ ನಾಯ್ಕ.

ತಿಳಿದು ತಿಳಿದು ಎರಡು ವರ್ಷಗಳಿಂದ ವಿದ್ಯಾವಂತ ಜನ ತಪ್ಪು ಮಾಡುತ್ತಲೇ ಬಂದಿದ್ದಾರೆ. ಆಂಬ್ಯುಲೆನ್ಸ್‌ ಮನೆಗೆ ಹೋಗಿ ಕರೆದುತಂದು ಗುಣಮಾಡಿ ಮನೆಗೆ ಮುಟ್ಟಿಸುತ್ತದೆ. ಮನೆಯಲ್ಲಿ ಉಳಿಯುವುದು ಬೇಡ ಅನ್ನಿಸಿದರೆ ಸರ್ಕಾರಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಕರೆದರೂ ಬರುವುದಿಲ್ಲ. ಪೊಲೀಸರು, ತಾಲೂಕಾಡಳಿತ, ಎಲ್ಲರೂ ಜಂಟಿಯಾಗಿ ಪ್ರಯತ್ನ ನಡೆಸಿದರೂ ಜನ ಬರುತ್ತಿಲ್ಲ. ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗದೇ ಹೋಗಿದೆ. ಹಾಸಿಗೆಗಳಿಗೆ ಕೊರತೆಯಿಲ್ಲ, ಔಷಧಕ್ಕೆ, ಊಟ, ತಿಂಡಿಗೆ ಹಣ ಕೊಡಬೇಕಾಗಿಲ್ಲ. ಸುಲಭದಲ್ಲಿ ಪರಿಹಾರವಾಗುವ ಸಮಸ್ಯೆಯನ್ನು ಕ್ಲಿಷ್ಟವನ್ನಾಗಿಸಿ ಮೈಮೇಲೆ ಎಳೆದುಕೊಳ್ಳುತ್ತಿರುವ ಜಿಲ್ಲೆಯ ಜನರ ಮನೋಭಾವಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ.

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.