ಇಲ್ಲಿ ಬಂದ ಕೇಳ್ದವರಿಗೇ ಮತ ಹಾಕಿದ್ರ ಆತಲ್ಲ!


Team Udayavani, Apr 16, 2019, 5:43 PM IST

nc
ಬೆಳಗಾವಿ: ಕಿತ್ತೂರು ಮತಕ್ಷೇತ್ರ ಗಡಿ ಜಿಲ್ಲೆ ಬೆಳಗಾವಿಯ ಭಾಗವಾಗಿದ್ದರೂ ದೂರದ ಕರಾವಳಿ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಚುನಾವಣೆ ಗರಿಗೆದರಿದ್ದರೂ ಬಿಸಿಲಿನ ಬೇಗೆ ಮುದುವರಿದಿದೆ. ಬಹುತೇಕ ಮತದಾರರಿಗೆ ಒಬ್ಬ ಅಭ್ಯರ್ಥಿ ಬಿಟ್ಟರೆ ಇನ್ನುಳಿದ ಪ್ರತಿಸ್ಪರ್ಧಿಗಳ ಹೆಸರೇ ಗೊತ್ತಿಲ್ಲ.
ಕರಾವಳಿ ಹಾಗೂ ಕಿತ್ತೂರಿಗೆ ಅಜಗಜಾಂತರ ವ್ಯತ್ಯಾಸವಿದ್ದರೂ ಚುನಾವಣೆ ವೇಳೆ ಇವೆರಡಕ್ಕೂ ಅವಿನಾಭಾವ ಸಂಬಂಧ. ಕಿತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಮಾತ್ರ ಗೌಣ. ಆದರೆ ಇಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ವಿಷಯವೇ ಪ್ರಧಾನವಾಗಿದೆ. ಚುನಾವಣಾ ಪ್ರಚಾರದ ವೇಳೆಯೂ ಈ ಭಾಗಕ್ಕೆ ಅಭ್ಯರ್ಥಿಗಳು ಬರುವುದು ವಿರಳ. ಇನ್ನು ಗೆದ್ದ ಮೇಲಂತೂ ಸಂಸದರು ಸುಳಿಯುವುದೇ ಅಪರೂಪ. ಲೋಕಸಭೆ ಮಟ್ಟಿಗಂತೂ ಈ ಕ್ಷೇತ್ರ ಸಂಪೂರ್ಣ ಹಿಂದುಳಿದಿದ್ದು, ಆದರೆ ಸಂಸದನನ್ನು ಗೆಲ್ಲಿಸುವ ತವಕದಲ್ಲಿ ಇಲ್ಲಿನ ಮತದಾರರು ಇದ್ದಾರೆ.
ಅಭ್ಯರ್ಥಿಯೇ ಲೆಕ್ಕಕ್ಕೆ ಇಲ್ಲದಂಥ ಸ್ಥಿತಿಯಲ್ಲಿರುವ ಕಿತ್ತೂರು ಮತಕ್ಷೇತ್ರದಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ಮತದಾರರು
ರಾಷ್ಟ್ರೀಯ ಮಟ್ಟದ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪಾಕಿಸ್ತಾನದ ಮೇಲೆ ಭಾರತೀಯ ಸೈನ್ಯ ದಾಳಿ ಮಾಡಿರುವುದು ಪ್ರಮುಖ ವಿಷಯವಾಗಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ಒಂದೇ ದಿನದಲ್ಲಿ ಕರೆದು ತಂದಿರುವ ಬಗ್ಗೆಯೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜತೆಗೆ ಪುಲ್ವಾಮಾ ದಾಳಿಯಿಂದ ವೀರ ಮರಣವನ್ನಪ್ಪಿದ ಸೈನಿಕರ ಸೇವೆಯನ್ನೂ ಜನ ಕೊಂಡಾಡುತ್ತಿದ್ದಾರೆ.
ಕಾರವಾರ ಕಡೆ ಮಂದಿ ಕುಂತಾರ: ಕಿತ್ತೂರು ಕ್ಷೇತ್ರದ ಹಳ್ಳಿಗಳಲ್ಲಿ ಸುತ್ತು ಹಾಕಿದ ಮತದಾರ ಪ್ರಭು ತನ್ನ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಅವರ ಮಾತಿನ ಧಾಟಿಯಲ್ಲಿ ಸಂಸದರ ಹೆಸರು ಮಾತ್ರ ಸುಳಿದಾಡುತ್ತಿದೆ. ಇನ್ನೂ ಮಾತಿಗಿಳಿದಾಗ, ನಮ್ಮಂಗ ಮಾತಾಡವರೂ ಯಾರೂ ಕುಂತಿಲ್ಲ, ಆ ಕಡೆ ಕಾರವಾರದಾವರ ಕುಂತಾರ. ಇಲ್ಲಿ ಯಾರ ಬಂದ ಕೇಳ್ತಾರಲ್ಲ ಅವರಿಗೆ ಹಾಕಿದ್ರ ಆತಲ್ಲ ಅಂತಾರೆ ಹನುಮನಹಟ್ಟಿಯ ಬಸವರಾಜ.
ರಾಷ್ಟ್ರ ಮಟ್ಟದ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದೇ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಬೈಲಹೊಂಗಲಕ್ಕೆ ಹೊಂದಿಕಂಡಂತೆ ಇರುವ ದೇಶನೂರ, ಮರೆ, ಹೊಗರ್ತಿ, ನೇಸರಗಿ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಸುತ್ತಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಅಭಿಮಾನ ಹೊರ ಹಾಕುತ್ತಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ನಮ್ಮ ಭಾಗಕ್ಕೆ ಸುಳಿದಿಲ್ಲ ಎಂಬ ತೀವ್ರ ಆಕ್ರೋಶ ಇಲ್ಲಿಯ ಜನರಿಗಿದೆ. ಮದನಬಾಂವಿ, ಮಹಾಂತೇಶ ದೊಡಗೌಡರ ಜನರ ಮನವೊಲಿಸುವಲ್ಲಿ ಯತ್ನಿಸುತ್ತಿದ್ದಾರೆ.
ಎಲೆಕ್ಷನ್‌ ಬಂದಾಗ ನೋಡೋಣು: ಈ ಭಾಗದಲ್ಲಿ ಕೃಷಿಕರು ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಜನ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಯಾರ ಬಂದ್ರ ನಮಗೇನ ಆಗೋದೈತಿ, ಮತ್ತ ಹರೇ ಹೊತ್ತ ಎದ್ದ ಹೊಲಕ್ಕ ಹೋಗೋದೇನೂ ತಪ್ಪೋದಿಲ್ಲ. ಸಂಜಿಕ ಮತ್ತ ಎಮ್ಮಿ ಹಾಲ ಹಿಂಡಿ ಡೈರಿಗಿ ಕಳಸಬೇಕ. ಎಲೆಕ್ಷನ್‌ ಬಂದಾಗ ಯಾರಿಗಿ ವೋಟ್‌ ಹಾಕೋದಂತ ನೋಡೋಣ ಎಂದು ಹೇಳುತ್ತ ಬಿಸಿಲಿನ ಬೇಗೆಯಲ್ಲಿಯೇ ಹೊಲದತ್ತ ಹೆಜ್ಜೆ ಹಾಕುತ್ತಾರೆ ದೇಶನೂರಿನ ಗಂಗಪ್ಪ.
ಮೈತ್ರಿ ಅಭ್ಯರ್ಥಿ ಹೆಸರೇ ಗೊತ್ತಿಲ್ಲ: ಇನ್ನು ಬಹುತೇಕ ಕಡೆ ಸುತ್ತಾಡಿದಾಗ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರ ಬಗ್ಗೆ ಕಿತ್ತೂರು ಕ್ಷೇತ್ರದ ಜನರಿಗೆ ಗೊತ್ತೇ ಇಲ್ಲ. ಬಹುತೇಕ ಜನರ ಬಾಯಲ್ಲಿ ಮೋದಿ ಹಾಗೂ ಹೆಗಡೆ ಬಿಟ್ಟರೆ ಬೇರೆ ವಿಷಯಗಳೇ ಚರ್ಚೆ ಆಗುತ್ತಿಲ್ಲ.
ಆನಂದ ಅಸ್ನೋಟಿಕರ ಜೆಡಿಎಸ್‌ ಅಭ್ಯರ್ಥಿ ಆಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಕಿತ್ತೂರು ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಂಗ್ರೆಸ್‌ನ ಮುಖಂಡರು ಯಾರೊಬ್ಬರೂ ಪ್ರಚಾರಕ್ಕೆ ಇಳಿದಿಲ್ಲ. ಲಕ್ಕುಂಡಿ, ವಣ್ಣೂರ, ಸಂಪಗಾಂವ, ಮೇಕಲಮರ್ಡಿ ಗ್ರಾಮಗಳಲ್ಲಿ ಹೋದಾಗ, ಜೆಡಿಎಸ್‌ ಅಂತೂ ಇಲ್ಲಿ ಅಷ್ಟಕ್ಕಷ್ಟೇ. ಕಾಂಗ್ರೆಸ್‌ ಪ್ರಬಲವಾಗಿದ್ದರೂ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯದಿರುವುದೇ ದುರಂತ. ಅಭ್ಯರ್ಥಿ ಯಾರೆಂಬುದೇ ಜನರಿಗೆ ಗೊತ್ತಿಲ್ಲ.
ಚುನಾವಣೆ ಕಾವು ಜೋರಾಗಿದ್ದರೂ ಇನ್ನೂವರೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಯಾವೊಬ್ಬ ನಾಯಕರು ಈ ಕ್ಷೇತ್ರಕ್ಕೆ ಆಗಮಿಸಿಲ್ಲ. ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿಧಾನಸಭೆ ಚುನಾವಣೆ ವೇಳೆ ದೊಡಗೌಡ್ರ ಪರ ಪ್ರಚಾರ ನಡೆಸಿದ್ದರು. ಸದ್ಯ ಬಿಜೆಪಿ ಶಾಸಕ ದೊಡಗೌಡ್ರ ಪ್ರಚಾರ ಜೋರಾಗಿ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಇತ್ತ ಇನ್ನೂ ಸುಳಿದಿಲ್ಲ. ಅವರ ಪರ ಪ್ರಚಾರವೂ ಇಲ್ಲಿ ಅಷ್ಟಕ್ಕಷ್ಟೇ ಎಂಬಂತಿದೆ.
ಈ ಹಳ್ಳಿಗಳಲ್ಲೇ ಅಡ್ಡಾಡ್ತಾರೆ ಬೆಳಗಾವಿ ಲೋಕಸಭೆ ಅಭ್ಯರ್ಥಿಗಳು ಕಾರವಾರ(ಕೆನರಾ) ಲೋಕಸಭೆ ಕ್ಷೇತ್ರಕ್ಕೆ
ಸೇರಿಕೊಂಡಿರುವ ಕಿತ್ತೂರು ವಿಧಾನಸಭಾ ಕ್ಷೇತ್ರದ ಹನುಮನಹಟ್ಟಿ, ನೇಸರಗಿ, ದೇಶನೂರ, ಹೊಗರ್ತಿ ಗ್ರಾಮಗಳು ಬೆಳಗಾವಿಗೆ ಅತೀ ಸಮೀಪ. ಈ ಹಳ್ಳಿಗಳ ಮೇಲಿಂದಲೇ ಬೆಳಗಾವಿ ಲೋಕಸಭೆ ಅಭ್ಯರ್ಥಿಗಳು ತಿರುಗಾಡಬೇಕು. ಆದರೆ ಇವು ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಿಸಿದವು ಅಲ್ಲ. ಬೈಲಹೊಂಗಲ, ರಾಮದುರ್ಗ, ಸವದತ್ತಿ, ಯರಗಟ್ಟಿಗೆ ಹೋಗಬೇಕಾದರೆ ಈ ಹಳ್ಳಿಗಳ ಮಾರ್ಗವೇ ಇವರಿಗೆ ಆಸರೆ. ಇದಕ್ಕೆ ಸಂಬಂಧಿಸಿದ ಕೆನರಾ ಲೋಕಸಭೆ ಅಭ್ಯರ್ಥಿಗಳು ಬರುವುದಂತೂ ದೂರವೇ ಉಳಿದಂತೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.