ಕೋವಿಡ್‌: ಉದಾರ ದಾನಿಗಳಿಗೆ ಕೃತಜ್ಞತೆ

ಲೆಕ್ಕಪತ್ರ ಸಲ್ಲಿಕೆ-ಖರೀದಿ ಸಾಮಗ್ರಿ ಪಟ್ಟಿ ಬಹಿರಂಗ ಪಡಿಸಲು ಸಾರ್ವಜನಿಕರ ಒತ್ತಾಯ

Team Udayavani, Jun 1, 2021, 9:37 PM IST

637

ಜೀಯು, ಹೊನ್ನಾವರ

ಹೊನ್ನಾವರ: ಕೋವಿಡ್‌ ನಿವಾರಣೆಗೆ ಜಿಲ್ಲೆಗೆ ಸರ್ಕಾರದ ಹಣ ಧಾರಾಳವಾಗಿ ಹರಿದು ಬಂದಿದೆ. ಜೊತೆಯಲ್ಲಿ ಕಳಕಳಿವುಳ್ಳ ದಾನಿಗಳು ಕೈತುಂಬ ದಾನ ಮಾಡಿದ್ದಾರೆ. ದಾನ ಸಣ್ಣದಿರಲಿ, ದೊಡ್ಡದಿರಲಿ ಕೊಟ್ಟವರಿಗೆ ಕೃತಜ್ಞತೆ ಸಲ್ಲಬೇಕು, ಲೆಕ್ಕಪತ್ರ ಸಾರ್ವಜನಿಕವಾಗಬೇಕು ಎಂಬುದು ಕೆಲವು ದಾನಿಗಳ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿ.ಆರ್‌.ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌, ಸರ್ವೋತ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ದೇವದತ್ತ ಕಾಮತ್‌ ಮತ್ತು ಬೆಂಗಳೂರಿನಲ್ಲಿ ನೆಲೆಸಿದ ಹಲವರು ಮತ್ತು ಸಂಘಸಂಸ್ಥೆಗಳು ಕೊಡುಗೆಗಳನ್ನು ನೀಡಿದ್ದಾರೆ. ಕಡಿಮೆ ಬೀಳಬಹುದಾದ ಹಾಸಿಗೆಗಳ ವಿಸ್ತರಣೆ, ವೆಂಟಿಲೇಟರ್‌, ಔಷಧಗಳು ಸರ್ಕಾರದಿಂದ ಸಾಕಷ್ಟು ಬಂದಿದೆ. ಆಕ್ಸಿಜನ್‌ ವ್ಯವಸ್ಥೆಯಾಗಿದೆ.

ದಾನಿಗಳಿಂದ ಆಕ್ಸಿಜನ್‌ನಿಂದ ಆರಂಭಿಸಿ ಆಕ್ಸಿಮೀಟರ್‌ವರೆಗೆ ಮಾಸ್ಕ್ನಿಂದ ಆರಂಭಿಸಿ ವಿವಿಧ ಬಗೆಯ ಸ್ನಾನಿಟೈಸರ್‌ ಗಳು, ಔಷಧಗಳು, ಔಷಧದ ಕಿಟ್‌ ಗಳು ಬಂದಿವೆ. ಸಚಿವ ಹೆಬ್ಟಾರ ಸರ್ಕಾರದ ಸಹಾಯದ ಜೊತೆ ಸಾಕಷ್ಟು ಸ್ವಂತ ಹಣದಿಂದಲೂ ಉಪಕರಣಗಳನ್ನು ನೀಡಿದ್ದಾರೆ. ಇವರ ಪ್ರೇರಣೆ ಉಳಿದ ದಾನಿಗಳಿಗೆ ಮಾದರಿಯಾಗಿ ಬಂತು. ತಾಲೂಕಾಡಳಿತಕ್ಕೆ, ತಾಲೂಕಾಸ್ಪತ್ರೆಗೆ, ತಾಲೂಕು ವೈದ್ಯಾಧಿ  ಕಾರಿಗಳ ಕಾರ್ಯಾಲಯಕ್ಕೆ ಹೀಗೆ ಪ್ರತ್ಯೇಕವಾಗಿ ಎಲ್ಲ ಬಗೆಯ ಉಪಕರಣಗಳು ಸಾಮಗ್ರಿಗಳೂ ಪೂರೈಕೆಯಾಗಿವೆ.

ಮಾಜಿ ಶಾಸಕರು, ಹಾಲಿ ಶಾಸಕರೂ ಸಹ ವಸ್ತುರೂಪದಲ್ಲಿ ಜಿಲ್ಲೆಯಾದ್ಯಂತ ಮತ್ತು ತಮ್ಮತಮ್ಮ ಕ್ಷೇತ್ರಗಳಲ್ಲಿ ನೆರವಾಗಿದ್ದಾರೆ. ಕೋವಿಡ್‌ ಸೆಂಟರ್‌ ಸಜ್ಜುಗೊಳಿಸಲು ತಾಲೂಕಾಡಳಿತ ಹಣ ಖರ್ಚು ಮಾಡಿದೆ. ಸರ್ಕಾರದ ಹಣ ತಾಲೂಕಾಡಳಿತಕ್ಕೆ ಮತ್ತು ಆಸ್ಪತ್ರೆಗಳಿಗೆ, ಆರೋಗ್ಯ ಇಲಾಖೆಗೆ ಬಂದಿದೆ. ಬಹಳಷ್ಟು ಸಾಮಗ್ರಿಗಳನ್ನು ಸ್ಥಳೀಯವಾಗಿ ಖರೀದಿ ಮಾಡಿದ್ದಾರೆ. ಕೆಲವುಗಳ ಗುಣಮಟ್ಟ ಚೆನ್ನಾಗಿಲ್ಲ, ಧಾರಣೆ ಹೆಚ್ಚಾಗಿದೆ ಎಂಬ ಗುಸುಗುಸು ಅಲ್ಲಿಲ್ಲಿ ಕೇಳುತ್ತಿದೆ.

ಸರ್ಕಾರ ಹಾಗೂ ದಾನಿಗಳಿಂದ ಬಂದದ್ದು ಬಹುಕೋಟಿ ರೂಪಾಯಿಗಳಾಗುತ್ತವೆ. ಸರ್ಕಾರದ ಹಣದಿಂದ ಖರೀದಿಸಲಾದ ಸಾಮಗ್ರಿಗಳಿಗೆ ಕೊಟೇಶನ್‌ ಕರೆಯಬೇಕಾಗುತ್ತದೆ. ಕರೆದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸರ್ಕಾರಮಟ್ಟದಿಂದ ಪೂರೈಯಾಗಿದ್ದರ ಹೊರತಾಗಿ ಸ್ಥಳೀಯವಾಗಿ ಖರೀದಿ ಮಾಡಿದ ಸಾಮಗ್ರಿಗಳ ದರಪಟ್ಟಿ ಬಹಿರಂಗವಾಗಬೇಕಿದೆ. ಇನ್ನು ದಾನಿಗಳಿಂದ ಪಡೆದ ವಸ್ತುಗಳಿಗಾಗಿ ಅವರಿಗೊಂದು ಕೃತಜ್ಞತಾ ಪತ್ರ ತಾಲೂಕು ಮತ್ತು ಜಿಲ್ಲೆ ಕೋವಿಡ್‌ ನಿರ್ವಹಣಾ ಸಮಿತಿಯಿಂದ ಹೋಗಬೇಕು. ದಾನಿಗಳಿಂದ ಪಡೆದ ಸಾಮಗ್ರಿಗಳು ಅರ್ಹರಿಗೆ ಸಲ್ಲಿಕೆಯಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಅದೇಅದೇ ವಸ್ತುಗಳು ಪುನಃ ಪುನಃ ಸಲ್ಲಿಕೆಯಾಗಿದೆ. ಆದ್ದರಿಂದ ಜಿಲ್ಲೆಯ ಉಸ್ತುವಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಶಿವರಾಮ ಹೆಬ್ಟಾರ ಅವರು ಕೋವಿಡ್‌ ಎರಡನೇ ಅಲೆ ಬಂದಾಗ ಸರ್ಕಾರ ಮತ್ತು ಸಾರ್ವಜನಿಕರ ಕೊಡುಗೆಯನ್ನು ಜಿಲ್ಲೆಯ ಜನರ ಮುಂದಿಡುವುದು ಅವಶ್ಯವಾಗಿದೆ.

ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕ, ಜಿಲ್ಲೆಯ ಹಿರಿಯ ರಾಜಕಾರಣಿ, ಹಳಿಯಾಳದ ಶಾಸಕ ಆರ್‌.ವಿ. ದೇಶಪಾಂಡೆ ಸರ್ಕಾರದ ಕೋವಿಡ್‌ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ 2 ವರ್ಷದಿಂದ ನಯಾಪೈಸೆ ಕೊಟ್ಟಿಲ್ಲ, ಕೋವಿಡ್‌ ನಿರ್ವಹಣೆ ಸರಿಯಾಗಿಲ್ಲ ಎಂಬ ಆಪಾದನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 43,912 ಆಗಿದ್ದು 37,632 ಜನ ಗುಣಮುಖರಾಗಿದ್ದಾರೆ. 580 ಜನ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಶೇ. 1.87ಕ್ಕೆ ಇಳಿಕೆಯಾಗಿದೆ. ಇನ್ನೆರಡು ವಾರದಲ್ಲಿ ಕೋವಿಡ್‌ ಎರಡನೇ ಅಲೆ ಬಹುಪಾಲು ಮುಕ್ತಾಯವಾಗಲಿದೆ. ಅದಕ್ಕೂ ಮುನ್ನ ಕೋವಿಡ್‌ ಕುರಿತು ಪ್ರತಿಷ್ಠಿತ ರಾಜಕಾರಣಿಗಳ ಪ್ರಶ್ನೆಗೆ ಆಡಳಿತ ಉತ್ತರಿಸಬೇಕಿದೆ. ಕೋವಿಡ್‌ ನಿವಾರಣೆಗೆ ವಿವಿಧ ರೀತಿಯಲ್ಲಿ ದುಡಿದವರಿಗೆ, ಕೊಡುಗೆ ನೀಡಿದವರಿಗೆ ಕೃತಜ್ಞತಾ ಪತ್ರ ಸಲ್ಲಬೇಕಾಗಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.