ಕೋವಿಡ್ ಮುಗಿದಿಲ್ಲ: ಕಾಳಜಿ ಇರಲಿ


Team Udayavani, Nov 27, 2020, 5:34 PM IST

ಕೋವಿಡ್ ಮುಗಿದಿಲ್ಲ: ಕಾಳಜಿ ಇರಲಿ

ಹೊನ್ನಾವರ: ಜಿಲ್ಲೆಯಲ್ಲಿ ನಿನ್ನೆ 37 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 13700 ಜನ ಈವರೆಗೆ ಸೋಂಕಿಗೆ ತುತ್ತಾಗಿದ್ದು 177 ಜನ ಬಲಿಯಾಗಿದ್ದಾರೆ. 13306 ಜನ ಗುಣಮುಖರಾಗಿದ್ದು 217 ಸೋಂಕಿನ ಸಕ್ರೀಯ ಪ್ರಕರಣಗಳು ವರದಿಯಾಗಿದ್ದು 76 ಮಂದಿಕೋವಿಡ್‌ ಆಸ್ಪತ್ರೆಯಲ್ಲಿ 141 ಜನ ಹೋಂ  ಐಸೋಲೇಶನ್‌ನಲ್ಲಿ ಇದ್ದಾರೆ. ಜನ ಮುಕ್ತವಾಗಿ ಓಡಾಡುತ್ತಿದ್ದು ಮದುವೆಗಳು ಭರ್ಜರಿಯಾಗಿ ನಡೆದಿವೆ.

ದೇವಾಲಯಗಳು ತಮ್ಮ ಉತ್ಸವಗಳನ್ನು ರದ್ದುಪಡಿಸಿದ್ದು ಆದಾಯ ಕಳೆದುಕೊಂಡದ್ದಲ್ಲದೇ ಈ ಉತ್ಸವಗಳನ್ನೇ ನಂಬಿಕೊಂಡಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಪುನಃ ಕಷ್ಟಕ್ಕೆ ಸಿಲುಕಿದೆ. ಎಲ್ಲರಿಗೂ ಕಾಳಜಿ ಬರದಿದ್ದರೆ ಕೊರೊನಾ ಲಸಿಕೆ ಬರುವವರೆಗೆ ನಿಯಂತ್ರಣದಲ್ಲಿ ಇರುವುದು ಕಷ್ಟ.

ಇದನ್ನೂ ಓದಿ:ನಮ್ಮ ಸರಕಾರ ಮಹಾರಾಷ್ಟ್ರದ ಜನತೆಯ ಆಶೀರ್ವಾದದ ಫ‌ಲ! ಇಡಿ, ಸಿಬಿಐನಿಂದ ಬೆದರಿಸಲಾಗದು: ಉದ್ಧವ್‌

ಸಂತ ಝೇವಿಯರ್‌ ಅಂಗಾಂಶಗಳುಳ್ಳ ಚಂದಾವರ ಚರ್ಚ್‌ನ ಹಬ್ಬಕ್ಕೆ ಜಿಲ್ಲೆಯ ವಿವಿಧ ಭಾಗ ಮತ್ತು ಗೋವಾದಿಂದ ಎಲ್ಲ ಧರ್ಮಿಯರು ಬರುತ್ತಿದ್ದರು. ಈ ಹಬ್ಬದಲ್ಲಿ ವಿಶೇಷವಾಗಿ ಮಾರಾಟವಾಗುತ್ತಿದ್ದ ಗಡ್ಡೆಗೆಣಸುಗಳು, ಮಲಬಾರ ಬೇಕರಿ ಬಿಸ್ಕೆಟ್‌, ನೂರಾರು ರೈತರ ಸಣ್ಣ ವ್ಯಾಪಾರಿಗಳ ಪಾಲಿಗೆ, ಟೆಂಪೋ ಮೊದಲಾದ ವಾಹನ ಚಾಲಕರಿಗೆ ಮೂರು ತಿಂಗಳ ಅನ್ನ ಗಿಟ್ಟುತ್ತಿತ್ತು.

ಬೆಳಗ್ಗಿನಿಂದ ಸಂಜೆ ತನಕ 50-70 ಸಾವಿರ ಜನ ಇಲ್ಲಿ ಬಂದು ಮೊಂಬತ್ತಿ ಉರಿಸುತ್ತಿದ್ದರು. ಈ ಬಾರಿ ಎಲ್ಲವೂ ರದ್ದಾಗಿದೆ. ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕ ಚಂಪಾ ಷಷ್ಠಿಗೆ ಬೆಳಗಿನಿಂದ ಸಂಜೆತನಕ ಸುಮಾರು ಲಕ್ಷ ಜನ ಬರುತ್ತಿದ್ದರು. ಯಕ್ಷಗಾನ ಮೊದಲಾದವು ಇರುತ್ತಿದ್ದವು, ನೂರಾರು ಮಿಠಾಯಿ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದವು. ವರ್ಷಕ್ಕೊಮ್ಮೆ ನಡೆಯುವ ಜಿಲ್ಲೆಯ ಏಕೈಕ ಧನ್ವಂತರಿ ದೇವಸ್ಥಾನ ಯಲಗುಪ್ಪಾದಲ್ಲಿ ಧನ್ವಂತರಿ ಉತ್ಸವ, ಹೋಮ ಮೊದಲಾದ 4 ದಿನದ ಕಾರ್ಯಕ್ರಮ ರದ್ದಾಗಿದೆ. ರಾಜ್ಯದ ನಾನಾ ಭಾಗದಿಂದ ಜನ ಬಂದು ಹೋಗುತ್ತಿದ್ದರು.

ಹೀಗೆ ನವೆಂಬರ್‌, ಡಿಸೆಂಬರ್‌ನಲ್ಲಿ ಜಿಲ್ಲೆಯಾದ್ಯಂತ ನಡೆಯುವ ದೇವತಾ ಕಾರ್ಯಗಳು ರದ್ದಾಗಿವೆ. ದೇವಾಲಯದ ಆದಾಯ ಖೋತಾ ಆಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್‌ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಕಂಡುಬಂದ ಕಾರಣ ಹಾಜರಾತಿ ಕಡಿಮೆ ಇದೆ. ಆದರೆ ನೂರು ಜನರಿಗೆ ಪರವಾನಗಿ ಪಡೆದ ಮದುವೆಗಳಿಗೆ 500-1000 ಜನರನ್ನು ಆಮಂತ್ರಿಸುತ್ತಾರೆ. ಕಟ್ಟುನಿಟ್ಟಾಗಿ ಯಾವುದೇ ಕ್ರಮಕೈಗೊಳ್ಳದ ಕಾರಣ ಡಿಸೆಂಬರ್‌ ತಿಂಗಳಲ್ಲಿ ಎಲ್ಲ ಕಲ್ಯಾಣ ಮಂಟಪಗಳು ಬುಕ್‌ ಆಗಿವೆ. 100 ಜನರನ್ನು ಕರೆದು ಮನೆಯಲ್ಲಿ ಮದುವೆ ಮಾಡಿದರೆ ಹಣವೂ ಉಳಿತಾಯವಾಗುತ್ತಿತ್ತು.

ಸುರಕ್ಷಿತವಾಗಿತ್ತು. ಹೆಚ್ಚಿನವರು 50ಸಾವಿರ ವೆಚ್ಚ ಬರುವ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ನೆರವೇರಿಸುತ್ತಿದ್ದಾರೆ. ಸಂತೆಗಳು ಆರಂಭವಾಗಿವೆ, ಪೇಟೆಗಳಿಗೆ ಜನ ತುಳಸಿ ಹಬ್ಬ, ಹುಣ್ಣಿಮೆಯೆಂದು ಖರೀದಿಗೆ ಬಂದು ತುಂಬಿಕೊಳ್ಳುತ್ತಿದ್ದಾರೆ, ಮಾಸ್ಕ್ ಕುತ್ತಿಗೆಯಿಂದ ಕಿಸೆಗೆ ಸೇರಿದೆ. ಚಳಿಗಾಲ ಬೇರೆ, ಮತ್ತೆ ಕೋವಿಡ್‌ ಚಿಗುರದಿದ್ದರೆ ಸಾಕು. ಸಾಮೂಹಿಕ ಜವಾಬ್ದಾರಿ ಅರಿವಿಲ್ಲದ ಜನರಿಂದ ಕೊರೊನಾ ಚಿರಂಜೀವಿಯಾಗುವ ಲಕ್ಷಣ ಕಾಣುತ್ತಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.