ಹಸಿ ಅಡಿಕೆ ಆಮದು ತಡೆಗೆ ದೀಪಕ್ ದೊಡ್ಡೂರು ಹಕ್ಕೊತ್ತಾಯ
Team Udayavani, Sep 30, 2022, 7:23 PM IST
ಶಿರಸಿ: ಭೂತಾನ್ ಮೂಲಕ ಹಸಿ ಅಡಿಕೆಗೆ ಕೇಂದ್ರ ಸರಕಾರವೇ ಅನುಮತಿ ನೀಡಿದ್ದು, ದೇಶೀ ಅಡಿಕೆಯ ಮೇಲೆ, ಅಡಿಕೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೇಂದ್ರ ಸರಕಾರ ಈ ಕ್ಷಣ ಆದೇಶ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹಕ್ಕೊತ್ತಾಯ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ,17 ಸಾವಿರ ಟನ್ ಅಡಿಕೆ ಬರಲು ಅನುಮತಿ ನೀಡಿದ್ದಾರೆ. ಇಂದುಹಸಿ ಅಡಿಕೆ, ನಾಳೆ ಒಣ ಅಡಿಕೆ ಕೂಡ ಬರುತ್ತದೆ. ಈಗಾಗಲೇ ಅಕ್ರಮವಾಗಿ ಅಡಿಕೆ ಬರುತ್ತಿವೆ. ಇದನ್ನು ತಪ್ಪಿಸಿ ಬಿಗು ಕ್ರಮ ಕೈಗೊಳ್ಳಬೇಕು. ಅಡಿಕೆ ಬೆಳೆಗಾರ ಪ್ರದೇಶದ ಸಂಸದರು ಪ್ರಧಾನಿಗಳ ಜತೆ ಮಾತನಾಡಿ ಇದನ್ನು ನಿಲ್ಲಿಸಬೇಕು ಎಂದರು.
ಪಿ.ಡಬ್ಲ್ಯು.ಡಿ. ಕಾರವಾರ ವಿಭಾಗದಡಿ 2022 -23 ನೇ ಸಾಲಿನಲ್ಲಿ 87 ಕೋಟಿ ರೂ. ಶಿರಸಿ ವಿಭಾಗದಲ್ಲಿ 98 ಕೋಟಿ ರೂ. ಗುತ್ತಿಗೆದಾರರಿಗೆ ಕೊಡುವುದು ಬಾಕಿಯಿದೆ. ಹಾಗಾಗಿ ಘೋಷಣೆ ಹಾಗೂ ಅನುಷ್ಠಾನದ ನಡುವಿನ ವ್ಯತ್ಯಾಸ ಸಚಿವರು ತಿಳಿಯಬೇಕು ಎಂದರು.
ಬಿಜೆಪಿಯವರು ಆಡಳಿತ ಪಕ್ಷದಲ್ಲಿದ್ದಾರೋ ಅಥವಾ ವಿರೋಧ ಪಕ್ಷದಲ್ಲಿದ್ದಾರೋ ಎಂಬ ಸಂಶಯ ಮೂಡುವಂತಾಗಿದೆ. ಹಿಂದಿನ ಅತಿ ಮಳೆಗೆ ಆದ ಹಾನಿಗೆ ಮಾಡಿದ ಕಾಮಗಾರಿ ಮಾಡಿದ ಗುತ್ತಿಗೆದಾರಿಗೆ ಕೊಡಲು 86 ಕೋಟಿ ಬಾಕಿ ಇದೆ. ಈಗ ಮತ್ತೆ ನೂರು ಕೋಟಿ ರೂ. ಹೇಳುತ್ತಿದ್ದರು. ಬಿಜೆಪಿ ಸರಕಾರ ಘೋಷಣೆ ಹಾಗೂ ಅನುಷ್ಟಾನ ನಡುವಿನ ವ್ಯತ್ಯಾಸ ಕಂಡುಕೊಳ್ಳಬೇಕು ಎಂದರು.
ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರು, ವಕ್ತಾರರ ಹೇಳಿಕೆ ನೀಡೋದು ನೀಡಿದರೆ ಅವರಿಗೆ ಬಿಜೆಪಿ ಸರಕಾರ ಪೊಲೀಸ್ ವರಿಷ್ಠ ಹುದ್ದೆಗೆ ನೇಮಕಾತಿ ಮಾಡುವ ಅವಕಾಶ ಇದ್ದರೆ ಮಾಡಬಹುದು. ಪೊಲೀಸರಿಗೂ ಗೊತ್ತಿಲ್ಲದ ಅನೇಕ ಸಂಗತಿ ಅವರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಈ ವೇಳೆ ಬಸವರಾಜ್ ದೊಡ್ಮನಿ, ಜಗದೀಶ ಗೌಡ, ಶ್ರೀಪಾದ ಹೆಗಡೆ, ನಾಗರಾಜ ನಾಯ್ಕ, ಪ್ರವೀಣ ತೆಪ್ಪಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ