ನಾಪತ್ತೆಯಾಗಿದ್ದ ಡಿವೈಎಸ್ಪಿ ಹಾಗೂ ತಂಡ ಸುರಕ್ಷಿತವಾಗಿ ಪತ್ತೆ
Team Udayavani, Sep 2, 2019, 11:07 AM IST
ಕಾರವಾರ: ಕೈಗಾ ಅಣುಸ್ಥಾವರ ಸಮೀಪದ ಬಾರೆ ಗ್ರಾಮದ ಹತ್ತಿರ ಅರಣ್ಯದಿಂದ ಸೆಟಲೈಟ್ ಕಾಲ್ ಮಾಡಿದವರನ್ನು ಪತ್ತೆ ಹಚ್ಚಲು ಹೋಗಿ ಅರಣ್ಯದಲ್ಲಿ ಭಾನುವಾರ ರಾತ್ರಿ ನಾಪತ್ತೆಯಾಗಿದ್ದ ಡಿವೈಎಸ್ಪಿ ಶಂಕರ ಮಾರಿಹಾಳ ಘಟನೆಗೆ ಸಂಬಂಧಿಸಿದಂತೆ ಇದೀಗ ಡಿವೈಎಸ್ಪಿ ಶಂಕರ ಮಾರಿಹಾಳ ಹಾಗೂ ಐಬಿ ಅಧಿಕಾರಿ ನಿಶ್ಛಲ ಕುಮಾರ್ ತಂಡದ ಸದಸ್ಯರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ.
ರವಿವಾರ ಬೆಳಿಗ್ಗೆ ಡಿವೈಎಸ್ಪಿ ನೇತೃತ್ವದ ತಂಡ ಬಾರೇ ಹೆರೂರು ಗ್ರಾಮ ಸಮೀಪದ ಅರಣ್ಯದಲ್ಲಿ ತನಿಖೆ ಸಂಬಂಧ ಹುಡುಕಾಟ ನಡೆಸಿತ್ತು. ಆದರೆ ಅರಣ್ಯದಲ್ಲಿ ದಾರಿ ತಪ್ಪಿದ ಕಾರಣ ಅವರು ರಾತ್ರಿಯಾದರೂ ಮರಳಿರಲಿಲ್ಲ. ಆಗ ಅಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ ನೇತೃತ್ವದ ತಂಡ ಡಿವೈಎಸ್ಪಿ ಗಾಗಿ ಹುಡುಕಾಟ ಪ್ರಾರಂಭಿಸಿತ್ತು. ಸೋಮವಾರ ಬೆಳಗಿನ ಜಾವ ಡಿವೈಎಸ್ಪಿ ಹಾಗೂ ತಂಡ ಕಾಡಿನಲ್ಲಿ ಭೇಟಿಯಾಯಿತು. ಆಗ ಸಮಾಧಾನದ ನಿಟ್ಟುಸಿರು ಪೋಲೀಸ್ ಇಲಾಖೆಯಿಂದ ಬಂತು. ಈ ಬಗ್ಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎಲ್ಲಾ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.
ಸೆಟಲೈಟ್ ಕಾಲ್ ಆದ ಸ್ಥಳ ಕೈಗಾ ಅಣುಸ್ಥಾವರ ಹಾಗೂ ನೌಕಾನೆಲೆ ಐಎನ್ ಎಸ್ ಕದಂಬದ ಶಸ್ತ್ರಾಗಾರ ಸಂಗ್ರಹ ವಜ್ರಕೋಶ ಕ್ಕೆ ಸಮಾನ ಅಂತರದಲ್ಲಿದೆ. ಹಾಗಾಗಿ ಪೊಲೀಸರು ಸೆಟಲೈಟ್ ಕಾಲ್ ಮಾಡಿದ ತಾಣ ಹುಡುಕಲು ಎರಡು ತಂಡವಾಗಿ ಕಾರ್ಯಾಚರಣೆಗೆ ಇಳಿದರು.
ಒಂದು ತಂಡ ಬಾರೆ ಗ್ರಾಮದ ಅರಣ್ಯದಲ್ಲಿ ಮತ್ತೊಂದು ಅಗಸೂರು ಕಡೆ ಭಾಗದಿಂದ ಅರಣ್ಯ ಪ್ರವೇಶಿಸಿತ್ತು. ಇದರಲ್ಲಿ ಡಿವೈಎಸ್ಪಿ ಶಂಕರ್ ಮಾರಿಹಾಳ್ ತಂಡ ಅರಣ್ಯದಲ್ಲಿ ದಾರಿ ತಪ್ಪಿತ್ತು. ರಾತ್ರಿ ಇಡೀ ಅರಣ್ಯದಲ್ಲಿ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಅರಣ್ಯ ಕೈಗಾ ಯಲ್ಲಾಪುರ ಮಧ್ಯ ಇದೆ. ಬಾರೆ, ಹೆರೂರು ,ವಜ್ರಳ್ಳಿ ಏಕ ಮುಖ ವಾಹನ ಸಂಚಾರದ ಇಕ್ಕಟ್ಟಾದ , ಕಡಿದಾದ ಕಣಿವೆಯ ದಾರಿ. ಇಲ್ಲಿ ಪೊಲೀಸ್ರು ಸೆಟಲೈಟ್ ಕಾಲ್ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್