ಅನುಮತಿಯಿಲ್ಲದೆ ಚಿತ್ರ ಬಳಸಿದಕ್ಕೆ ಅಸಮಾಧಾನ
ಕಲಾವಿದನ ಕೇಳದೆ ಸೀರೆಗೂ ಬಂತು ಶಿರಸಿ ಕಲಾವಿದನ ಪೇಟಿಂಗ್ ಚಿತ್ರ!
Team Udayavani, Apr 1, 2019, 5:33 PM IST
ಶಿರಸಿ: ಸೀರೆಯ ಮೇಲೆ ಕಲಾವಿದನ ಚಿತ್ರಗಳು ಹಾಗೂ ಕಲಾವಿದನ ಒರಿಜಿನಲ್ ಚಿತ್ರಗಳು ಹಾಗೂ ಕಲಾವಿದ.
ಶಿರಸಿ: ಕಲಾವಿದನ ಅನುಮತಿ ಪಡೆಯದೇ ಆತ ಬಿಡಿಸಿದ ಚಿತ್ರವೊಂದು ಸೀರೆಯ ಮೇಲೂ ಬಂದ ವಿಲಕ್ಷಣ ಪ್ರಸಂಗ ಬೆಳಕಿಗೆ ಬಂದಿದ್ದು, ಇದು ಕಲಾವಿದರಿಗೆ ಆದ ಶೋಷಣೆ ಅಲ್ಲದೇ ಮತ್ತೇನು ಎಂದು ಜಿಲ್ಲಾ ಚಿತ್ರಕಲಾವಿದರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಶಿರಸಿಯ ಗಣೇಶ ನಗರದ ಚಿತ್ರ ಕಲಾವಿದ ಪ್ರಕಾಶ ನಾಯ್ಕ ಅವರು ಕಳೆದ 20 ವರ್ಷಗಳಿಂದಲೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪೇಂಟಿಂಗ್ ಗಳನ್ನು ರಚಿಸುತ್ತಿದ್ದಾರೆ. ಅವುಗಳಲ್ಲಿ ಬೆಂಗಳೂರು, ಮುಂಬಯಿ ಹಾಗೂ ಕೆಲವು ಖಾಸಗಿ ಆರ್ಟ್ ಗ್ಯಾಲರಿಗಳಲ್ಲಿ ಕೂಡ ಇದೆ. ವೃತ್ತಿನಿರತ ಕಲಾವಿದರಾಗಿ ಕೂಡ ಕಾರ್ಯ ಮಾಡುತ್ತಿದ್ದಾರೆ. ಅವರ ಭಾರತೀಯ ಸಾಂಪ್ರದಾಯಿಕ ರೂಪದ ಸೆಮಿ ಮಾಡರ್ನ್ ಪೇಂಟಿಂಗ್ಗಳಿಗೆ ಸಾಕಷ್ಟು ಬೇಡಿಕೆ ಕೂಡ ಇದೆ. ಇವರು ಶಿರಸಿಯವರು, ನಮ್ಮ ಕಲಾವಿದರು ಎನ್ನಲು ನಮಗೆ ಹೆಮ್ಮೆ ಇದೆ ಎಂದು ಸಂಘ ಹೇಳಿದೆ.
ಧಾರವಾಡದಲ್ಲಿ ನಡೆದ ಕಲಾ ಶಿಬಿರದಲ್ಲಿ ಭಾಗವಹಿಸಲು ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಇವರ ಚಿತ್ರಗಳು ರೇಷ್ಮೆ ಸಾರಿಗಳ ಮೇಲೆ ಪ್ರಿಂಟ್ ರೂಪದಲ್ಲಿ ಬಂದ ವಿಚಾರ ತಿಳಿಸಿದಾಗ ಸಂತೋಷ, ಆಶ್ಚರ್ಯ ಆಯಿತು. ಆದರೆ, ತಾನು ಯಾರಿಗೂ ಹೀಗೆ ವ್ಯವಹಾರಿಕವಾಗಿ ಮುದ್ರಿಸಲು ಅನುಮತಿ ನೀಡಿಲ್ಲ, ಆದರೂ ಬಳಸಿದ್ದಾರೆ ಎಂಬ ನೋವು ವ್ಯಕ್ತಪಡಿಸಿದ್ದಾಗಿ ಸಂಘ ತಿಳಿಸಿದೆ.
ಸಾರಿಯಲ್ಲಿ ಬಂದ ಚಿತ್ರಗಳನ್ನು ಮುಂಬಯಿಯ ಪ್ರಸಿದ್ಧ ಸ್ಟುಡಿಯೋ ಒಂದರ ಗ್ಯಾಲರಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಸಾರಿ ಉದ್ಯಮದವರು ಕಲಾವಿದ ಪ್ರಕಾಶ ನಾಯಕರ ಚಿತ್ರಗಳನ್ನು ಕದ್ದು, ಕಲಾವಿದನ ಅನುಮತಿ ಇಲ್ಲದೇ ಉಚಿತವಾಗಿ ಬಳಸಿದ್ದಾರೆ. ಇದರಿಂದ ಕಲೆಗೆ, ಕಲಾವಿದರಿಗೆ ಅನ್ಯಾಯವಾಗುತ್ತದೆ. ಸೂಕ್ತ ಗೌರವಧನ ಕೊಟ್ಟು ಅನುಮತಿ ಪಡೆದು ಬಳಸಬೇಕಿತ್ತು. ಶಿರಸಿ ಕಲಾವಿದನಿಗೆ, ನಮ್ಮ ಸಂಘದ ಸದಸ್ಯನಿಗಾದ ಅನ್ಯಾಯವನ್ನು ಜಿಲ್ಲಾ ಚಿತ್ರಕಲಾ ಪರಿಷತ್ತು ಖಂಡಿಸುತ್ತದೆ ಎಂದು ಪ್ರಕಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಎಂ. ಬೊಮ್ನಳ್ಳಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ