ಮಾದಕವಸ್ತು ಸಾಗಾಟದ ವೇಳೆ ದಾಳಿ: ಮಾಲು ಸಹಿತ ಸಿಕ್ಕಿಬಿದ್ದ ಆರೋಪಿಗಳು
Team Udayavani, Mar 18, 2020, 6:21 PM IST
ಕಾರವಾರ: ಡ್ರಗ್ಸ್ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದ ಘಟನೆ ಇಲ್ಲಿನ ಬಾಳೆಗುಳಿ ಬಳಿ ನಡೆದಿದೆ. ಇದೇ ಸಮಯದಲ್ಲಿ 2 ಕೋಟಿ ರೂ. ಮೌಲ್ಯದ ಡ್ರಗ್ಸ್ ,ಬ್ರೌನ್ ಶುಗರ್ ವಶಪಡಿಸಲಾಗಿದೆ.
ಹಳವಳ್ಳಿ ಹತ್ತಿರದ ಕಲ್ಲೇಶ್ವರದ ನಾರಾಯಣ ರಾಮಕೃಷ್ಣ ಭಾಗ್ವತ್ (35), ಚಾಲಕ ವೃತ್ತಿಯ ಚಂದ್ರಹಾಸ ದಯಾನಂದ ಗುನಗಾ (29 ), ಸಿದ್ದಾಪುರ ಕ್ಯಾದಗಿಯ ಕಂಟ್ರಾಕ್ಟರ್ ವೀರಭದ್ರ ಸುಬ್ರಾಯ ಹೆಗಡೆ (43), ಸಿದ್ದಾಪುರದ ಹಳ್ಳಿಬೈಲನ ಪುರೋಹಿತ ಕೆಲಸ ಮಾಡುತ್ತಿದ್ದ ಪ್ರವೀಣ ಮಂಜುನಾಥ ಭಟ್ (30) ಸಿಕ್ಕಿಬಿದ್ದ ಆರೋಪಿಗಳು. ಇದರೊಂದಿಗೆ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟದ ವೇಳೆ ಹಿಡಿದ ಅತಿದೊಡ್ಡ ಪ್ರಕರಣ ಇದಾಗಿದೆ. ಡ್ರಗ್ಸ್ ಎಲ್ಲಿಂದ ಬರುತ್ತಿತ್ತು, ಯಾರಿಗೆ ನೀಡಲು ಸಾಗಾಟ ಮಾಡಲಾಗುತ್ತಿತ್ತು ಎಂಬ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ