ದಾಂಡೇಲಿ ನಗರ ಸಭೆಗೂ ಗೌರವ ಕೊಡದ ಅರಣ್ಯ ಇಲಾಖೆ
Team Udayavani, Dec 14, 2021, 2:31 PM IST
ದಾಂಡೇಲಿ: ಅರಣ್ಯ ಇಲಾಖೆಯ ಬಹುತೇಕ ಹೆಚ್ಚಿನ ಕಾರ್ಯಕ್ರಮಗಳಿಗೆ ನಗರ ಸಭೆಯ ಸಹಕಾರ ಬೇಕೆ ಬೇಕು. ದಾಂಡೇಲಿ ನಗರಕ್ಕೆ ನಗರ ಸಭೆಯೆ ಪ್ರಧಾನವಾಗಿರುವಾಗ ನಗರ ಸಭೆಗೆ ವಿಶೇಷವಾದ ಗೌರವವಿದೆ. ಆದರೆ ಅರಣ್ಯ ಇಲಾಖೆ ಮಾತ್ರ ನಗರ ಸಭೆಗೆ ಕಿಂಚಿತ್ತು ಗೌರವ ನೀಡದೇ ಮತ್ತು ನಗರ ಸಭೆಗೆ ಹಾಗೂ ತನಗೆ ಸಂಬಂಧವೆ ಇಲ್ಲ ಎಂಬಂತೆ ವರ್ತಿಸತೊಡಗಿದೆ.
ಕಾರಣವಿಷ್ಟೆ ಹಳೆದಾಂಡೇಲಿಯ ಸ್ವಾಮಿಲ್ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ತಡೆಗೋಡೆಯನ್ನು ತೆರವುಗೊಳಿಸುವಂತೆ ನಗರ ಸಭೆಯವರು ಎರಡು ಬಾರಿ ಲಿಖಿತ ಪತ್ರ ನೀಡಿದರೂ ಆ ಪತ್ರಕ್ಕೆ ಸೌಜನ್ಯಕ್ಕಾದರೂ ಮರು ಪತ್ರನೂ ಬರೆಯದೇ ಉದ್ದಟತನ ತೋರಿಸಿರುವುದು ಸ್ಪಷ್ಟವಾಗತೊಡಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಆದೇಶ ಪಾಲಿಸುವುದು, ಹಾಗೂ ತಮ್ಮ ಕೆಲಸ ಆದ್ರೆ ಆಯ್ತು, ಸಾರ್ವಜನಿಕರಿಗೆ ಏನೂ ಬೇಕಾದ್ರೂ ಆಗ್ಲಿ ಎಂಬ ಧೋರಣೆಯಲ್ಲಿರುವುದು ಕಂಡು ಬರುತ್ತಿದೆ. ಎಲ್ಲಿಯವರೆಗೆ ತಡೆಗೋಡೆ ತೊಂದರೆಯಾಗಬಹುದೆಂದರೇ ಅರಣ್ಯ ಇಲಾಖೆಯವರೆ ಕಟ್ಟಿರುವ ಹಾರ್ನಬಿಲ್ ಸಭಾಭವನ ಅರ್ಥತ್ ಕಲ್ಯಾಣ ಮಂಟಪಕ್ಕೂ ಹೋಗಲು ದೇಶಪಾಂಡೆ ನಗರ ಹಾಗೂ ಆ ಕಡೆಯ ಹಳೆದಾಂಡೇಲಿ ಜನರಿಗೆ ಕಷ್ಟವಾಗತೊಡಗಿದೆ.
ಅರಣ್ಯ ಇಲಾಖೆಯವರ ಉದ್ದಟತನಕ್ಕೆ ಹಳೆದಾಂಡೇಲಿಯ ನಾಗರೀಕರು ಒಂದಾಗಿ ಹೋರಾಟದ ಹಾದಿ ಹಿಡಿಯಲಿದ್ದು, ತಡೆಗೋಡೆ ಹಾಕಿದವರಿಂದಲೆ ತೆಗೆಸುವ ಮಟ್ಟಿಗೆ ಜನ ಆಕ್ರೋಶಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ