ಶಿರಸಿ-ಸಿದ್ದಾಪುರದಲ್ಲಿ ಆನೆ ಕಾಟ


Team Udayavani, Nov 18, 2019, 3:23 PM IST

uk-tdy-3

ಶಿರಸಿ: ಆನೆ ಸಾಕೋದೂ ಕಷ್ಟ, ಊರಿಗೆ ಬಂದರೆ ಓಡಿಸೋದೂ ಕಷ್ಟ ಹೀಗೊಂದು ಹೊಸ ಗಾದೆ ಸೃಷ್ಟಿಸುವ ಮಟ್ಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಶಿರಸಿ ತಾಲೂಕಿನ ವಿವಿಧೆಡೆ, ಸಿದ್ದಾಪುರ ತಾಲೂಕಿನ ತ್ಯಾಗಲಿ ಭಾಗದಲ್ಲಿ ಆನೆಗಳ ಹಿಂಡು ಓಡಾಡುತ್ತಿರುವುದು ಉಪ ಅರಣ್ಯ ವಿಭಾಗದ ಅಧಿಕಾರಿಗಳಿಗೆ, ಸಿಬ್ಬಂದಿಗೆ ತಲೆನೋವಾಗಿದೆ.

ಇದೇ ಪ್ರಥಮ ಬಾರಿಗೆ ಮೂರು ದೊಡ್ಡ ಹಾಗೂ ಒಂದು ಮರಿ ಆನೆಯ ಜೊತೆಗೆ ನಾಲ್ಕು ಗಜಗಳ ಹಿಂಡು ದಿಕ್ಕು ತಪ್ಪಿ ಶಿರಸಿ ಭಾಗದ ಉಂಚಳ್ಳಿ, ಕುಳವೆ, ಉಗ್ರೇಮನೆ, ಸಿದ್ದಾಪುರದ ತ್ಯಾಗಲಿ ಪ್ರಾಂತದಲ್ಲಿ ಓಡಾಡುತ್ತಿದ್ದು, ಬನವಾಸಿ ವಲಯರಣ್ಯ ಪ್ರದೇಶದಿಂದ ಶಿರಸಿ ವಲಯಾರಣ್ಯದ ವ್ಯಾಪ್ತಿಗೆ ಸಂಚಾರ ವಿಸ್ತರಿಸಿಕೊಂಡಿದ್ದು ಹೊಸ ಕಾರಿಡಾರ್‌ ಆಗುತ್ತದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಹತ್ತು ದಿನಗಳಲ್ಲಿ 15ಕ್ಕೂ ಅಧಿಕ ರೈತರ ಹೊಲಗಳಿಗೆ ಧಾಂಗುಡಿ ಇಟ್ಟಿದ್ದು, ಸುಮಾರು 20 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ನಾಶವಾಗಿದೆ. ಇವುಗಳ ಸರ್ವೇ ಕಾರ್ಯವನ್ನುಉಭಯ ವಲಯಗಳಲ್ಲೂ ನಡೆಸಲಾಗುತ್ತಿದ್ದರೂ ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ಆನೆಗಳನ್ನು ಊರಿಗೆ ಬಾರದಂತೆ, ಏನೂ ತೊಂದರೆ ಆಗದಂತೆ ನೋಡಿಕೊಳ್ಳುವುದೇ ಇಲಾಖೆಗೆ ಸವಾಲಾಗಿದೆ.

ದೀಪಾವಳಿ ಮುಗಿದರೂ ಪಟಾಕ್ಷಿ ಸದ್ದು ಹಳ್ಳಿಗಳಲ್ಲಿ ನಿಂತಿಲ್ಲ. ಅರಣ್ಯ ಇಲಾಖೆ ಆನೆ ಬೀಡು ಬಿಟ್ಟ ಕಾಡಿನ ಅಂಚಿನಲ್ಲಿ ನಾಲ್ಕು ಜೀಪುಗಳ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಮರಳಿ ಅವುಗಳನ್ನು ಕಾಡಿಗೆ ಬಿಡುವುದು ಧ್ಯೇಯವಾಗಿದೆ. ಪ್ರತೀ ದಿನ ರಾತ್ರಿಯಿಂದ ಬೆಳಗಿನ ತನಕವೂ ಪಟಾಕ್ಷಿ ಹೊಡೆದು ಓಡಿಸವುದೂ ಇಲಾಖೆಯ ಕಾರ್ಯವಾಗಿದೆ.

ಕಳೆದ ಹತ್ತು ದಿನಗಳಲ್ಲಿ ಸುಮಾರು 20 ಸಾವಿರ ರೂ.ಗಳಷ್ಟು ಪಟಾಕ್ಷಿ ಹೊಡೆದು ಆನೆ ಓಡಿಸುತ್ತಿದ್ದು, ಯಾವಾಗ ಮೂಲ ಕಾಡು ಸೇರುತ್ತದೆ ಎಂದೂ ನೋಡುವಂತಾಗಿದೆ. ಆನೆಗಳ ಹಿಂಡು ಉತ್ತರ ಕನ್ನಡದಲ್ಲಿ 18-21 ಇವೆ. ಅಸಲಿಗೆ ಇನ್ನಷ್ಟು ಆನೆಗಳಿವೆ ಎಂಬುದೂ ಹಾಗೂ ಅವುಗಳ ಮೂಲ ಎಲ್ಲಿ ಎಂಬುದೂ ತಿಳಿದಿಲ್ಲ.

ಸಾಮಾನ್ಯವಾಗಿ ಬನವಾಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆಗಳು ಬರುವುದುಂಟು. ಆದರೆ ಶಿರಸಿ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿದ್ದಿಲ್ಲ. ಹೀಗೆ ದಿಕ್ಕು ತಪ್ಪಿ ಬಂದಿರುವ ಆನೆಗಳ ಹಿಂಡು ಬಂದ ಮಾರ್ಗದಲ್ಲಿ ವಾಪಸ್‌ ಸಾಗುವ ಸಾಧ್ಯತೆಗಳಿವೆ. ಹೀಗಾಗಿ ಸೊರಬದ ಕಡೆ ಸಾಗಿದ ಆನೆಗಳು ಪುನಃ ವಾಪಸ್‌ ಬರುತ್ತಿವೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಅಮಿತ್‌ ಚವ್ಹಾಣ. ಆನೆಗಳು ಬಂದಿರುವ ಮಾಹಿತಿ ಆಧರಿಸಿ ಆ ಪ್ರದೇಶಗಳಿಗೆ ಜನರು ಓಡಾಡದಂತೆ ಅರಣ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಅದರಲ್ಲೂ ಅವು ರೈತರ ಜಮಿನುಗಳಿಗೆ ನುಗ್ಗದೇ, ಜನರಿಗೆ ತೊಂದರೆ ಮಾಡದೇ ಅರಣ್ಯಗಳಲ್ಲೇ ತೆರಳುವಂತಾಗಲು ಪಟಾಕಿ ಸಿಡಿಸಲಾಗುತ್ತಿದೆ.

ಅವುಗಳ ಚಲನವಲನಗಮನಿಸಿದರೆ ಪುನಃ ತೆರಳುವ ಸಾಧ್ಯತೆ ಕಂಡುಬರುತ್ತಿದೆ ಎಂಬುದು ಅರಣ್ಯಾಧಿಕಾರಿಗಳ ಲೆಕ್ಕಾಚಾರ.ಈ ಮಧ್ಯೆ ಆನೆಗಳ ಹಿಂಡು ಯಾವುದೇ ಮದದಿಂದ ಇರದೇ ಇರುವುದು ಸಮಾಧಾನದ ಸಂಗತಿ. ಅವು ಮದ ಏರದಂತೆ ನೋಡಿಕೊಳ್ಳಬೇಕಾದ್ದೂ ಜನರ, ಅರಣ್ಯಾಧಿಕಾರಿಗಳ ಕರ್ತವ್ಯ. ಹಾಗಂತ ಮದ ಏರಿದ ಆನೆಗಳನ್ನು ಹಿಡಿದು, ಅರವಳಿಕೆ ನೀಡಿ ತಜ್ಞರ, ಉನ್ನತಾಧಿಕಾರಿಗಳ ಅನುಮತಿ ಪಡೆದು ಸಾಗಾಟ ಮಾಡಬಹುದು. ಆದರೆ, ಸಾಮಾನ್ಯ ಓಡಾಟ ಮಾಡುವ ಆನೆಗಳಿಗೆ ಇಂಥ ಕಾರ್ಯಾಚರಣೆಗೆ ಅವಕಾಶ ಇಲ್ಲ. ಇವುಗಳನ್ನು ಬಂದಲ್ಲಿ ಜಾಗಟೆ, ಪಟಾಕಿ ಹೊಡೆದು ಓಡಿಸುವದೇ ಕೆಲಸವಾಗಿದೆ!

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.