ಪಲ್ಟಿಯಾದ ದಾಳಿಂಬೆ ಹಣ್ಣಿನ ವಾಹನ: ದಾಳಿಂಬೆ ದೋಚಲು ಮುಗಿಬಿದ್ದ ಜನ!
Team Udayavani, Jan 4, 2020, 12:58 PM IST
ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಿಸಗೋಡು ಕ್ರಾಸ್ ಬಳಿ ದಾಳಿಂಬೆ ತುಂಬಿದ ವಾಹನವೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ದಾಳಿಂಬೆ ತುಂಬಿದ ವಾಹನ ಮಂಗಳೂರಿಗೆ ಸಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಿಸಗೋಡು ಕ್ರಾಸ್ ಬಳಿ ಪಲ್ಟಿಯಾಗಿದೆ.
ವಾಹನ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ದಾಳಿಂಬೆ ಹಣ್ಣು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೆಳಗೆ ಬಿದ್ದ ದಾಳಿಂಬೆ ಹಣ್ನು ಎತ್ತಿಕೊಳ್ಳಲು ಜನರು ನೆರದಿದ್ದರು. ಎಲ್ಲರೂ ತಮಗೆ ಸಿಕ್ಕಿದಷ್ಟು ಹಣ್ಣನ್ನು ಜೇಬಿಗಿಳಿಸಿಕೊಂಡಿದ್ದಾರೆ.
ಗಾಯಾಳುಗಳನ್ನು ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.